Ullal: ಈ ಚಿತಾಗಾರದಲ್ಲಿ ಇದುವರೆಗೆ ಒಂದೂ ಹೆಣಸುಟ್ಟಿಲ್ಲ

30 ತಿಂಗಳ ಹಿಂದೆ 1.9 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಉಳ್ಳಾಲ ಚೆಂಬುಗುಡ್ಡೆ ವಿದ್ಯುತ್‌ ಚಿತಾಗಾರ ವ್ಯರ್ಥ

Team Udayavani, Aug 23, 2024, 12:25 PM IST

Ullal: ಈ ಚಿತಾಗಾರದಲ್ಲಿ ಇದುವರೆಗೆ ಒಂದೂ ಹೆಣಸುಟ್ಟಿಲ್ಲ

ಉಳ್ಳಾಲ: ಉಳ್ಳಾಲದ ಚೆಂಬುಗುಡ್ಡೆಯಲ್ಲಿ ಒಂದು ಅತ್ಯಾಧುನಿಕ ವಿದ್ಯುತ್‌ ಚಿತಾಗಾರವಿದೆ. ಕಳೆದ ಎರಡೂವರೆ ವರ್ಷದ ಹಿಂದೆ ಇನ್ಫೋಸಿಸ್‌ ಫೌಂಡೇಷನ್‌ನಿಂದ 1.93 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಚಿತಾಗಾರವಿದು. ಆದರೆ, ಅಚ್ಚರಿ ಎಂದರೆ, ಇದುವರೆಗೆ ಈ ಚಿತಾಗಾರದಲ್ಲಿ ಒಂದೇ ಒಂದು ಹೆಣವನ್ನೂ ಸುಟ್ಟಿಲ್ಲ! ಇದಕ್ಕೆ ಕಾರಣ ಈ ಚಿತಾಗಾರದಲ್ಲಿ ಹೆಣ ಸುಡಲು ಹಿಂದೇಟು ಹಾಕುತ್ತಿರುವುದು!

ಮಹಾನಗರಗಳಲ್ಲಿ ವಿದ್ಯುತ್‌ ಚಿತಾಗಾರಗಳು ಸಾಮಾನ್ಯ. ಆದರೆ ನಗರಸಭಾ ವ್ಯಾಪ್ತಿಯಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಿಸಿದ ಪ್ರಥಮ ನಗರಸಭೆ ಎಂದು ಹೆಗ್ಗಳಿಕೆ ಉಳ್ಳಾಲಕ್ಕೆ ಸಂದಿತ್ತು. ಆದರೆ, ಇದೀಗ ವಿದ್ಯುತ್‌ ಚಿತಾಗಾರ ನಿರ್ಮಾಣಗೊಂಡು ಎರಡೂವರೆ ವರ್ಷವಾದರೂ ಈವರೆಗೆ ಒಂದು ಮೃತದೇಹವನ್ನು ವಿದ್ಯುತ್‌ ಚಿತಾಗಾರದಲ್ಲಿ ಸುಡಲಾಗಿಲ್ಲ!‌ ವಿದ್ಯುತ್‌ ಚಿತಾಗಾರ ಕೆಲಸವಿಲ್ಲದೆ ತುಕ್ಕು ಹಿಡಿಯುತ್ತಿದ್ದು, ಪ್ರತೀ ತಿಂಗಳು ವಿದ್ಯುತ್‌ ಬಿಲ್‌ ಮಾತ್ರ ಸರಿಯಾದ ಸಮಯಕ್ಕೆ ಪಾವತಿ ಮಾಡಲೇ ಬೇಕಾಗಿದೆ. ಇದು ನಗರಸಭೆಗೆ ಅನಗತ್ಯ ಹೊರೆಯಾಗಿದೆ.

