Udupi: ಗೀತಾ ಸಾರ ಜೀವನದಲ್ಲಿ ಅಳಡಿಸಿಕೊಂಡಾಗ ಜೀವನ ಸಾರ್ಥಕ: ಪುತ್ತಿಗೆ ಶ್ರೀ 

ಶ್ರೀ ಕೃಷ್ಣಮಠದಲ್ಲಿ ಗೀತೋತ್ಸವ, "ಗೀತಾಧ್ಯಾಯ ಭಾವ ಪರಿಚಯ' ಕೃತಿಯ 4ನೇ ಆವೃತ್ತಿ ಬಿಡುಗಡೆ

Team Udayavani, Aug 25, 2024, 12:22 AM IST

PUTTIGE

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಭಗದ್ಗೀತೆಯ ಪುಸ್ತಕ ಗಳನ್ನು ಪಲ್ಲಕ್ಕಿಯಲ್ಲಿಟ್ಟು ಶ್ರೀ ಕೃಷ್ಣಮಠದ ರಥಬೀದಿಯಲ್ಲಿ ಶನಿವಾರ ಮೆರವಣಿಗೆ ಮಾಡುವ ಮೂಲಕ “ಗೀತೋತ್ಸವ’ ವಿಶೇಷ ರೀತಿಯಲ್ಲಿ ನಡೆಯಿತು.

ಮೆರವಣಿಗೆಯು ರಾಜಾಂಗಣಕ್ಕೆ ಸಾಗಿಬಂತು. ಶ್ರೀಪಾದರುಸಭಾ ಕಾರ್ಯಕ್ರಮದ ಪೂರ್ವದಲ್ಲಿ ಭಗವದ್ಗೀತೆ ಯ ವಿಶೇಷ ಚಿಂತನೆಯ ಪ್ರತಿಕೃತಿಯನ್ನು ಅನಾವರಣಗೊಳಿಸಿದರು. ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು “ಗೀತಾ ಧ್ಯಾಯ ಭಾವ ಪರಿಚಯ’ ಕೃತಿಯ 4ನೇ ಆವೃತ್ತಿಯನ್ನು ಬಿಡುಗಡೆ ಮಾಡಿದರು.

ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸಂದೇಶ ನೀಡಿ, ಶ್ರೀ ಕೃಷ್ಣನಿಗೆ ಭಗವದ್ಗೀತೆ ಇಷ್ಟ. ನಮಗೆ ಇಷ್ಟವಾದ ಉಂಡೆ, ಲಾಡು, ಚಕ್ಕುಲಿ ಇತ್ಯಾದಿಗಳನ್ನು ದೇವರಿಗೆ ಇಷ್ಟ ಎನ್ನುವ ನೆಲೆಯಲ್ಲಿ ನೈವೇದ್ಯ ಮಾಡುತ್ತೇವೆ. ವಾಸ್ತವದಲ್ಲಿ ದೇವರಿಗೆ ಭಗವದ್ಗೀತೆಯೇ ಇಷ್ಟ. ಗೀತೆಯ ಸಾರವನ್ನು ನಮ್ಮ ಜೀವನದಲ್ಲಿ ಅಳಡಿಸಿಕೊಂಡಾಗ ಸಾರ್ಥಕ ಬದುಕು ಸಾಧ್ಯ. ಗೀತೆಯ ಮೂಲಕ ಭಗವಂತ ನಮಗೆ ಮೋಕ್ಷದ ಮಾರ್ಗ ತೋರುತ್ತಾನೆ. ಅಂತರ್ಯಾಮಿಯಾಗಿರುವ ಭಗವಂತನ ಮಾರ್ಗದರ್ಶನದಲ್ಲಿ ನಾವು ಸಾಗಿದರೆ ಎಲ್ಲವೂ ಸಾಕಾರವಾಗಲಿದೆ. ಭಗದ್ಗೀತೆ ಓದದವರು ಭೂಮಿಗೆ ಭಾರ ಎಂದರು.

