Krishna Janmashtami 2024: ಬಾಲ ಗೋಪಾಲನ ವಿಶಿಷ್ಟಾವತಾರಗಳು- ಕೃಷ್ಣನ ಕೊಳಲಿನ ಧನಿ

8ನೇ ಮಗುವಿನೆ ನಿರೀಕ್ಷೆಯಲ್ಲಿ ಸಹೋದರ ಕಂಸ ಹಗಲು ಇರಳು ಎಣಿಸುತ್ತಿರುತ್ತಾನೆ.

Team Udayavani, Aug 24, 2024, 1:51 PM IST

Krishna Janmashtami 2024: ಬಾಲ ಗೋಪಾಲನ ವಿಶಿಷ್ಟಾವತಾರಗಳು- ಕೃಷ್ಣನ ಕೊಳಲಿನ ಧನಿ

ಶ್ರೀ ಕೃಷ್ಣ ಜನ್ಮಾಷ್ಟಮಿ, ಸನಾತನ ಧರ್ಮದ ವಿಶೇಷ ಹಬ್ಬ. ಶ್ರಾವಣ ಮಾಸದ ಕೃಷ್ಣ ಪಕ್ಷ ಅಷ್ಟಮಿಯ ದಿವಸ ಶ್ರೀ ಕೃಷ್ಣನ ಜನ್ಮದಿನವನ್ನು ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ಆಚರಿಸಲ್ಪಡುತ್ತದೆ. ಈ ಪವಿತ್ರ ಶ್ರೇಷ್ಠ ದಿನದಂದು ವಿಷ್ಣು ತನ್ನ ಎಂಟನೇ ಅವತಾರವನ್ನು ತಾಳಿದ, ಇದಕ್ಕೆ ಕಾರಣ ಕೃಷ್ಣನೇ ಭಗವದ್ಗೀತೆಯಲ್ಲಿ ಸಾರಿರುವಂತೆ
ಪರಿತ್ರಾಣಾಯ ಸಾಧೂನಾಂ
ವಿನಾಶಾಯ ಚದುತಂ
ಧರ್ಮ ಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇಯುಗೇ |
ಶಿಷ್ಟರಕ್ಷಣಾ, ದುಷ್ಟಶಿಕ್ಷಣೆ, ಸಾಧುಜನರನ್ನು ರಕ್ಷಿಸುವುದಕ್ಕೆ ದುರ್ಜನರ ವಿನಾಶ ಮಾಡುವ ಉದ್ದೇಶ ಹಾಗೂ ಧರ್ಮದ ಪುನರುತ್ಥಾನಕ್ಕಾಗಿ ವಿಷ್ಣು ದ್ವಾಪರ ಯುಗದಲ್ಲಿ ಕೃಷ್ಣಾವತಾರ ತಾಳುತ್ತಾನೆ.

ಜನನದ ಹಿನ್ನೆಲೆ ಉಗ್ರಸೇನನ ಮಗ ಕಂಸ ತಂದೆಯನ್ನೇ ಸೆರೆಯಲ್ಲಿಟ್ಟು ಮಥುರ ನಗರ ವನ್ನಾಳುತ್ತಿರುತ್ತಾನೆ. ಪ್ರಜೆಗಳು ಅವನ ಕಿರುಕುಳ ತಾಳಲಾರದೆ ಅಶಾಂತಿ ಇಂದಿರುತ್ತಾರೆ. ಕಂಸ ತನ್ನ ಸಹೋದರಿ ತಂಗಿ ದೇವಕಿಯ ವಿವಾಹವನ್ನು ವಿಜೃಂಭಣೆಯಿಂದ ನೆರವೇರಿಸುತ್ತಿದ್ದಾಗ, ಮೆರವಣಿಗೆ ಹೊರಟಿರುತ್ತದೆ .

