ಧಾರವಾಡ: ಕೃಷಿ ವಿವಿಯಿಂದ 2 ಹೊಸ ಜೋಳದ ತಳಿ ಶೋಧನೆ


Team Udayavani, Aug 23, 2024, 2:20 PM IST

ಧಾರವಾಡ: ಕೃಷಿ ವಿವಿಯಿಂದ 2 ಹೊಸ ಜೋಳದ ತಳಿ ಶೋಧನೆ

■ ಉದಯವಾಣಿ ಸಮಾಚಾರ
ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಅವರು ಆ.11ರಂದು 109 ನೂತನ ತಳಿಗಳನ್ನು ಬಿಡುಗಡೆ ಮಾಡಿದ್ದು, ಈ ಪೈಕಿ ಇಲ್ಲಿನ ಕೃಷಿ ವಿವಿಯ ಎರಡು ಹೊಸ ತಳಿ ಎಂಬುದು ವಿಶೇಷ. ಏಕದಳ ಧಾನ್ಯ ಮತ್ತು ಸಿರಿಧಾನ್ಯಗಳಲ್ಲಿ ಕೃಷಿ ವಿವಿ ವಿಜ್ಞಾನಿಗಳಿಂದ ಅಭಿವೃದ್ಧಿ ಪಡಿಸಿದ ತಳಿಗಳಾದ ಮುಂಗಾರು ಜೋಳದ ತಳಿ ಡಿಎಸ್‌ ಎಚ್‌-6 (ಸಿಎಸ್‌ಎಚ್‌-49) ಮತ್ತು ಬರಗು ತಳಿಗಳು ಸಿಪಿಆರ್‌ಎಂವಿ-1 (ಡಿಎಚ್‌ಪಿಎಂ 60-4) ಸೇರಿವೆ. ಈ ತಳಿಗಳನ್ನು ಅಭಿವೃದ್ಧಿಪಡಿಸಿದ ನಂತರ ಕೇಂದ್ರದಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿ 5 ವರ್ಷಗಳ ಸತತ ಪ್ರಯೋಗಗಳ ಫಲಿತಾಂಶವನ್ನು ಕೂಲಂಕುಶವಾಗಿ ವಿಶ್ಲೇಷಿಸಿ, ವಿವಿಧ ಸಭೆಗಳಲ್ಲಿ ಚರ್ಚಿಸಿ ರಾಷ್ಟ್ರಮಟ್ಟದ ತಳಿ ಬಿಡುಗಡೆ ಸಮಿತಿಗೆ (ಸಿವಿಆರ್‌ಸಿ) ಸಲ್ಲಿಸಲಾಗಿತ್ತು.

ಆ.2ರಂದು ನಡೆದ 92ನೇ ರಾಷ್ಟ್ರದ ಕೇಂದ್ರೀಯ ತಳಿ ಬಿಡುಗಡೆ ಸಮಿತಿಯಲ್ಲಿ ಈ ಎರಡು ತಳಿಗಳು ಬಿಡುಗಡೆಯಾಗಿವೆ. ಬಳಿಕ ಈ
ತಳಿಗಳನ್ನು ನರೇಂದ್ರ ಮೋದಿ ಅವರು ಆ.11ರಂದು ಲೋಕಾರ್ಪಣೆ ಮಾಡಿದ್ದಾರೆ. ದೇಶದ ಕೃಷಿ ಪ್ರಗತಿಗೆ ಪೂರಕ ಹಾಗೂ ಹವಾಮಾನ ವೈಪರೀತ್ಯಗಳಿಗೆ ಒಗ್ಗಿಕೊಂಡು ಬೆಳೆಯುವ ಅಧಿಕ ಪೌಷ್ಟಿಕ ಮೌಲ್ಯ ಹೊಂದಿರುವ ಇಂತಹ ತಳಿಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬರಲಿ ಎಂದು ಕೃಷಿ ವಿವಿ ಕುಲಪತಿ ಡಾ| ಪಿ.ಎಲ್‌.ಪಾಟೀಲ ಆಶಿಸಿದ್ದಾರೆ.

