Aamir Khan: 59ರ ವಯಸ್ಸಿನಲ್ಲಿ 3ನೇ ಮದುವೆ ಆಗ್ತಾರಾ ಆಮೀರ್?; ನಟ ಹೇಳಿದ್ದೇನು?


Team Udayavani, Aug 26, 2024, 4:25 PM IST

Aamir Khan: 59ರ ವಯಸ್ಸಿನಲ್ಲಿ 3ನೇ ಮದುವೆ ಆಗ್ತಾರಾ ಆಮೀರ್?; ನಟ ಹೇಳಿದ್ದೇನು?

ಮುಂಬಯಿ: ಬಾಲಿವುಡ್‌ ನಟ ಆಮೀರ್‌ ಖಾನ್ (‌Aamir Khan) ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಇದು ನನ್ನ ನಟನೆಯ ಕೊನೆಯ ಘಟ್ಟ ಎಂದು ಅರಿವಾಯಿತು. ಆದರೆ ಚಿತ್ರರಂಗ, ಸಮಾಜ ಮತ್ತು ನನ್ನ ದೇಶ ನನಗೆ ಸಾಕಷ್ಟು ನೀಡಿದೆ. ಹಾಗಾಗಿ ನಟನಾಗಿ ಅಲ್ಲದಿದ್ದರೂ ವರ್ಷಕ್ಕೆ ಕನಿಷ್ಠ ಒಂದಾದರೂ ಉತ್ತಮ ಸಿನಿಮಾ ನಿರ್ಮಿಸಲಿದ್ದೇನೆ. ಜತೆಗೆ, ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶವಿದೆ ಎಂದು ಇತ್ತೀಚೆಗೆ ಹೇಳಿದ್ದರು.

ಆಮೀರ್‌ ಅವರ ಈ ಮಾತು ನಟನಾ ಕ್ಷೇತ್ರಕ್ಕೆ ಅವರು ವಿದಾಯ ಹೇಳಲಿದ್ದಾರೆ ಎನ್ನುವ ಸುಳಿವನ್ನೂ ನೀಡಿತ್ತು. ಆದರೆ ಇದಾದ ಕೆಲ ದಿನಗಳ ಬಳಿಕ ಅವರು ಕಾಲಿವುಡ್‌ ನಿರ್ದೇಶಕ ಲೋಕೇಶ್ ಕನಕರಾಜ್ (Lokesh Kanagaraj) ಜತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು.

ಇದನ್ನೂ ಓದಿ: Kollywood: ರಜಿನಿ ʼವೆಟ್ಟೈಯನ್‌ʼಗೆ ದಾರಿ ಬಿಟ್ಟ ಸೂರ್ಯ; ʼಕಂಗುವʼ ರಿಲೀಸ್‌ ಮುಂದೂಡಿಕೆ?

ಇತ್ತೀಚೆಗೆ ನಟಿ ರಿಯಾ ಚಕ್ರಬರ್ತಿ(Rhea Chakraborty) ಅವರ ʼಪಾಡ್‌ಕ್ಯಾಸ್ಟ್ ಚಾಪ್ಟರ್-2ʼ ನಲ್ಲಿ ಆಮೀರ್‌ ಭಾಗಿಯಾಗಿದ್ದರು.  ಈ ಪಾಡ್‌ ಕಾಸ್ಟ್‌ನಲ್ಲಿ ಅವರು ತನ್ನ ಸಿನಿಮಾಗಳ ಸೋಲು ಹಾಗೂ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.

ರಿಯಾ ಅಮೀರ್‌ ಖಾನ್‌ ಅವರಿಗೆ ಮದುವೆಯ ಬಗೆಗಿನ ಆಲೋಚನೆ ಬಗ್ಗೆ ಕೇಳಿದಾಗ, “ನನ್ನದು ಎರಡೂ ಮದುವೆ ಕೂಡ ಸಕ್ಸಸ್‌ ಮದುವೆಯಲ್ಲ. ಆದ್ದರಿಂದ ನನ್ನಿಂದ ಮದುವೆಯ ಸಲಹೆಯನ್ನು ಕೇಳಬೇಡಿ” ಎಂದಿದ್ದಾರೆ.