ಕಂಸ ಅಹಂಕಾರದಿಂದ ಬೀಗುತ್ತ ರಥದಲ್ಲಿದ್ದಾಗ ಅಶರೀರವಾಣಿ ಕೇಳಿಬರುತ್ತದೆ.”ನಿನ್ನ ತಂಗಿಯ ಎಂಟನೇ ಮಗುವಿನಿಂದಲೇ ನಿನಗೆ ಸಾವು ಕಂಸ !’., “ಇದು ಅಸಾಧ್ಯ ‘ ರೋಷದಿಂದ ತಂಗಿಯನ್ನೇ ಕೊಲ್ಲಲು ಹೊರಟ ಕಂಸನಿಗೆ ದೇವಕಿಯ ಪತಿ ವಸುದೇವ “ಓ ರಾಜನೇ ನನಗೆ ಹುಟ್ಟುವ ಮಕ್ಕಳನ್ನು ನಿನಗೆ ಅರ್ಪಿಸುತ್ತೇನೆ ‘ಅಂದಾಗ ಕಂಸ ಅವರಿಬ್ಬರನ್ನು ಕಾರಾಗೃಹದಲ್ಲಿ ಬಂಧಿಸಿ ಅವರಿಗೆ ಹುಟ್ಟಿದ ಮಕ್ಕಳನ್ನು ಕೊಲ್ಲುತ್ತಿರಲು ಏಳನೆಯ ಹೆಣ್ಣು ಮಗು ಅವನ ಕೈಯಿಂದ ಗಗನಕ್ಕೆ ಹಾರಿ ಆಗಸದಿಂದ ಹೇಳುತ್ತದೆ ‘ ಮುಂಬರುವ ಎಂಟನೇ ಮಗುವಿನಿಂದ ನಿನಗೆ ಸಾವು ಖಚಿತ “ತಂಗಿಯ ಎಂಟನೇ ಮಗುವಿನೆ ನಿರೀಕ್ಷೆಯಲ್ಲಿ ಸಹೋದರ ಕಂಸ ಹಗಲು ಇರಳು ಎಣಿಸುತ್ತಿರುತ್ತಾನೆ.

ನವಮಾಸ ತುಂಬಿ ಪ್ರಸವವೇದನೆಯಲ್ಲಿದ್ದ ದೇವಕಿಗೆ ವಸುದೇವ ಸಾಂತ್ವನ ತೋರುತ್ತಿದ್ದಾಗ ಸೂರ್ಯರಶ್ಮಿಯ ರೂಪದಲ್ಲಿ ಭಗವಂತ ಅವಳ ಗರ್ಭ ಸೇರುತ್ತಾನೆ, ವಸುದೇವನಿಗೆ ಅಶರೀರವಾಣಿ ಕೇಳಿಬರುತ್ತದೆ .”ನಾನು ಹುಟ್ಟಿದ ತತ್‌ಕ್ಷಣ ನನ್ನನ್ನು ಗೋಕುಲದಲ್ಲಿ ನಂದನ ಮನೆಗೆ ಕರೆದುಕೊಂಡು ಹೋಗು’ ಭಗವಂತನ ಇಚ್ಛೆಯಂತೆ ವಸುದೇವ ಗೋಕುಲದಲ್ಲಿ ನಂದಗೋಪ ಯಶೋಧರ ಹತ್ತಿರ ಬಿಟ್ಟು ಅವರಿಗೆ ಆಗತಾನೆ ಜನಿಸಿದ ಹೆಣ್ಣು ಮಗುವನ್ನು ತಂದು ದೇವಕಿ ಹತ್ತಿರ ಮಲಗಿಸುತ್ತಾನೆ. ಇದೊಂದೂ ಅರಿಯದ ಕಂಸ ಆ ಹೆಣ್ಣು ಮಗುವನ್ನು ಇನ್ನೇನು ಕೊಲ್ಲಲೆತ್ನಿಸಿದಾಗ ಮತ್ತೊಮ್ಮೆ ಅಶರೀರವಾಣಿ ಕೇಳಿ ಬರುತ್ತದೆ. “ಓ ಕಂಸ ನಿನ್ನನ್ನು ಧ್ವಂಸಿಸುವನು ಸುರಕ್ಷಿತವಾಗಿ ಬೆಳೆಯುತ್ತಿದ್ದಾನೆ. ಇದನ್ನು ಕೇಳಿದ ಕಂಸ ವ್ಯಾಕುಲನಾಗುತ್ತಾನೆ.

