Sri Krishna Janmastami Special: ಭಕ್ತವತ್ಸಲ ಕರುಣಾಸಾಗರ

ಶ್ರೀಕೃಷ್ಣನ ಧ್ವನಿಯನ್ನು ಕೇಳುತ್ತಲೇ ಸಂತೋಷಗೊಂಡ ಗೋವುಗಳು ಅಂಬಾ ಎಂದು ಪ್ರತಿಧ್ವನಿಸಿದವು

Team Udayavani, Aug 23, 2024, 6:35 AM IST

Krishna

ಒಮ್ಮೆ ಗೋಪಾಲಕರೆಲ್ಲ ಕಾಡಿನಲ್ಲಿ ಕ್ರೀಡೆಯಲ್ಲಿ ಆಸಕ್ತರಾಗಿದ್ದರು. ಗೋವುಗಳು ಸ್ವತ್ಛಂದವಾಗಿ ವಿಹರಿಸುತ್ತ ಹುಲ್ಲಿನ ಆಸೆಯಿಂದ ಅರಣ್ಯವೊಂದನ್ನು ಪ್ರವೇಶಿಸಿದವು. ಆ ಬೃಹದಾರಣ್ಯದಲ್ಲಿ ಸಮೃದ್ಧವಾಗಿ ಹುಲ್ಲು ಬೆಳೆದಿತ್ತು. ಆಟದಲ್ಲಿ ಆಸಕ್ತರಾಗಿದ್ದ ಗೋಪಾಲಕರಿಗೆ ಗೋವುಗಳು ಇನ್ನೊಂದು ಕಾಡಿಗೆ ಹೋಗಿದ್ದು ಗಮನಕ್ಕೆ ಬರಲಿಲ್ಲ.

ಗೋವುಗಳನ್ನು ಕಾಣದೆ ಗಾಬರಿ ಗೊಂಡರು. ಹುಡುಕಲು ಪ್ರಾರಂಭಿಸಿದರು. ಗೋವುಗಳು ಸಾಗಿದ ದಾರಿಯಲ್ಲಿ ಹೆಜ್ಜೆಗಳನ್ನು ಗುರುತಿಸುತ್ತ ಸಾಗಿದರು. ಆದರೆ ಎಷ್ಟು ದೂರ ಸಾಗಿದರೂ ಗೋವುಗಳು ಕಾಣಲಿಲ್ಲ, ಬಳಲಿ ಬೆಂಡಾದರು. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ನಿರಾಶರಾಗಿ ತಿರುಗಿ ಹೊರಡಲು ನಿಶ್ಚಯಿಸಿದರು.

ಆಗ ಕರುಣಾಮೂರ್ತಿಯಾದ ಶ್ರೀಕೃಷ್ಣ ಇವರನ್ನು ಸಮಾಧಾನಪಡಿಸಿದನು. ಮೇಘದಂತೆ ಗಂಭೀರವಾದ ಧ್ವನಿಯಿಂದ ಗಂಗಾ- ಯಮುನಾ ಮುಂತಾದ ಒಂದೊಂದೇ ನಾಮಗಳಿಂದ ಗೋವುಗಳನ್ನು ಕರೆಯಲಾರಂಭಿಸಿದನು. ಶ್ರೀಕೃಷ್ಣನ ಧ್ವನಿಯನ್ನು ಕೇಳುತ್ತಲೇ ಸಂತೋಷಗೊಂಡ ಗೋವುಗಳು ಅಂಬಾ ಎಂದು ಪ್ರತಿಧ್ವನಿಸಿದವು. ಇದು ಶ್ರೀಕೃಷ್ಣನು ಗೋವುಗಳನ್ನು ಪ್ರೀತಿಸುವ ಬಗೆ.

ಇದನ್ನೇ ನಮ್ಮ ಹರಿದಾಸರು “ಕಾದನಾ ವತ್ಸವ ಹರಿ ಕಾದನಾ’ಎಂದು ವರ್ಣಿಸಿದ್ದಾರೆ. ಶ್ರೀಕೃಷ್ಣನ ಕೊಳಲಿನ ಧ್ವನಿಗೆ ಗೋವುಗಳು ಅತ್ಯಂತ ಹರ್ಷದಿಂದ ಸ್ಪಂದಿಸು ತ್ತಿದ್ದವು. ಗೋವುಗಳು ದಟ್ಟಾರಣ್ಯದಿಂದ ವಾಪಸಾಗುತ್ತಿರುವಂತೆಯೇ ಕಾಳ್ಗಿಚ್ಚು ಉಲ್ಬಣಗೊಂಡು ಗಿಡ-ಮರಗಳನ್ನು, ಪಶು-ಪಕ್ಷಿಗಳನ್ನು ನಾಶಮಾಡುತ್ತಾ ಸಾಗಿತು. ಈ ಭಯಾನಕವಾದ ಕಾಳ್ಗಿಚ್ಚು ನೋಡಿ ಭಯಭೀತವಾದ ಗೋವುಗಳು ಮತ್ತು ಗೋಪಾಲಕರು ಆಕ್ರಂದನವನ್ನು ಮಾಡಿದರು. ಶ್ರೀಕೃಷ್ಣನನ್ನು ಶರಣು ಹೊಂದಿದರು. ಆಗ ಕೃಪಣವತ್ಸಲನಾದ ಶ್ರೀಕೃಷ್ಣನು ಅವರಿಗೆಲ್ಲ ಧೈರ್ಯದಿಂದಿರಲು ತಿಳಿಸಿ ಕಣ್ಣು ಮುಚ್ಚಿಕೊಳ್ಳುವಂತೆ ಹೇಳಿದನು.

ಯೋಗೇಶ್ವರನಾದ ಶ್ರೀಕೃಷ್ಣನು ಹಬ್ಬಿರುವ ಅತ್ಯಂತ ಕ್ರೂರವಾದ ಬೆಂಕಿಯನ್ನು ಅನಾಯಾಸವಾಗಿ ಪಾನ ಮಾಡಿದನು. ಈ ಮೂಲಕ ಆ ಗೋಪಾಲಕರು ಮತ್ತು ಗೋವುಗಳನ್ನು ರಕ್ಷಿಸಿದನು. ಶ್ರೀಕೃಷ್ಣನ ರಕ್ಷಣೆಯಲ್ಲಿ ಗೋವುಗಳು ಸಂತೋಷದಿಂದ ಸಂಚರಿಸಿದವು. ಶ್ರೀಕೃಷ್ಣನ ಅಗಮ್ಯವಾದ ಈ ಮಹಿಮೆಯನ್ನು ನೋಡಿದ ಗೋಪಾಲಕರಿಗೆ ಎಲ್ಲಿಲ್ಲದ ಆನಂದ. ಭಕ್ತರ ಸಂಸಾರವೆಂಬ ಕಾಳ್ಗಿಚ್ಚು ನುಂಗಿ ಅನುಗ್ರಹಿಸುವ ದೇವನಿಗೆ ಇದೇನೂ ಅಚ್ಚರಿಯ ವಿಷಯವಲ್ಲ.

-ಡಾ| ಬಿ.ಗೋಪಾಲಾಚಾರ್‌
ನಿರ್ದೇಶಕರು, ಶ್ರೀವಾದಿರಾಜ ಸಂಶೋಧನ ಪ್ರತಿಷ್ಠಾನ, ಉಡುಪಿ

ಟಾಪ್ ನ್ಯೂಸ್

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು

Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.