Manipal: ಯುವಕನ ಹಲ್ಲೆಗೈದು ಸುಲಿಗೆ
Team Udayavani, Aug 25, 2024, 6:40 AM IST
ಮಣಿಪಾಲ: ಶುಭ ಸಮಾರಂಭಗಳಿಗೆ ಹಾಡುಗಳ ರೆಕಾರ್ಡ್ ಮಾಡುವ ವೃತ್ತಿ ಮಾಡಿಕೊಂಡಿದ್ದ ಮಂಗಳೂರಿನ ತೋಕೂರು ನಿವಾಸಿ ಅಬ್ದುಲ್ ರಾಝೀಕ್ (21) ಅವರಿಗೆ ಮಣಿಪಾಲದಲ್ಲಿ ಹಲ್ಲೆ ನಡೆಸಿದ ಘಟನೆ ಆ. 22ರಂದು ರಾತ್ರಿ ಸಂಭವಿಸಿದೆ.
ವಾಜಿದ್ ಎಂಬಾತ ಅಕ್ಕನ ಮಗಳ ಹುಟ್ಟುಹಬ್ಬಕ್ಕೆ ಹಾಡು ರೆಕಾರ್ಡ್ ಮಾಡಿಕೊಡಬೇಕೆಂದು ರಾಝೀಕ್ಗೆ ತಿಳಿಸಿದ್ದು, ಹಾಡು ರೆಕಾರ್ಡ್ ಮಾಡಿ ನೀಡಿದ ಬಳಿಕ ಹಣವನ್ನು ನೀಡದೆ ಸತಾಯಿಸಿದ್ದರು. ಕೊನೆಗೆ ಮಣಿಪಾಲಕ್ಕೆ ಬಂದರೆ ಹಣ ಕೊಡುತ್ತೇನೆ ಎಂದು ಹೇಳಿ ಕರೆಸಿದ ವಾಜಿದ್ ಮತ್ತು ಆತನ ಸ್ನೇಹಿತರು ರಾಝೀಕ್ಗೆ ಹಲ್ಲೆ ಮಾಡಿ ಕುತ್ತಿಗೆಯಲ್ಲಿದ್ದ ಸುಮಾರು 2 ಸಾವಿರ ರೂ ಮೌಲ್ಯದ ಬೆಳ್ಳಿ ಚೈನು, 30 ಸಾವಿರ ರೂ. ನಗದು, 70 ಸಾವಿರ ರೂ. ಮೌಲ್ಯದ ಐಫೋನ್ ಸುಲಿಗೆ ಮಾಡಿದ್ದಾರೆ. ಗಾಯಗೊಂಡ ರಾಝೀಕ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.