ಹೀಗೆ ಕೃಷ್ಣಾವತಾರ ಪವಾಡಗಳಿಂದ ಆರಂಭವಾಗಿ ದೇವಕಿ-ಯಶೋಧ ಇಬ್ಬರು ಮಾತೆಯರ ನಡುವೆ ಕೃಷ್ಣನಿಗೆ ಮಾತೃಪ್ರೇಮ ಬೆಳೆಯುತ್ತದೆ.

ಬಾಲಕೃಷ್ಣನ ಲೀಲೆ ಬಲು ಚೆಂದ:
“ಅಮ್ಮ ನಾನೇಕೆ ಕಪ್ಪು ರಾಧೇ ಏಕೆ ಬಿಳಿ’ ಎಂದು ಮುದ್ದುಗರೆಯುತ್ತ ಯಶೋಧೆಗೆ ಪ್ರಶ್ನಿಸಿದ.
“ನೀನು ಹುಟ್ಟಿದ್ದು ರಾತ್ರಿ ಅದಕ್ಕೆ ನೀನು ಕಪ್ಪು ,ರಾಧೆ ಹಗಲಿನಲ್ಲಿ ಜನಿಸಿದಳು ಅದಕ್ಕೆ ಬಿಳಿ ‘ ಎಷ್ಟು ಸರಳವಾದ ಉತ್ತರ, ಸಮಾಧಾನಗೊಂಡ ಕನ್ನಯ್ಯ!
“ಮಣ್ಣು ತಿನ್ನಬೇಡ ‘ ಕಾತುರದಿ ಯಶೋಧೆ ಬಾಯಿ ತೆಗೆ ಅಂದಾಗ, ಮಾತೆಗೆ ತೋರಿದ ಜಗವತನ್ನ ಬಾಯಲ್ಲಿ.’
ಕಾಳಿಂಗ ಸರ್ಪವ ಕೊಂದು ಮಕ್ಕಳ ಕಾಪಾಡಿದ. ನವನೀತ ಚೋರ ಅಂತ ಕೃಷ್ಣನಿಗೆ ಮತ್ತೊಂದು ಹೆಸರು. ಬೆಣ್ಣೆಯ ಪ್ರೇಮಿ ಕೃಷ್ಣ ಎಲ್ಲರ ಮನೆಯಲ್ಲೂ ಬೆಣ್ಣೆ ತಿನ್ನುತ್ತಿದ್ದನಂತೆ. ಕಳವಳದಿ ಗೋಪಿಯರು ಯಶೋಧೆಗೆ ಅರುಹಿದಾಗ ಯಶೋಧೆ “ಕೃಷ್ಣಾ, ಬೇರೆಯವರ ಮನೆಯಲ್ಲಿ ಬೆಣ್ಣೆ ಏಕೆ ಕದಿಯುತ್ತೀಯ ? ಎಂದು ಮುನಿಸಿದಾಗ ಕೃಷ್ಣಾ ಮುಗುಳ್ನಕ್ಕು’ ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ, ಎಲ್ಲ ಸೇರಿ ನನ್ನ ಬಾಯಿಗೆ ಬೆಣ್ಣೆ ಮೆತ್ತಿದರಮ್ಮ’ ಅಂತ ಬೆಣ್ಣೆ ಮೆತ್ತಿದ ಕೈಗಳನ್ನು ಬೆನ್ನ ಹಿಂದೆ ಮುಚ್ಚಿಟ್ಟಾಗ ಮಾತೃಹೃದಯ ಕರಗಿ ಅವನ ಮುದ್ದಾಡಿದಳಂತೆ.

