Krishna Story: ಕೃಷ್ಣ-ಕುಚೇಲರ ಬಂಧುತ್ವ-ಗುರು ಸ್ಮರಣೆ
ಮನೆಗೆ ಬಂದ ಗೆಳೆಯ ಕುಚೇಲನನ್ನು ಶ್ರೀ ಕೃಷ್ಣ ವಿವಿಧ ರೀತಿಯಲ್ಲಿ ಉಪಚರಿಸಿ, ಗುರುಕುಲ ವಾಸಾನಂತರದ ವಿವರಗಳನ್ನು ಕೇಳುವನು
Team Udayavani, Aug 26, 2024, 6:11 AM IST
ಎಳೆಯ ವಯಸ್ಸಿನಲ್ಲಿ ಒಡನಾಡಿದವರು ಬಹುಕಾಲ ಕಳೆದ ಮೇಲೆ ಪುನಃ ಪರಸ್ಪರರನ್ನು ಕಾಣುವ ಸಂದರ್ಭ ಬಂದಲ್ಲಿ ಅವರಿಗೆ ಆಗುವ ಸಂತೋಷ ವಿಶೇಷವಾದುದು. ಬಾಲ್ಯದ ಒಡನಾಟದಲ್ಲಿ ಒದಗಿದ ವಿಶೇಷ ವಿಷಯಗಳು ಇಬ್ಬರಿಗೂ ನೆನಪಿಗೆ ಬಂದು ಅವರ ಮನಸ್ಸುಗಳನ್ನು ಆನಂದವಾಗಿಸುತ್ತವೆ-ಆರ್ದ್ರ ವಾಗಿಸುತ್ತವೆ.
ಶ್ರೀ ಕೃಷ್ಣನ ಜೀವನದಲ್ಲೂ ಹೀಗಾಯಿತು… ಭಾಗವತ ಪುರಾಣದಲ್ಲಿ ಅದನ್ನು ಬಲು ಸುಂದರವಾಗಿ ವರ್ಣಿಸಲಾಗಿದೆ.
ಶ್ರೀ ಕೃಷ್ಣ-ಕುಚೇಲರ ಗೆಳೆತನದ ಕಥೆ ನಮಗೆ ತಿಳಿದಿದೆ. ಮನೆಗೆ ಬಂದ ಗೆಳೆಯ ಕುಚೇಲನನ್ನು ಶ್ರೀ ಕೃಷ್ಣ ವಿವಿಧ ರೀತಿಯಲ್ಲಿ ಉಪಚರಿಸಿ, ಗುರುಕುಲ ವಾಸಾನಂತರದ ವಿವರಗಳನ್ನು ಕೇಳುತ್ತಾನೆ. ಮದುವೆ, ಮಡದಿ, ಮಕ್ಕಳು, ನಿತ್ಯಜೀವನದ ಪ್ರಶ್ನೆಗ ಳಾದ ಮೇಲೆ ಕೃಷ್ಣನೇ ಆ ಕಾಲದ ನೆನಪನ್ನು ಕೆದಕಿ ಹೇಳುತ್ತಾನೆ.
“ಮಿತ್ರಾ, ಅದೊಂದು ದಿನ ಗುರುಪತ್ನಿಯ ಮಾತಿನಂತೆ ಸೌದೆ ತರಲು ನಾವು ಕಾಡಿಗೆ ಹೋದೆವಷ್ಟೆ. ನಾವು ಕಾಡಿನಲ್ಲಿರುವಾಗಲೇ ಗಾಳಿ ಮಳೆ ಆರಂಭವಾಗಿ ತೊಯ್ದು ಹೋದೆವು. ದಾರಿ ಕಾಣದಾಯಿತು. ಕತ್ತಲಾಯಿತು. ಮಳೆಯ ಬಿರುಸು ಜೋರಾಗಿ ನಾವಿಬ್ಬರೂ ಕೈ ಕೈ ಹಿಡಿದುಕೊಂಡು ಏನನ್ನೂ ಕಾಣದೆ ತೊಳಲಿದೆವು.
