C Movie Reciew; ಭಾವನೆ ಅರಳಿಸುವ ಬಾಂಧವ್ಯ
Team Udayavani, Aug 24, 2024, 12:15 PM IST
ಚಂದನವನದಲ್ಲಿ ಹೊಸ ಪ್ರತಿಭೆಗಳಿಗೇನು ಕಮ್ಮಿ ಇಲ್ಲ. ದೊಡ್ಡ ಚಿತ್ರಗಳ ನಡುವೆಯೂ ಅಲ್ಲಲ್ಲಿ ಬರುವ ಹೊಸಬರ ಸಿನಿಮಾಗಳು ತಮ್ಮ ಕಥೆಗಳಿಂದ ಸದ್ದು ಮಾಡುತ್ತಿವೆ. ಕಥೆ ಸರಳವಾಗಿದ್ದರೂ ಅದನ್ನು ಭಿನ್ನ, ವಿಶೇಷವಾಗಿ ನಿರೂಪಿಸುವ ಖಯಾಲಿ ಹೊಸ ಪೀಳಿಗೆಯ ನಿರ್ದೇಶಕರದ್ದು. ಹೀಗೆ ಕನ್ನಡಕ್ಕೆ ಬಂದ ಹೊಸ ಕಥೆಯೇ “ಸಿ’.
ಅವರಿಬ್ಬರು ತಂದೆ ಮಗಳಲ್ಲ. ಆದರೂ ಆತ ಕಣ್ಣ ರೆಪ್ಪೆಯಂತೆ ಆಕೆಯನ್ನು ಜೋಪಾನ ಮಾಡುತ್ತಾನೆ. ಈಕೆಯೂ ಮಗಳಂತೆ ಅಕ್ಕರೆ ತೋರುತ್ತಾಳೆ. ಇವರಿಬ್ಬರ ಭೇಟಿ ಆಕಸ್ಮಿಕ. ದೃಷ್ಟಿ ಕಳೆದುಕೊಂಡ ಮಗುವೊಂದನ್ನು ಹೆತ್ತವರಿಗಿಂತ ಹೆಚ್ಚಾಗಿ ಸಾಕಿ ಸಲಹುತ್ತಾನೆ. ಅವಳಿಗೆ ದೃಷ್ಟಿ ಮರಳಿಸಲು ಆತ ಪಡುವ ಪಾಡು ಅಷ್ಟಿಷ್ಟಲ್ಲ. ಅಷ್ಟಕ್ಕೂ ಆತ ಯಾರು? ಆ ಮಗು ಯಾರು? ಎಂದು ತಿಳಿಯಲು “ಸಿ’ ಚಿತ್ರ ನೋಡಬೇಕು. “ಸಿ’ ಶೀರ್ಷಿಕೆಯಿಂದಲೇ ಈ ಚಿತ್ರ ಹೊಸತೆನಿಸುತ್ತದೆ. ಇಲ್ಲಿ ತಂದೆ-ಮಗಳ ಬಾಂಧವ್ಯವಿದೆ, ಕಥೆ ಸಾಗುತ್ತಿದ್ದಂತೆ ಮುಂದೆನಾಗುತ್ತದೆ ಎಂಬ ಕುತೂಹಲ ಅಂಶಗಳಿವೆ, ಮನ ತಟ್ಟುವ ಕಥೆ, ಅದಕ್ಕೆ ತಕ್ಕ ಅಭಿನಯವೂ ಇದೆ. ಮೆಡಿಕಲ್ ಮಾಫಿಯಾ ಬಗ್ಗೆ ಒಂದಿಷ್ಟು ಬೆಳಕು ಚೆಲ್ಲುತ್ತದೆ ಈ ಚಿತ್ರ.
ನಿರ್ದೇಶನ ಹಾಗೂ ನಾಯಕ ನಟ ಎರಡೂ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸಿರುವ ಕಿರಣ್ ಸುಬ್ರಮಣಿ ಭರವಸೆ ಮೂಡಿಸಿದ್ದಾರೆ. ಬಾಲನಟಿ ಸಾನ್ವಿಕಾ ಅಭಿನಯ ಚಿತ್ರದ ಇನ್ನೊಂದು ಹೈಲೈಟ್. ಎ.ಬಿ. ಮುರಳೀಧರನ್ ಅವರ ಸಂಗೀತದಲ್ಲಿ ಮೂಡಿ ಬಂದ ಹಾಡುಗಳು ಗಮನ ಸೆಳೆಯುತ್ತವೆ. ಉಳಿದಂತೆ ಪ್ರಶಾಂತ್ ನಟನ, ಶ್ರೀಧರ ರಾಮ್ ಮಧುಮಿತಾ, ನಿರ್ಮಲಾ, ಆರ್ಯ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ನಿತೀಶ ಡಂಬಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ನಿಗಮ – ಮಂಡಳಿಗಳ ನಿರ್ದೇಶಕ,ಸದಸ್ಯರ ಆಯ್ಕೆ ಮತ್ತಷ್ಟು ವಿಳಂಬ?
Instagram: ಹದಿಹರೆಯದವರಿಗೆಂದೇ ವಿಶೇಷ ಇನ್ಸ್ಟಾಗ್ರಾಂ ಖಾತೆ; ಮಕ್ಕಳ ಸುರಕ್ಷತೆಗಾಗಿ ಕ್ರಮ
Assembly Election: ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಹಬ್ಬ
Delhi CM; ಕೇಜ್ರಿವಾಲ್ರನ್ನು ಮತ್ತೆ ಸಿಎಂ ಮಾಡುವುದೇ ಗುರಿ: ಆತಿಷಿ
Drought; ನಮೀಬಿಯಾ ಆಯ್ತು, ಈಗ ಜಿಂಬಾಬ್ವೆಯಲ್ಲಿ 200 ಆನೆಗಳ ಹತ್ಯೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.