ಇಂದ್ರ ಹುಚ್ಚು ಮಳೆ ಸುರಿಸಿ ಗೋಕುಲದ ಜನರ ತೊಂದರೆ ಗೀಡಾಗಿಸಿದಾಗ ಗೋವರ್ಧನ ಗಿರಿ ಎತ್ತಿ ಛತ್ರಿಯಂತೆ ಹಿಡಿದು ಪ್ರವಾಹದಿಂದ ಜನರ ಕಾಪಾಡಿದ. ಪರಮ ಭಕ್ತೆ ರಾಧೆ ತನ್ನ ಪ್ರೇಮವನ್ನೇ ಧಾರೆಯೆರೆಯುತ್ತಾಳೆ. ಅಂತೆಯೇ ತುಳಸಿಯ ಭಕ್ತಿ ಗೊಲಿದು ಬೃಂದಾವನದಲ್ಲಿ ನೆಲಸುತ್ತಾನೆ. ಹಾಗೆಯೇ ಕಲಿಯುಗದಲ್ಲಿ ಭಕ್ತಿ ಮೀರಾ ಭಕ್ತಿಮಾರ್ಗದಲ್ಲಿ ನಡೆದು ಕೃಷ್ಣನನ್ನು ಸೇರುತ್ತಾಳೆ.

ಯೌವ್ವನಕ್ಕೆ ಕಾಲಿಡುತ್ತಿದ್ದಂತೆ ಕಂಸನ ವಧೆ ಮಾಡಿ ತಂದೆ-ತಾಯಿಯರ ಬಂಧನ ಬಿಡಿಸಿದ. ಗೋಪಿಯರಿಗೆ ತನ್ನ ಲೀಲೆ ತೋರಿಸಿ ರಾಸಕ್ರೀಡೆ ಆಡಿದ. ಗುರುಕುಲದ ಸ್ನೇಹಿತ ಸುಧಾಮನ ಬಡತನ ನೀಗಿದ. ಸುಧಾಮ ಕೃಷ್ಣ ಸಾಂದೀಪಿನಿ ಮುನಿಯ ಗುರುಕುಲದಲ್ಲಿ ಒಟ್ಟಿಗೆ ವಿದ್ಯೆ ಕಲಿತವರು. ಮುಂದೆ ಕೃಷ್ಣಾ ದ್ವಾರಕದ ರಾಜನಾಗುತ್ತಾನೆ. ಆದರೆ ಸುಧಾಮ ಹೆಂಡತಿ ಮಕ್ಕಳೊಡನೆ ಕಡುಬಡುವ ನಾಗಿ ಕಷ್ಟದಲ್ಲಿದ್ದಾಗ ಹೆಂಡತಿಯ ಆದೇಶದಂತೆ ಹಿಡಿ ಅವಲಕ್ಕಿ ಸಮೇತ ಕೃಷ್ಣನನ್ನು ಸಹಾಯ ಕೇಳಬೇಕೆಂದು ಬರುತ್ತಾನೆ. ಇದನ್ನು ಗ್ರಹಿಸಿದ ಕೃಷ್ಣ ಅಂತಃಪುರದಿಂದ ಓಡೋಡಿ ಬಂದು ಅರಮನೆಗೆ ಕೊಂಡೊಯ್ದು ಅತಿಥಿ ಸತ್ಕಾರ ನೀಡಿ ಬಡತನ ನೀಗುತ್ತಾನೆ.

ಪಾರಿಜಾತದ ಹೂ ಮೂಲಕ ಸತ್ಯಭಾಮೆಯ ಅಹಂ ನೀಗಿಸುತ್ತಾನೆ. ಪಾಂಡವರನ್ನು ಕೈಹಿಡಿದು ಕೊನೆಯವರೆಗೂ ಕಾಪಾಡುತ್ತಾನೆ. ಹೀಗೆ ಕೃಷ್ಣಾವತಾರ ಬಹು ಮಹತ್ವ ಪೂರ್ಣವಾಗಿ ಕಲಿಯುಗದಲ್ಲೂ ಅವನ ಮಹಿಮೆ ಅಪಾರ.