ಇದನ್ನೂ ಓದಿ: Actor Darshan: ಜೈಲಿನಲ್ಲಿ ರಾಜಾರೋಷ; ದರ್ಶನ್‌ ಸೇರಿ ಹಲವರ ವಿರುದ್ಧ 3 ಪ್ರತ್ಯೇಕ FIR

ಮೂರನೇ ಬಾರಿಗೆ ಮದುವೆಯಾಗಲು ಸಿದ್ಧರಿದ್ದೀರಾ? ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅವರು,  “ನನಗೆ ಈಗ 59 ವರ್ಷ, ನಾನು ಮತ್ತೆ ಎಲ್ಲಿ ಮದುವೆಯಾಗುವುದು. ಇದು ಕಷ್ಟವೆಂದು ಕಾಣುತ್ತದೆ. ಈಗ ನನ್ನ ಜೀವನದಲ್ಲಿ ನಾನು ಅನೇಕ ಸಂಬಂಧಗಳನ್ನು ಹೊಂದಿದ್ದೇನೆ. ನನ್ನ ಕುಟುಂಬ, ನನ್ನ ಮಕ್ಕಳು ಇತ್ಯಾದಿಗಳೊಂದಿಗೆ ನಾನು ಹೆಚ್ಚು ಸಮಯವನ್ನು ಕಳೆಯಬೇಕಿದೆ” ಎಂದು ನಟ ಹೇಳಿದ್ದಾರೆ.

ಆಮೀರ್‌ ಮೊದಲು ರೀನಾ ದತ್ತಾ ಅವರೊಂದಿಗೆ ವಿವಾಹವಾಗಿದ್ದರು. ಇವರಿಗೆ ಇರಾ ಖಾನ್ ಮತ್ತು ಜುನೈದ್ ಖಾನ್ ಎನ್ನುವ ಮಕ್ಕಳಿದ್ದಾರೆ. ಇನ್ನು ಎರಡನೇ ಬಾರಿ ಕಿರಣ್‌ ರಾವ್ ಅವರೊಂದಿಗೆ ಮದುವೆ ಆಗಿದ್ದರು ಇವರಿಗೆ ಆಜಾದ್ ರಾವ್ ಖಾನ್ ಎಂಬ ಮಗನಿದ್ದಾನೆ.

ಸದ್ಯ ಆಮೀರ್‌ ಖಾನ್‌ ʼಸಿತಾರೆ ಜಮೀನ್ ಪರ್ʼ(Sitaare Zamin Par) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಆರ್‌ಎಸ್ ಪ್ರಸನ್ನ ನಿರ್ದೇಶನ ಮಾಡಲಿದ್ದಾರೆ. ಇದು ಸ್ಪ್ಯಾನಿಷ್ ಸ್ಪೋರ್ಟ್ಸ್‌ ಕಾಮಿಡಿ ʼಕ್ಯಾಂಪಿಯೋನ್ಸ್‌ʼನ (Campeones) ರಿಮೇಕ್ ಆಗಿದೆ. ಜೆನಿಲಿಯಾ ಡಿಸೋಜಾ ಹೀರೋಯಿನ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಟಾಪ್ ನ್ಯೂಸ್

1-bantwala-1

Bantwala: ಮಸೀದಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು

1-bus

Haveri; ಖಾಸಗಿ ಬಸ್ ಪಲ್ಟಿ: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

1-belgavi

Belagavi; ಗಣಪತಿ ಮೂರ್ತಿ ವಿಸರ್ಜನೆ ವೇಳೆ ಮೂವರಿಗೆ ಚಾಕು ಇರಿತ!!

