Mangaluru: ಸ್ವರಾನಂದ್ ಪ್ರತಿಷ್ಠಾನದ ಅರ್ಥಪೂರ್ಣ ಬೈಠಕ್
Team Udayavani, Aug 25, 2024, 1:58 AM IST
ಸ್ವರಾನಂದ್ ಪ್ರತಿಷ್ಠಾನ ಮಂಗಳೂರು ಇದರ ಆಶ್ರಯದಲ್ಲಿ ಎರಡು ಗಾಯನ ಕಛೇರಿಗಳು ಇತ್ತೀಚೆಗೆ ಮಂಗಳೂರಿನ ಬಿ.ಇ.ಎಂ. ಹೈಸ್ಕೂಲ್ನ ಸಭಾಭವನದಲ್ಲಿ ನಡೆಯಿತು.
ಮೊದಲಿಗೆ ಮಂಗಳೂರಿನ ಯುವ ಗಾಯಕರಾದ ದಯಾಕರ್ ಭಟ್ ಮಾರೂ ಬಿಹಾಗ್ ರಾಗದಲ್ಲಿ ವಿಲಂಬಿತ್ ತಿಲವಾಡ ದ್ರುತ್ ತೀನ್ ತಾಳದ ಬಂಧಿಶ್ಗಳನ್ನು ಹಾಡಿ, ಒಂದು ಸುಂದರ ರಾಗ್ ಮಾಲದೊಂದಿಗೆ ತನ್ನ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು. ಇವರಿಗೆ ದೀಪಕ್ ನಾಯಕ್ ಹರಿಖಂಡಿಗೆ ಹಾಗೂ ವಿಶ್ವಜಿತ್ ಕಿಣಿ ಇವರು ತಬಲಾ ಹಾಗೂ ಹಾರ್ಮೋನಿಯಂ ಸಾಥ್ ನೀಡಿದರು. ತಂಬೂರದಲ್ಲಿ ಸ್ಮತಿ ಹಾಗೂ ನರಸಿಂಹ ಪೈ ಸಹಕರಿಸಿದರು.
ಎರಡನೆಯ ಬೈಠಕ್ನಲ್ಲಿ ಪುಣೆಯ ಡಾ| ರುಚಿರಾ ಕೇದಾರ್ ಇವರು ಸೂರ್ ಮಲ್ಹಾರ್ ರಾಗದಲ್ಲಿ ತೀನ್ ತಾಳದ ಬಂಧಿಶ್ಗಳನ್ನು ಪ್ರಸ್ತುತ ಪಡಿಸಿ, ಠುಮ್ರಿ ದಾದ್ರಗಳನ್ನು ಹಾಡಿ ಸಂಗೀತ ವಿದ್ಯಾರ್ಥಿಗಳಿಗೆ ಅವುಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡಿದರು. ವಿಘ್ನೇ ಶ್ ಕಾಮತ್ ಕೋಟೇಶ್ವರ ಹಾಗೂ ಪ್ರಸಾದ್ ಕಾಮತ್ ಉಡುಪಿ, ತಬಲಾ ಹಾಗೂ ಸಂವಾದಿನಿಗಳಲ್ಲಿ ಸಮರ್ಥ ಸಾಥ್ ನೀಡಿದರು. ತಂಬೂರದಲ್ಲಿ ನಿತ್ಯಾ ಶಿಖಾರಿಪುರ್ ಹಾಗೂ ಮಂಗಳೂರಿನ ಮೇಘಾ ಸಹಕರಿಸಿದರು.
- ಭಾರವಿ ದೇರಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.