Krishna Janmashtami: ಯಶೋದಾ ಕೃಷ್ಣ ಸ್ಪ ರ್ಧೆಗೆ ಫೋಟೋ ಕಳಿಸಿ ಬಹುಮಾನ ಗೆಲ್ಲಿ
Team Udayavani, Aug 24, 2024, 11:50 AM IST
ಮಣಿಪಾಲ: ಶ್ರೀ ಕೃಷ್ಣ ಜನ್ಮಾಷ್ಟಮಿ ಊರಿಗೆಲ್ಲ ಹಬ್ಬ. ಮಕ್ಕಳಿಗೆ ಶ್ರೀ ಕೃಷ್ಣ, ರಾಧೆಯ ವೇಷ ಧರಿಸುವ ಸಡಗರವಾದರೆ, ತಾಯಂದಿರಿಗೆ ಹಬ್ಬದ ತಯಾರಿ ಯೊಂದಿಗೆ ಯಶೋದೆಯಾಗುವ ತವಕ. ಈ ಹಬ್ಬದ ಸಂಭ್ರಮ ಹೆಚ್ಚಿಸಲೆಂದೇ ಉದಯವಾಣಿಯ ಪ್ರತಿಷ್ಠಿತ ಯಶೋದಾ ಕೃಷ್ಣ ಫೋಟೋ ಸ್ಪರ್ಧೆ ಮತ್ತೆ ಬಂದಿದೆ.
ಮಕ್ಕಳನ್ನು ಮುದ್ದು ಕೃಷ್ಣರಾಗಿ ರೂಪಿಸುವ ತಾಯಂದಿರೂ ಯಶೋಧೆಯಾಗಿ ಜತೆಗೆ ಸಂಭ್ರಮಿಸಲು ಉದಯವಾಣಿ ಹಾಗೂ ಉದಯ ಕಿಚನ್ನೆಕ್ಸ್ಟ್ ವೇದಿಕೆ ಕಲ್ಪಿಸುತ್ತಿದೆ. ಯಶೋದಾ ಕೃಷ್ಣ ಸ್ಪರ್ಧೆ-2024ಕ್ಕೆ “ತಾಯಿ ಯಶೋದೆಯೊಂದಿಗೆ ಬಾಲಕೃಷ್ಣ ಲೀಲೆಗಳು’ ಎಂಬ ಥೀಮ್ನಡಿ ಈ ವರ್ಷ ಚಿತ್ರಗಳನ್ನು ಕಳುಹಿಸಿ ಬಹುಮಾನ ಗೆಲ್ಲಬಹುದು. ಈಗಾಗಲೇ ದಕ್ಷಿಣ ಕನ್ನಡ, ಉಡುಪಿ ಮಾತ್ರವಲ್ಲದೆ ಕಾಸರಗೋಡು, ಕೊಡಗು ಜಿಲ್ಲೆಗಳಿಂದಲೂ ಚಿತ್ರಗಳು ಬರಲಾರಂಭಿಸಿವೆ. ಚಿತ್ರಗಳನ್ನು ಕಳುಹಿಸಲು ಆ.28 ಕೊನೆಯ ದಿನ.
ತಾಯಿ ಮತ್ತು ಮಗುವಿಗಾಗಿಯೇ ಇರುವ ಅನುಪ ಮವಾದ ಫೋಟೋ ಸ್ಪರ್ಧೆಯಿದು. ತಾಲೂಕು ವಾರು 3 ಮೆಚ್ಚುಗೆ ಚಿತ್ರಗಳನ್ನು ಆಯ್ಕೆ ಮಾಡಿ ವಿಶೇಷ ಸ್ಮರಣಿಕೆ ಮತ್ತು ಪ್ರಮಾಣಪತ್ರ ನೀಡಿ ಅಭಿನಂದಿಸಲಾಗುತ್ತದೆ.
ನಿಯಮಗಳು
ಚಿತ್ರಗಳು ಸ್ವಾಭಾವಿಕವಾಗಿದ್ದು, ಈ ಸ್ಪರ್ಧೆಗೆಂದೇ ತೆಗೆದಿರಬೇಕು.
ಚಿತ್ರಗಳು ಥೀಮ್ ಗೆ ಸೂಕ್ತವಾಗಿರ ಬೇಕು. ಕರಿಸಿರಬೇಕು.
ಕೃಷ್ಣ 5 ವರ್ಷದೊಳಗಿರಬೇಕು. ಯಶೋದೆಗೆ ವಯಸ್ಸಿನ ನಿರ್ಬಂಧ ಇಲ್ಲ(ಹಾಗೆಂದು ಅಕ್ಕ-ತಂಗಿ ವಯಸ್ಸಿನವರನ್ನು ಯಶೋದೆ ಎಂದು ಪರಿಗ ಣಿಸಲಾಗದು)
ಇ-ಮೇಲ್ ಮೂಲಕ ಕಳುಹಿಸುವ ಚಿತ್ರಗಳು ಕನಿಷ್ಠ 1 ಎಂ.ಬಿ. ಇರಲಿ. ವಾಟ್ಸ್ ಆ್ಯಪ್ಗೆ ಉತ್ತಮ ಗುಣಮಟ್ಟದ (ರೆಸಲ್ಯೂಶನ್) ಚಿತ್ರ ಕಳುಹಿಸಿ. ಒಬ್ಬ ಸ್ಪರ್ಧಿ 6 ಭಂಗಿಯ ಚಿತ್ರಗಳನ್ನು ಕಳುಹಿಸಬಹುದು.
ಯಶೋದಾ ಕೃಷ್ಣರ ಹೆಸರು, ಊರು, ವಿಳಾಸ ಸಂಪರ್ಕ ಸಂಖ್ಯೆ ಇರದ ಮತ್ತು ಹಳೆಯ ಫೋಟೋಗಳನ್ನು ಪರಿಗಣಿ ಸುವುದಿಲ್ಲ.
ಫೋಟೋಗಳನ್ನು [email protected] ಇಮೇಲ್ ಅಥವಾ ವಾಟ್ಸ್ ಆ್ಯಪ್ ಸಂಖ್ಯೆ 6362906068ಕ್ಕೆ ಕಳುಹಿಸಿಕೊಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.