ಶ್ರೀ ವಿದ್ಯೇಶತೀರ್ಥ ಶ್ರೀಪಾದರು, ಗೀತೆಯನ್ನು ಚೆನ್ನಾಗಿ ಅರ್ಥ ತಿಳಿದು ಭಾವಪೂರ್ಣವಾಗಿ ಪಠನ ಮಾಡಬೇಕು. ಸರ್ವಶಾಸ್ತ್ರದ ಸಾರ ಮಹಾಭಾರತದಲ್ಲಿದ್ದು, ಮಹಾಭಾರ ತದ ಸಾರ ಭಗವದ್ಗೀತೆಯಲ್ಲಿದೆ. ಪುತ್ತಿಗೆ ಶ್ರೀಪಾದರು ಜಗತ್ತಿಗೆ ಭಗವದ್ಗಿತೇಯ ಸಾರ ಪ್ರಸಾರ ಮಾಡುತ್ತಿದ್ದಾರೆ. ಭಗದ್ಗೀತೆ ಹಾಲು, ಭಾಗವತ ಹಣ್ಣು ಇದ್ದಂತೆ. ಈ ಎರಡರ ಭಕ್ತಿಪೂರ್ಣ ಅಧ್ಯಯನದಿಂದ ಆತ್ಮ ದಷ್ಟಪುಷ್ಟವಾಗುತ್ತದೆ ಎಂದರು.

ಚಕ್ರವರ್ತಿ ಉಪನ್ಯಾಸ:
ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು “ದ್ವೇಷಾ ಸೂಯೆಹಿಂಸೆಗಳನ್ನು ಗೀತಾ ಚಾರ್ಯ ಬೋಧಿಸಿದನೇ?’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ, ಶ್ರೀ ಕೃಷ್ಣನ ಬಗ್ಗೆ ಸಾಕಷ್ಟು ಅಪಪ್ರಚಾರ ನಡೆಯುತ್ತಲೇ ಇದೆ. ಕೃಷ್ಣನ ಕುರಿತು ತಪ್ಪು ಕಲ್ಪನೆಯನ್ನು ನಮ್ಮಲ್ಲಿ ತುಂಬಲಾಗಿದೆ ಎಂದರು.

ಕೃಷ್ಣನ ಹೆಸರು ಹಾಳು ಮಾಡಲು ಎಷ್ಟು ಕೆಸರೆರೆಚಿದರೂ ಅಷ್ಟೇ ವೈಭವ ವಾಗಿ ಕಾಣಿಸುತ್ತಲೇ ಹೋದ. ಎಂದೂ ಶ್ರೀಕೃಷ್ಣನ ಮೇಲೆ ಕೆಸರು ಬಿದ್ದಿಲ್ಲ, ಕೆಸರೆ ರೆಚಿದವರ ಮೇಲೆ ಕೆಸರು ಬಿದ್ದಿದೆ. ಮನುಷ್ಯ ಭಗವಂತನಿಗೆ ಕೊಟ್ಟಷ್ಟು ಕಷ್ಟ ಬೇರೆ ಯಾರಿಗೂ ನೀಡಿಲ್ಲ. ಭಗವ ದ್ಗೀತೆಯನ್ನು ತುಂಬಿಕೊಂಡಷ್ಟೂ ಹಿಂದು ಗಳು ಸಶಕ್ತರಾಗುತ್ತಾರೆ ಮತ್ತು ಶ್ರೀ ಕೃಷ್ಣ ನಮ್ಮನ್ನು ಬಲಗೊಳಿಸುತ್ತಾನೆ ಎಂದರು.

ಕೊಯಮತ್ತೂರಿನ ಪಿ.ಆರ್‌.ವಿಟ್ಠಲ್‌, ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇಟ್‌, ದಾನಿ ಗಳಾದ ವಿಶ್ವನಾಥ ಶೆಣೈ, ಪ್ರಭಾ ಶೆಣೈ ದಂಪತಿ, ನಿವೃತ್ತ ಶಿಕ್ಷಕಿ ನಂದಿನಿ ಶೆಣೈ ಅವರಿಗೆ ಕೃಷ್ಣಾನಂದ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು. ಮಥುರಾ ದೇವಸ್ಥಾನದ ಪ್ರಧಾನ ಅರ್ಚಕರಾದ ದಯಾಳ್‌, ರುದ್ರಪಟ್ಟಂ ಸಹೋದರರು, ಮಟ್ಟೂರು ಸಹೋದರರು ಉಪಸ್ಥಿತರಿ ದ್ದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಶ್ರೀಪಾದರು ಬಹುಮಾನ ವಿತರಿಸಿದರು.

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

ಮಲ್ಪೆ ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವತ್ಛತೆ

Malpe ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವಚ್ಛತೆ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.