1-trfff

PM Modi ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಘೋಷಿಸಿದ ಟ್ರಂಪ್

Auction of more than 600 gifts received by Modi has started

Auction; ಮೋದಿಗೆ ಸಿಕ್ಕ 600ಕ್ಕೂ ಅಧಿಕ ಉಡುಗೊರೆಗಳ ಹರಾಜು ಶುರು

Panamburu

Mangaluru: ಕಿರಿದಾಗುತ್ತಿದೆ‌ ಪಣಂಬೂರು ಬೀಚ್‌! ಇನ್ನೂ ಖಚಿತವಾಗದ ಕಾರಣ

Pililkula

Biological Park: ಪಿಲಿಕುಳಕ್ಕೆ ಪೆಂಗ್ವಿನ್‌, ಅನಕೊಂಡ ತರಿಸುವ ಮಹತ್ವದ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dhoom 4: ಬಾಲಿವುಡ್ ʼಧೂಮ್-4‌ʼ‌ ನಲ್ಲಿ ಸೌತ್‌ ಸ್ಟಾರ್‌ ಸೂರ್ಯ ವಿಲನ್?‌

Dhoom 4: ಬಾಲಿವುಡ್ ʼಧೂಮ್-4‌ʼ‌ ನಲ್ಲಿ ಸೌತ್‌ ಸ್ಟಾರ್‌ ಸೂರ್ಯ ವಿಲನ್?‌

Tumbbad 2: ಪ್ರಳಯ್ ಆಯೇಗಾ..‌ ಹಾರರ್‌ ಥ್ರಿಲ್ಲರ್‌ ‘ತುಂಬಾಡ್ʼ ಸೀಕ್ವೆಲ್‌ ಅನೌನ್ಸ್

Tumbbad 2: ಪ್ರಳಯ್ ಆಯೇಗಾ..‌ ಹಾರಾರ್‌ ಥ್ರಿಲ್ಲರ್‌ ‘ತುಂಬಾಡ್ʼ ಸೀಕ್ವೆಲ್‌ ಅನೌನ್ಸ್

Jawan‌ Movie: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ಶಾರುಖ್‌ – ಅಟ್ಲಿ ʼಜವಾನ್‌ʼ

Jawan‌ Movie: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ಸೂಪರ್‌ ಹಿಟ್ ʼಜವಾನ್‌ʼ

10

Actor James Hollcroft: ಕೆಲ ದಿನಗಳ ಹಿಂದಷ್ಟೇ ನಾಪತ್ತೆಯಾಗಿದ್ದ ನಟ ಶವವಾಗಿ ಪತ್ತೆ

Anil Mehta: ಮಲೈಕಾ ಆರೋರಾ ತಂದೆ ಆ*ತ್ಮಹ*ತ್ಯೆ; ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನಿದೆ?

Anil Mehta: ಮಲೈಕಾ ಆರೋರಾ ತಂದೆ ಆ*ತ್ಮಹ*ತ್ಯೆ; ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನಿದೆ?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

2-yellapur

Yellapur: ರಸ್ತೆಯಲ್ಲಿ ಭಾರೀ ಗಾತ್ರದ ಹೊಂಡ; ನಿಯಂತ್ರಣ ತಪ್ಪಿ ಲಾರಿ ಪಲ್ಟಿ

1-bantwala-1

Bantwala: ಮಸೀದಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು

1-bus

Haveri; ಖಾಸಗಿ ಬಸ್ ಪಲ್ಟಿ: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

police

Davanagere; ಪ್ಯಾಲೇಸ್ತೀನ್ ಬಾವುಟದ ಸ್ಟಿಕ್ಕರ್ ಅಂಟಿಸಿಕೊಂಡವರ ವಿರುದ್ಧ ಪ್ರಕರಣ ದಾಖಲು

1-belgavi

Belagavi; ಗಣಪತಿ ಮೂರ್ತಿ ವಿಸರ್ಜನೆ ವೇಳೆ ಮೂವರಿಗೆ ಚಾಕು ಇರಿತ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.