Mumbai ಹಾಫ್ ಮ್ಯಾರಥಾನ್-2024 : ಚಂದನ್, ರವಿನಾ ಚಾಂಪಿಯನ್ಸ್
Team Udayavani, Aug 26, 2024, 1:04 AM IST
ಮುಂಬಯಿ: ರವಿವಾರ ನಡೆದ “ಮುಂಬೈ ಹಾಫ್ ಮ್ಯಾರಥಾನ್’ನಲ್ಲಿ ಉತ್ತರಪ್ರದೇಶದ ಚಂದನ್ ಯಾದವ್ ಮತ್ತು ನಾಶಿಕ್ನ ರವಿನಾ ಗಾಯಕ್ವಾಡ್ ಚಾಂಪಿಯನ್ ಆಗಿದ್ದಾರೆ. ಇವರಿಬ್ಬರೂ ಕಾಲೇಜು ವಿದ್ಯಾರ್ಥಿಗಳೆಂಬುದು ವಿಶೇಷ. ಎನ್ಇಬಿ ನ್ಪೋರ್ಟ್ಸ್ ಆಯೋಜಿಸಿದ ಈ ಕೂಟದಲ್ಲಿ 20 ಸಾವಿರಕ್ಕೂ ಹೆಚ್ಚಿನ ಓಟಗಾರರು ಪಾಲ್ಗೊಂಡಿದ್ದರು. ಲೆಜೆಂಡ್ರಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಸ್ಪರ್ಧೆಗೆ ಚಾಲನೆ ನೀಡಿದರು. ಬಳಿಕ ವಿಜೇತರಿಗೆ ಬಹುಮಾನವನ್ನೂ ನೀಡಿದರು.
ಪುರುಷರ ವಿಭಾಗದಲ್ಲಿ 21 ವರ್ಷದ ಚಂದನ್ ಯಾದವ್ 1 ಗಂಟೆ, 11.01 ನಿಮಿಷಗಳಲ್ಲಿ ದೂರವನ್ನು ಕ್ರಮಿಸಿ ಮೊದಲಿಗರಾದರು. ನಿತೀಶ್ ಕುಮಾರ್ ದ್ವಿತೀಯ (1:11.54 ನಿಮಿಷ) ಮತ್ತು ಪೀಯೂಷ್ ಮಸಾನೆ ತೃತೀಯ ಸ್ಥಾನಿಯಾದರು (1:13.20 ನಿಮಿಷ).
ವನಿತಾ ವಿಭಾಗದಲ್ಲಿ 19 ವರ್ಷದ ರವಿನಾ ಗಾಯಕ್ವಾಡ್ಗೆ ಇದು 21ಕೆ ವಿಭಾಗದ ಪದಾರ್ಪಣ ಸ್ಪರ್ಧೆಯಾಗಿತ್ತು. ಅವರು ಮೊದಲ ಯತ್ನದಲ್ಲೇ ಚಾಂಪಿಯನ್ ಆದರು. 1 ಗಂಟೆ, 27.43 ನಿಮಿಷದಲ್ಲಿ ದೂರವನ್ನು ಕ್ರಮಿಸಿದರು. ಸೆನೇಟ್ ಲಿಶಾರ್ಜ್ (1:29.41) ದ್ವಿತೀಯ, ರುಕ್ಮಿಣಿ ಭೌರೆ ತೃತೀಯ ಸ್ಥಾನ ಪಡೆದರು (1:31.23).
ದೃಷ್ಟಿಹೀನ ಓಟಗಾರರ ತಂಡವೊಂದು “ಗೈಡ್ ಇಂಡಿಯಾ ರನ್ನರ್’ ನೆರವಿನಿಂದ ಈ ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದು ವಿಶೇಷ. ಅಂಗವಿಕಲರು, ಗಾಲಿಕುರ್ಚಿ ಕ್ರೀಡಾಪಟುಗಳು, ಮಿತ್ರಾಯನ ಎನ್ಜಿಒದ 150 ಮಕ್ಕಳು ಕೂಡ ಭಾಗವಹಿಸಿದರು.
ಕ್ರೀಡೆ ಜೀವನ ವಿಧಾನ
ಈ ಸಂದರ್ಭದಲ್ಲಿ ಮಾತಾಡಿದ ಸಚಿನ್ ತೆಂಡುಲ್ಕರ್, “ಭಾರತೀಯರಾದ ನಾವು ಕ್ರೀಡೆಯನ್ನು ಪ್ರೀತಿಸುತ್ತೇವೆ. ಮಾನಸಿಕ ಹಾಗೂ ದೈಹಿಕ ಪ್ರಯೋಜನೆಗಳಿಗಾಗಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ. ಈ ಮೂಲಕ ಕ್ರೀಡೆಗಳನ್ನು ಜೀವನ ವಿಧಾನವಾಗಿ ಸ್ವೀಕರಿಸುವ ಸಮಯ ಇದಾಗಿದೆ. ಭಾರತದಾದ್ಯಂತ ಮ್ಯಾರಥಾನ್ ಪಾಲುಗಾರಿಕೆಯಲ್ಲಿ ಎನ್ಎಬಿ ಪಾಲುದಾರಿಗೆ ಯಶಸ್ಸನ್ನು ಕಾಣುತ್ತ ಬಂದಿದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್, ಜಡೇಜಾ; ಶತಕ ಬಾರಿಸಿದ ಲೋಕಲ್ ಬಾಯ್
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ
Ricky Ponting: ಡೆಲ್ಲಿಯಿಂದ ಪಂಜಾಬ್ ಗೆ ಬಂದ ರಿಕಿ ಪಾಂಟಿಂಗ್
Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್ ಟೆಸ್ಟ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.