ಪಾಂಡವರ ಪಕ್ಷನಾಗಿ ನಿಂತು ಅವರನ್ನು ದುರ್ಯೋಧನನ ಕಪಟಗಳಿಂದ ಕಾಪಾಡಿದ. ದ್ರೌಪದಿಯ ಕರೆಗೆ ಓಗೊಟ್ಟು ಅವಳ ಗೌರವ ಕಾಪಾಡಿದ. ಅರ್ಜುನನನ್ನು ಪರಮ ಸಂಗಾತಿಯಾಗಿ ಆರಿಸಿ, ಧರ್ಮಕ್ಕೆ ಹೋರಾಡು ಎಂದು ಪ್ರೋತ್ಸಾಹಿಸಿದ. ಪಾಂಡವ ಕೌರವರ ನಡುವೆ ಶಾಂತಿ ಧೂತನಾಗಿ ಯುದ್ಧ ಬೇಡ ಎಂದು ಬುದ್ಧಿಹೇಳಿದ. ದುರ್ಯೋಧನನ ಅಹಂಕಾರ ಮಹಾಭಾರತದ ಯುದ್ಧದವರೆಗೂ ಹೋದಾಗ, “ನನಗೆ ಯುದ್ಧಬೇಡ ಎಂದು ಅರ್ಜುನ ಧೈರ್ಯ ಕಳೆದುಕೊಂಡಾಗ ಕ್ಷತ್ರಿಯ ಧರ್ಮವನ್ನು ಬೋಧಿಸಿ, ನೀನು ಧರ್ಮಕ್ಕೆ ಹೋರಾಡು ಎನ್ನುತ್ತಾ ಅವನ ರಥಕ್ಕೆ ಸಾರಥಿಯಾದ. ಪರಮಾತ್ಮ ಅರ್ಜುನನಿಗೆ ವಿಶ್ವರೂಪ ತೋರಿಸಿ ತನ್ನ ನಿಜಸ್ವರೂಪ ತೋರಿದ.

ನಾನು ನನ್ನವರನ್ನು ಕೊಲ್ಲಲಾರೆ ಅಂದಾಗ ಆತ್ಮಜ್ಞಾನ ತಿಳಿಸಿ ಭಗವದ್ಗೀತೆ ಬೋಧಿಸಿದ. ಈ ಪವಿತ್ರ ಗ್ರಂಥದಲ್ಲಿ 18 ಅಧ್ಯಾಯಗಳಿವೆ. ಇದರ ಸಾರ ಮೋಕ್ಷ ಪಡೆಯುವ ವಿಧಾನ. ಜ್ಞಾನ ಮಾರ್ಗ, ಕರ್ಮಮಾರ್ಗ, ಭಕ್ತಿ ಮಾರ್ಗಗಳನ್ನು ಸೂಚಿಸಿ ನಿದರ್ಶನ ನೀಡಿದ.

ಗೀತಾ ಸಾರ:
ಯೋಚನೆಗಳೇ ಜೀವನದ ಸಮಸ್ಯೆ ಪಾರ್ಥ ಜ್ಞಾನ ಸಂಪಾದನೆ ಅದರ ಪರಿಹಾರ ಪಾರ್ಥ ಜೀವಿಸು ಮತ್ತೊಬ್ಬರಿಗಾಗಿ, ಜೀವನದ ಅರ್ಥ ಅದೇ ಸನ್ಮಾರ್ಗ ನಿನ್ನ ಅಭಿವೃದ್ಧಿಗೆ ಅರ್ಪಿಸು ಕರ್ಮ, ಫಲ ಬಯಸದೆ ಎನಗೆ ಬಿಡು ಅಹಂ, ಆನಂದಿಸು ಅನಂತನ ನಿನ್ನೊಳಗೆ ಕಲಿತ ವಿದ್ಯೆಯಲಿ ಜೀವನ ಸಾಗಲಿ ದುರ್ಮಾರ್ಗ ದೂರವಿರಲಿ ಗಮನವಿರಲಿ ದೇವನಲ್ಲಿ ಕಾಣು ಅವನ ಎಲ್ಲ ವಸ್ತು, ಜೀವಿಗಳಲಿ ಬ್ರಹ್ಮ ಸತ್ಯ ಒಪ್ಪು ಜೀವನದಲ್ಲಿ ಮನಸ್ಸು ಸೇರಲಿ ಅವನಲ್ಲಿ ಮಾಯಾ ಜಾಲ ದೂರವಿರಲಿ ನಾಮಸ್ಮರಣೆ, ಭಕ್ತಿ ನಿರಂತರ ವಾಗಲಿ ಬಾಳಿನ ಗುರಿ ಅದಾಗಲಿ ಆಗ ನೀಡುವೆ ಬಹುಮಾನ “ಸತ್ವಗುಣ’ ಆಕಾಂಕ್ಷೆ ಗಳಲ್ಲಿ ಅದು ಉತ್ತಮ ಗುಣ
ದೊರಕುವುದು ಮುಕ್ತಿ, ಅನುಮಾನ ಬೇಡ ಕಣ’ : ಇದೇ ಗೀತೆಯ ಸಾರ.