ನೀರಿನಲ್ಲಿ ಮುಳುಗಿ ಏಳುತ್ತಾ ಕೈ ಬಿಡದೇ ದಾರಿ ತಿಳಿಯದೇ ಕಾಡಿನಲ್ಲಿಯೇ ಉಳಿದೆವು. ಆಶ್ರಮದಲ್ಲಿ$ಗುರುಗಳಿಗೆ ಚಿಂತೆಯಾಗಿ ಉದಯಕಾಲದಲ್ಲಿ ನಮ್ಮನ್ನು ಹುಡುಕಿ ಕಾಣದೆ ಬೊಬ್ಬಿ ಟ್ಟು ಕರೆದು ಕೊನೆಗೂ ಕಾಡಿನಲ್ಲಿದ್ದ ನಮ್ಮನ್ನು ಸೇರಿದರು. “ಮಕ್ಕಳೇ ಎಂದು ನಮ್ಮನ್ನು ಪ್ರೀತಿಯಿಂದ ತಬ್ಬಿಕೊಂಡು ಆಶ್ರಮಕ್ಕೆ ಕರೆದುಕೊಂಡು ಬಂದು ಉಪಚರಿಸಿದರು. ನಾವು ಕಾಡಿನಲ್ಲಿದ್ದಾಗ ಅವರಿಗಾಗಿದ್ದ ಚಿಂತೆಯೆಷ್ಟು? ನಾವು ದೊರಕಿದ ಮೇಲಾದ ಸಂತೋಷವೆಷ್ಟು! ಇಂತಹ ಗುರುಗಳೇ ಅಲ್ಲವೆ ನಿಜವಾದ ಪಾಲಕ, ಪೋಷಕ, ಮಾರ್ಗದರ್ಶಕರು?’
ಹನಿಗಣ್ಣಾಗಿ ಕೃಷ್ಣ ಹೇಳಿದ್ದನ್ನು ಅದೇ ಸ್ಥಿತಿಯಲ್ಲಿ ಕುಚೇಲನೂ ಕೇಳಿದನಂತೆ. ಬಾಲ್ಯದ ನೆನಪಿನೊಂದಿಗೆ ಗುರುವಿನ ಮಾತೃ ಹೃದಯದ ಸ್ಮರಣೆಯೂ ಶ್ರೀ ಕೃಷ್ಣನ ಈ ಕಥೆಯಲ್ಲಿದೆ. ಬಾಲ್ಯದ ಸ್ನೇಹಿತ ಕುಚೇಲನಿಂದ ಮುಷ್ಠಿ ಅವಲಕ್ಕಿ ತಿಂದು ಅವನಿಗೆ ತಿಳಿಯದಂತೆಯೇ ಶ್ರೀಮಂತನನ್ನಾಗಿ ಮಾಡಿ ಅನುಗ್ರಹಿಸಿ, ತಾನೂ ಆತನೂ ಗುರುಬಂಧುಗಳಾಗಿದ್ದುಕೊಂಡು ಕಳೆದ ದಿನಗಳನ್ನು ಮೆಲುಕು ಹಾಕಿರುವುದು ಶ್ರೀ ಕೃಷ್ಣನ ಹಿರಿಮೆ. ಶ್ರೀ ಕೃಷ್ಣನ ಮಹಿಮೆ ಜನಜೀವನದಲ್ಲಿಯೂ ಹೇಗೆ ಉಳಿದುಕೊಂಡಿದೆ ಎನ್ನುವುದಕ್ಕೆ ಗುಜರಾತಿನಲ್ಲಿ ಸುಧಾಮ(ಕುಚೇಲ)ನ ಗುಡಿಯಿದೆ. ಅಲ್ಲಿ ಅವಲಕ್ಕಿಯೇ ಪ್ರಸಾದ. ಶ್ರೀ ಕೃಷ್ಣನಿಗೆ ಕುಚೇಲ ನೀಡಿದ್ದು ಅವಲಕ್ಕಿಯೇ ಅಲ್ಲವೆ?!.
-ಡಾ| ಪಾದೇಕಲ್ಲು ವಿಷ್ಣು ಭಟ್ಟ ವಿದ್ವಾಂಸರು, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 5ನೇ ರೀಲ್ಸ್ ಪ್ರಸಾರ
Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 6ನೇ ರೀಲ್ಸ್ ಪ್ರಸಾರ
Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 7ನೇ ರೀಲ್ಸ್ ಪ್ರಸಾರ
Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 8ನೇ ರೀಲ್ಸ್ ಪ್ರಸಾರ
Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 9ನೇ ರೀಲ್ಸ್ ಪ್ರಸಾರ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Yellapur: ರಸ್ತೆಯಲ್ಲಿ ಭಾರೀ ಗಾತ್ರದ ಹೊಂಡ; ನಿಯಂತ್ರಣ ತಪ್ಪಿ ಲಾರಿ ಪಲ್ಟಿ
Bantwala: ಮಸೀದಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು
Haveri; ಖಾಸಗಿ ಬಸ್ ಪಲ್ಟಿ: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
Davanagere; ಪ್ಯಾಲೇಸ್ತೀನ್ ಬಾವುಟದ ಸ್ಟಿಕ್ಕರ್ ಅಂಟಿಸಿಕೊಂಡವರ ವಿರುದ್ಧ ಪ್ರಕರಣ ದಾಖಲು
Belagavi; ಗಣಪತಿ ಮೂರ್ತಿ ವಿಸರ್ಜನೆ ವೇಳೆ ಮೂವರಿಗೆ ಚಾಕು ಇರಿತ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.