Saudi Arabia; ಮರುಭೂಮಿಯಲ್ಲಿ ದಿಕ್ಕು ಕಾಣದೇ ಭಾರತದ ವ್ಯಕ್ತಿ ಮೃತ
Team Udayavani, Aug 26, 2024, 6:58 AM IST
ರಿಯಾದ್: ಸೌದಿ ಅರೇಬಿಯಾದ ರಬ್ ಅಲ್ ಖಲಿ ಮರುಭೂಮಿಯಲ್ಲಿ ಜಿಪಿಎಸ್ ಸಿಗ್ನಲ್ ಸಿಗದೆ, ಅಲೆದು ಸುಸ್ತಾಗಿ ನಿರ್ಜಲೀಕರಣ ದಿಂದಾಗಿ ತೆಲಂಗಾಣ ವ್ಯಕ್ತಿ ಹಾಗೂ ಆತನ ಸೂಡಾನ್ನ ಸಹಚರ ಮೃತಪಟ್ಟ ಘಟನೆ ನಡೆದಿದೆ.
ಮೃತ ವ್ಯಕ್ತಿ 27 ವರ್ಷದ ಮೊಹಮ್ಮದ್ ಶೆಹಜಾದ ತೆಲಂಗಾಣದ ಕರೀಮ್ನಗರದವರು. 3 ವರ್ಷಗಳಿಂದ ಸೌದಿ ಅರೇಬಿಯಾದ ಟೆಲಿಕಮ್ಯುನಿ ಕೇಶನ್ ಕಂಪೆನಿಯಲ್ಲಿ ಕೆಲಸ ಮಾಡು ತ್ತಿದ್ದರು. ತನ್ನ ಸೂಡಾನ್ ಸಹೋದ್ಯೋಗಿ ಜತೆ ಶೆಹಜಾದ ಮರುಭೂಮಿಯಲ್ಲಿ ಹಾದು ಬರುವಾಗ ಜಿಪಿಎಸ್ ಸಿಗ್ನಲ್ ಕಡಿತವಾಗಿದೆ. ಜತೆಗೆ ಅವರ ಫೋನ್ ಬ್ಯಾಟರಿ ಖಾಲಿಯಾಗಿದೆ. ಹಾಗಾಗಿ ಯಾರಿಂದಲೂ ಸಹಾಯ ಪಡೆಯಲು ಅವರಿಗೆ ಸಾಧ್ಯವಾಗಿಲ್ಲ ಅವರ ವಾಹನದ ಇಂಧನ ಖಾಲಿಯಾಗಿದ್ದು ಮಾತ್ರವಲ್ಲದೇ, ಆಹಾರ ಹಾಗೂ ನೀರು ಕೂಡ ಇಲ್ಲದೇ ಬಳಲಿದ್ದಾರೆ. ಕೊನೆಗೆ ಯಾವ ಕಡೆಗೆ ಹೋಗಬೇಕು ಎಂಬುದೂ ಕೂಡ ಗೊತ್ತಾಗದೇ ಅಲೆದಾ ಡಿದ್ದಾರೆ. ಅಂತಿಮವಾಗಿ ಕುಡಿಯಲು ನೀರಿಲ್ಲದೇ ನಿರ್ಜಲೀಕರಣದಿಂದ ಮೃತಪಟ್ಟಿದ್ದಾರೆ.
650 ಕಿ.ಮೀ. ವಿಸ್ತಾರದ ಬೃಹತ್ ಮರುಭೂಮಿ: ಸೌದಿ ಅರೇಬಿಯಾ ದಕ್ಷಿಣ ಭಾಗದಲ್ಲಿ ಹರಡಿರುವ ರಬ್ ಅಲ್ ಖಲಿ ಮರುಭೂಮಿಯು ಸುಮಾರು 650 ಕಿ.ಮೀ. ವಿಸ್ತಾರ ವಾಗಿದೆ. ಇಲ್ಲಿನ ಕೆಟ್ಟ ಹವಾಮಾನ ಪರಿಸ್ಥಿತಿಯಿಂದಾಗಿ ಅಗತ್ಯ ವ್ಯವಸ್ಥೆಗಳು ಇಲ್ಲದಿದ್ದರೆ ಬದುಕುಳಿಯುವುದು ಕಷ್ಟ ಎನ್ನಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir:ಕಲಂ 370 ಪುನರ್ ಜಾರಿ-ಕಾಂಗ್ರೆಸ್, ಎನ್ ಸಿ ನಿಲುವಿಗೆ ಪಾಕ್ ಬೆಂಬಲ!
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Explode in Lebanon: ಪೇಜರ್ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು
Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್ ನ ಮೊಸ್ಸಾದ್!
Diddy ;ಸೆ*ಕ್ಸ್ ದಂಧೆ ಆರೋಪ: ಅಮೆರಿಕದ ಖ್ಯಾತ ಹಿಪ್-ಹಾಪ್ ಸ್ಟಾರ್ ಬಂಧನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.