ಭಗವದ್ಗೀತೆ ಅನೇಕ ಪಾಶ್ಚಾತ್ಯ ಭಾಷೆಗಳಲ್ಲಿ ಅನುವಾದ ಮಾಡಲ್ಪಟ್ಟಿದೆ . ಇಟಾಲಿಯನ್‌ ಭಾಷೆಯಲ್ಲಿ ಇದರ ಶೀರ್ಷಿಕೆ Il canto del beat , ಭಗವಂತನ ಹಾಡು, ಇದು ಎಲ್ಲರಿಗೂ ಅಚ್ಚುಮೆಚ್ಚಿನ ಗ್ರಂಥ.

ಜನ್ಮಾಷ್ಟಮಿ
ಈ ಪವಿತ್ರ ದಿನ ಜನ್ಮಾಷ್ಟಮಿ ಹೇಗೆ ಆಚರಿಸಲ್ಪಡುತ್ತದೆ ಅಂತ ನೋಡೋಣ. ಭಾರತ ಒಂದು ಮೊಸಾಯಿಕ್‌ ತರಹ ವೈವಿಧ್ಯತೆಯಲ್ಲಿ ಏಕತೆ ನೋಡುವುದೇ ನಮ್ಮ ವಿಶೇಷತೆ. ಒಂದೊಂದು ಪ್ರಾಂತದಲ್ಲಿ ಒಂದೊಂದು ತರಹ ಆಚರಿಸುತ್ತಾರೆ. ಉತ್ತರ ಭಾರತದಲ್ಲಿ ದೇಗುಲಗಳಲ್ಲಿ 108 ತರಹ ಸಿಹಿತಿಂಡಿಗಳನ್ನು ನೈವೇದ್ಯ ಮಾಡಿ, ನವವಸ್ತ್ರಗಳನ್ನು ಧರಿಸಿ, ಕೆಲವರು ಉಪವಾಸ ವ್ರತ ಆಚರಿಸಿ, ಕೃಷ್ಣನನ್ನು ಪೂಜಿಸಿ, ಮಾರನೇದಿನ ಕೃಷ್ಣಲೀಲೆ ಅಂಗವಾಗಿ ಮಟ್ಕಾ (ಮಡಕೆ )ಗಳನ್ನು ಮೇಲೆ ಕಟ್ಟಿ ಒಡೆಯುತ್ತಾರೆ. ಅವನು ನವನೀತ ಚೋರ ಮಡಿಕೆ ಒಡೆದು ಬೆಣ್ಣೆ ತಿನ್ನುತ್ತಿದ್ದನಂತೆ, ಇದೇ ಮಟ್ಕಾ ಒಡೆಯುವ ಅರ್ಥ.