2021ರ ಕೊರೊನಾದ ಸಂದರ್ಭದಲ್ಲಿ ಉಳ್ಳಾಲದಲ್ಲೂ ಮೃತದೇಹಗಳ ಸಂಖ್ಯೆ ಹೆಚ್ಚಾದಾಗ ವಿದ್ಯುತ್‌ ಚಿತಾಗಾರ ನಿರ್ಮಾಣ ಮಾಡಿದರೆ, ಭವಿಷ್ಯದಲ್ಲಿ ಇಂತಹ ಸಮಸ್ಯೆಗಳನ್ನು ಎದುರಿಸಬಹುದು ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಹಿಂದೂ ರುದ್ರಭೂಮಿ ಸಮಿತಿಯ ಆಗ್ರಹದಂತೆ 2021ರ ಫೆಬ್ರವರಿಯಲ್ಲಿ ಉಳ್ಳಾಲದ ಚೆಂಬುಗುಡ್ಡೆಯಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಯಿತು.

ಈ ಯೋಜನೆಯಂತೆ ಇನ್ಫೋಸಿಸ್‌ ಫೌಂಡೇಷನ್‌ ಮೇ ತಿಂಗಳಲ್ಲಿ ಸಿಎಸ್‌ಆರ್‌ ಫಂಡ್‌ನ‌ಡಿಯಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಾಣ ಕಾರ್ಯಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದ್ದು ಜೂನ್‌ನಲ್ಲಿ ಆರಂಭಗೊಂಡು ರಾತ್ರಿ ಹಗಲು ಕಾಮಗಾರಿ ನಡೆದು ಆರು ತಿಂಗಳಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಾಣವಾಗಿದ್ದು, 2022ರ ಫೆಬ್ರವರಿಯಲ್ಲಿ ಉದ್ಘಾಟನೆಗೊಂಡಿತ್ತು.

ಎಲ್ಲರಿಗೂ ಕಟ್ಟಿಗೆ ಚಿತಾಗಾರ ಬೇಕು! ಕೊರೊನಾ ಪೂರ್ವದಲ್ಲಿ ಚೆಂಬುಗುಡ್ಡೆ ಹಿಂದೂ ರುದ್ರಭೂಮಿಗೆ ಬರುವ ಮೃತದೇಹಗಳ ಸರಾಸರಿ ಆಧಾರದಲ್ಲಿ ವಿದ್ಯುತ್‌ ಚಿತಾಗಾರ ನಿರ್ಮಾಣವಾಗಿತ್ತು. ಉಳ್ಳಾಲದಲ್ಲಿ ಸಾಮಾನ್ಯವಾಗಿ ಕಟ್ಟಿಗೆಯಲ್ಲಿ ಮೃತದೇಹವನ್ನು ಸುಡಲು ಮೃತರ ಸಂಬಂಧಿಕರ ಪ್ರಥಮ ಆದ್ಯತೆ ಯಾಗಿದ್ದರಿಂದ ವಿದ್ಯುತ್‌ ಚಿತಾಗಾರಕ್ಕೆ ಯಾರೂ ಹೆಣ ತರುತ್ತಿಲ್ಲ. ವಿದ್ಯುತ್‌ ಚಿತಾಗಾರ ತುಕ್ಕುಹಿಡಿಯುತ್ತಿದ್ದು, ಇದೇ ರೀತಿ ಮುಂದುವರೆದರೆ ಇನ್ನೆರಡು ವರುಷದಲ್ಲಿ ಚಿತಾಗಾರ ಸಂಪೂರ್ಣ ಹಾಳಾಗಲಿದೆ. ವಿದ್ಯುತ್‌ ಚಿತಾಗಾರಕ್ಕೆ ದಿನಕ್ಕೆ ಸರಾಸರಿ ಐದಕ್ಕೂ ಹೆಚ್ಚು ಮೃತದೇಹಗಳು ಬಂದರೆ ಮಾತ್ರ ಕಡಿಮೆ ದರದಲ್ಲಿ ಸುಡಲು ಸಾಧ್ಯವಿದೆ. ಸಿಬಂದಿ ನೇಮಕವಾದರೆ ಅವರ ಸಂಬಳಕ್ಕೂ ಹಣ ಇಡಬೇಕಾಗಿದೆ. ಉಳ್ಳಾಲ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಹಿಂದೂ ರುದ್ರಭೂಮಿ ಇರುವ ಕಾರಣ ವಿದ್ಯುತ್‌ ಚಿತಾಗಾರ ಯೋಜನೆ ನಿರರ್ಥಕವಾಗಿದೆ.