ಮುಂಗಾರು ಜೋಳದ ತಳಿ: ಡಿಎಸ್‌ಎಚ್‌-6
ರಾಷ್ಟ್ರಮಟ್ಟದಲ್ಲಿ ಈ ಸಂಕರಣ ತಳಿಯನ್ನು ಐದು ರಾಜ್ಯಗಳ (ಕರ್ನಾಟಕ, ತಮಿಳುನಾಡು, ರಾಜಸ್ಥಾನ, ತೆಲಂಗಾಣ ಹಾಗೂ ಗುಜರಾತ) ಮುಂಗಾರು ಜೋಳ ಬೆಳೆಯುವ ಪ್ರದೇಶಕ್ಕೆ ಶಿಫಾರಸು ಮಾಡಲಾಗಿದೆ. ಸರಾಸರಿ ಪ್ರತಿ ಹೆಕ್ಟೆರ್‌ಗೆ 38ರಿಂದ 42 ಕ್ವಿಂಟಲ್‌ ಕಾಳಿನ ಹಾಗೂ 110ರಿಂದ 120 ಕ್ವಿಂಟಲ್‌ ಮೇವಿನ ಇಳುವರಿ ಕೊಡುತ್ತದೆ. ಇದು ರಾಷ್ಟ್ರಮಟ್ಟದಲ್ಲಿ ಮೊದಲಿನ ಉತ್ತಮ ಸಂಕರಣ ತಳಿ ಸಿಎಸ್‌ಎಚ್‌-30ಕ್ಕಿಂತ ಶೇ.13.5 ಹೆಚ್ಚು ಕಾಳಿನ ಹಾಗೂ ಶೇ.7.4 ಹೆಚ್ಚು ಮೇವಿನ ಇಳುವರಿ ನೀಡುತ್ತದೆ. ಇದು
ಅಲ್ಪಾವಧಿ ತಳಿಯಾಗಿದ್ದು ತಕ್ಕಮಟ್ಟಿಗೆ ಕಾಳಿನ ಬೂಳಸು(ಕಾಳು ಕಪ್ಪಾಗುವುದು)ರೋಗವನ್ನು ತಡೆದುಕೊಳ್ಳುತ್ತದೆ.

ಸಿರಿಧಾನ್ಯದ ಬರಗು:ಡಿಎಚ್‌ಪಿಎಂ 60-4 (ಸಿಪಿಆರ್‌ಎಂವ್ಹಿ-1)
ರಾಷ್ಟ್ರಮಟ್ಟದಲ್ಲಿ ಈ ತಳಿಯನ್ನು ಕರ್ನಾಟಕ ಹಾಗೂ ತಮಿಳುನಾಡಿನ ಮಳೆಯಾಶ್ರಿತ ಪ್ರದೇಶಕ್ಕೆ ಬಿಡುಗಡೆ ಮಾಡಲಾಗಿದೆ. ಪ್ರತಿ ಹೆಕ್ಟೆರ್‌ಗೆ 24-26 ಕ್ವಿಂಟಲ್‌ ಕಾಳಿನ ಹಾಗೂ 43ರಿಂದ 45 ಕ್ವಿಂಟಲ್‌ ಮೇವಿನ ಇಳುವರಿ ಕೊಡುತ್ತದೆ. ಇದು ರಾಷ್ಟ್ರಮಟ್ಟದಲ್ಲಿ
ಉತ್ತಮ ತಳಿಯಾದ ಟಿಎನ್‌ ಎಯು-164ಕ್ಕಿಂತ ಶೇ.20.8ಕಾಳಿನ ಮತ್ತು ಶೇ.3.7 ಅಧಿಕ ಮೇವಿನ ಇಳುವರಿ ನೀಡುತ್ತದೆ. ತಕ್ಕಮಟ್ಟಿಗೆ ಈ ತಳಿಯು ಸುಳಿ ಬಾಧೆಯನ್ನು ತಡೆದುಕೊಳ್ಳುತ್ತದೆ.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: ತತ್ವಶಾಸ್ತ್ರವೇ ನನ್ನ ಕಾದಂಬರಿಗಳ ಮೂಲಸೆಲೆ: ಎಸ್.ಎಲ್.ಬೈರಪ್ಪ

Dharwad: ತತ್ವಶಾಸ್ತ್ರವೇ ನನ್ನ ಕಾದಂಬರಿಗಳ ಮೂಲಸೆಲೆ: ಎಸ್.ಎಲ್.ಭೈರಪ್ಪ

basavaraj

Dharwad; ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಸಿಎಂಗೆ ಪತ್ರ: ಹೊರಟ್ಟಿ

Hubli: ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸೆ.22ರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

Hubli: ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸೆ.22ರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

mutalik (2)

B.C.Road ಏನು ಅಫ್ಘಾನಿಸ್ಥಾನ,ಪಾಕಿಸ್ಥಾನದಲ್ಲಿ ಇದೆಯಾ?: ಮುತಾಲಿಕ್ ಕಿಡಿ

ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ

Hubli: ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.