ದಕ್ಷಿಣ ಭಾರತೀಯರು ಈ ದಿನ ಮಧ್ಯರಾತ್ರಿಯವರೆಗೂ ಉಪವಾಸವಿದ್ದು ಕೃಷ್ಣನನ್ನು ಪ್ರಾರ್ಥಿಸುತ್ತಾರೆ. ಕರಿದ ತಿಂಡಿ ಅವನಿಗೆ ಪ್ರೀತಿಯಂತೆ! ನಮ್ಮ ಪಾತಿ ದಿನವೆಲ್ಲ ಉಪವಾಸವಿದ್ದು ಇಡೀ ರಾತ್ರಿ ಹಾಡುಗಳನ್ನು ಹಾಡುತ್ತ ಕೃಷ್ಣನಿಗೆ ಪ್ರಿಯವಾದ ತಿಂಡಿಗಳನ್ನು ಮಾಡಿ ಅರ್ಪಿಸಿ ಪ್ರಸಾದ ನೀಡುತ್ತಿದ್ದಾಗ ಬೆಳಗು ಜಾವ ಆಗುತ್ತಿತ್ತು! ಸಿಹಿ ತಿಂಡಿಗಳನ್ನು ಮಾಡಿ ಅವನಿಗೆ ಅರ್ಪಿಸುವುದು ವಾಡಿಕೆ.

ಮಕ್ಕಳು ಕೃಷ್ಣನ ವೇಷಧರಿಸಿ ಕೊಳಲು ಹಿಡಿದು ಓಡಾಡುತ್ತಿದ್ದರೆ ಅದೇ ಕಣ್ಣಿಗೆ ಹಬ್ಬ. ಕೃಷ್ಣನಿಗೆ ಅನೇಕ ಹೆಸರುಗಳು. ಮುಕುಂದ, ಮಾಧವ, ಪಾರ್ಥಸಾರಥಿ, ವೇಣುಗಾನಲೋಲ , ಗೋಪಾಲ್‌ ಹೀಗೆ ಅನೇಕ ಹೆಸರುಗಳು. ಗೋವುಗಳ ಕಾಯ್ದವ ಕೃಷ್ಣನ ವೇಣುಗಾನಕ್ಕೆ, ಗೋಪಿಯರ ರಾಸಲೀಲೆಗೆ ಗೋವುಗಳು ಸಹ ತಲೆದೂಗುತ್ತಿದ್ದವಂತೆ. ಹೀಗೆ ಜನಾಷ್ಟಮಿ ಹೊರದೇಶಗಳಲ್ಲೂ ಆಚರಣೆಯಲ್ಲಿದೆ. ಎಲ್ಲರಿಗೂ ಜನ್ಮಾಷ್ಟಮಿಯ ಶುಭಾಶಯಗಳು. ಶ್ರೀ ಕೃಷ್ಣಾರ್ಪಣ ಮಸ್ತು.

*ಜಯಮೂರ್ತಿ, ಇಟಲಿ

 

ಟಾಪ್ ನ್ಯೂಸ್

After Namibia 200 elephants slaughtered in Zimbabwe

Drought; ನಮೀಬಿಯಾ ಆಯ್ತು, ಈಗ ಜಿಂಬಾಬ್ವೆಯಲ್ಲಿ 200 ಆನೆಗಳ ಹತ್ಯೆ?

Champions Trophy; ICC delegation to Karachi for security review

Champions Trophy; ಭದ್ರತೆ ಪರಿಶೀಲನೆಗೆ ಐಸಿಸಿ ನಿಯೋಗ ಕರಾಚಿಗೆ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 5ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 5ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 6ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 6ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 7ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 7ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 9ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 9ನೇ ರೀಲ್ಸ್ ಪ್ರಸಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

After Namibia 200 elephants slaughtered in Zimbabwe

Drought; ನಮೀಬಿಯಾ ಆಯ್ತು, ಈಗ ಜಿಂಬಾಬ್ವೆಯಲ್ಲಿ 200 ಆನೆಗಳ ಹತ್ಯೆ?

Ranji Trophy: Samit Dravid in possible squad

Ranji Trophy: ಸಂಭಾವ್ಯ ತಂಡದಲ್ಲಿ ಸಮಿತ್‌ ದ್ರಾವಿಡ್‌

Champions Trophy; ICC delegation to Karachi for security review

Champions Trophy; ಭದ್ರತೆ ಪರಿಶೀಲನೆಗೆ ಐಸಿಸಿ ನಿಯೋಗ ಕರಾಚಿಗೆ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.