ನಗರಸಭೆಗೆ ವಿದ್ಯುತ್‌ ಬಿಲ್‌ ಹೊರೆ

2022ರ ಜನವರಿಯಿಂದ ಈ ವಿದ್ಯುತ್‌ ಚಿತಾಗಾರಕ್ಕೆ 75 ಕಿ. ವ್ಯಾ. ವಿದ್ಯುತ್‌ ಸಾಮರ್ಥ್ಯ ನೀಡಿದ್ದು, ಪ್ರತೀ ತಿಂಗಳು 25 ಸಾವಿರದಿಂದ 30 ಸಾವಿರ ವಿದ್ಯುತ್‌ ಬಿಲ್‌ ಮೆಸ್ಕಾಂಗೆ ನಗರಸಭೆ ಪಾವತಿ ಮಾಡಲೇಬೇಕಾಗಿದೆ. ಕಳೆದ ಎರಡೂವರೆ ವರ್ಷದಲ್ಲಿ ಸುಮಾರು 8 ಲಕ್ಷ ರೂ. ವರೆಗೆ ವಿದ್ಯುತ್‌ ಬಿಲ್‌ ಪಾವತಿ ಮಾಡಿದೆ.

ಜನರಿಗೆ ಮಾಹಿತಿ ಕೊಡುತ್ತೇವೆ
ಚೆಂಬುಗುಡ್ಡೆಯ ವಿದ್ಯುತ್‌ ಚಿತಾಗಾರದ ಕುರಿತು ಜನರಿಗೆ ಮಾಹಿತಿ ಕೊಡುವ ಕೆಲಸದೊಂದಿಗೆ ಸಪ್ಟೆಂಬರ್‌ ತಿಂಗಳಿನಲ್ಲಿ ಕೌನ್ಸಿಲ್‌ ಸಭೆಯ ನಿರ್ಣಯದೊಂದಿಗೆ ಉಳ್ಳಾಲ ನಗರಸಭೆ, ನಿರ್ವಹಣಾ ಸಮಿತಿಯೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ವಾಣಿ ವಿ. ಆಳ್ವ, ಪೌರಾಯುಕ್ತೆ ಉಳ್ಳಾಲ ನಗರಸಭೆ

75 ಸಾವಿರ ರೂ. ವರೆಗೆ ವೆಚ್ಚ
ಹಲವು ದಶಕಗಳ ಇತಿಹಾಸವಿರುವ ಹಿಂದೂ ರುದ್ರಭೂಮಿಯಲ್ಲಿ ವಿದ್ಯುತ್‌ ಚಿತಾಗಾರ ನಿರ್ವಹಣೆಗೆ ಇಬ್ಬರು ಸಿಬಂದಿ ವೇತನ ಮತ್ತು ವಿದ್ಯುತ್‌ ಬಿಲ್‌ಗೆ ಪ್ರತೀ ತಿಂಗಳು 75 ಸಾವಿರ ರೂ.ವರೆಗೆ ವೆಚ್ಚ ತಗುಲಲಿದ್ದು, ಸಮಿತಿಗೆ ಇಷ್ಟೊಂದು ಹಣ ನಿರ್ವಹಣೆಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಉಳ್ಳಾಲ ನಗರಸಭೆಗೆ ಲಿಖೀತವಾಗಿ ಚಿತಾಗಾರವನ್ನು ನಿರ್ವಹಿಸಲು ಮನವಿ ಮಾಡಿದೆ. ತುಕ್ಕು ಹಿಡಿಯುವ ಮೊದಲೇ ಚಿತಾಗಾರ ಆರಂಭಿಸಲು ಕ್ರಮಕೈಗೊಳ್ಳಬೇಕು.
-ಚಂದ್ರಹಾಸ ಉಳ್ಳಾಲ, ರುದ್ರಭೂಮಿ ನಿರ್ವಹಣ ಸಮಿತಿ

-ವಸಂತ್‌ ಎನ್‌.ಕೊಣಾಜೆ

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.