Heavy Rain: ಘಟಪ್ರಭಾ ನದಿ ಹರಿವು ಹೆಚ್ಚಳ : ಮತ್ತೆ ಮೂರು ಸೇತುವೆಗಳು ಜಲಾವೃತ
ಹಲವು ಗ್ರಾಮಗಳ ಸಂಪರ್ಕ ರಸ್ತೆಗಳು ಕಡಿತ, ಸೇತುವೆಗಳ ಮೇಲಿನ ಸಂಚಾರ ನಿಷೇಧ: ಎಸಿ
Team Udayavani, Aug 26, 2024, 10:44 PM IST
ಮಹಾಲಿಂಗಪುರ: ಪಶ್ಚಿಮ ಘಟ್ಟಗಳ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಕಳೆದ 4-5 ದಿನಗಳಿಂದ ಘಟಪ್ರಭಾ ನದಿಯು ತುಂಬಿ ಹರಿಯುತ್ತಿದೆ.
ರವಿವಾರ ಸಂಜೆ ಎರಡು, ಸೋಮವಾರ ಮುಂಜಾನೆ ಒಂದು ಸೇರಿದಂತೆ ಮೂರು ಸೇತುವೆಗಳು ಜಲಾವೃತವಾಗಿದೆ. ವ್ಯಾಪಕ ಮಳೆಯಿಂದಾಗಿ ಕಳೆದ ಜು. 22 ರಿಂದ ಆ.9 ರವರೆಗೆ ಸೇತುವೆಗಳು ಜಲಾವೃತವಾಗಿದ್ದವು. ಈಗ 15 ದಿನಗಳ ಅಂತರದಲ್ಲಿ ಮತ್ತೇ ಸೇತುವೆಗಳು ಜಲಾವೃತವಾದ್ದರಿಂದ ನದಿ ಪಾತ್ರದ ಗ್ರಾಮಸ್ಥರಿಗೆ ಮತ್ತೆ ನೆರೆಯ ಭೀತಿ ಪ್ರಾರಂಭವಾಗಿದೆ.
ನಂದಗಾಂವ, ಢವಳೇಶ್ವರ-ಮಿರ್ಜಿ ಸೇತುವೆಗಳು ಜಲಾವೃತ :
ಸಮೀಪದ ಢವಳೇಶ್ವರ-ಢವಳೇಶ್ವರ, ಮಿರ್ಜಿ-ಅಕ್ಕಿಮರಡಿ, ನಂದಗಾಂವ-ಅವರಾದಿ ಸೇತುವೆಗಳು ಜಲಾವೃತವಾಗಿವೆ. ಮೂರು ಸೇತುವೆಗಳ ಮೇಲೆ ಸುಮಾರು 2-3 ಅಡಿಗೂ ಅಧಿಕ ನೀರು ಹರಿಯುತ್ತಿರುವ ಕಾರಣ ಸೇತುವೆಗಳ ಮೇಲಿನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಹಲವು ಗ್ರಾಮಗಳ ಸಂಪರ್ಕ ಕಡಿತ :
ಢವಳೇಶ್ವರ, ಮಿರ್ಜಿ, ನಂದಗಾಂವ ಸೇರಿ ಮೂರು ಸೇತುವೆಗಳ ಜಲಾವೃತದಿಂದಾಗಿ ಮಹಾಲಿಂಗಪುರದಿಂದ ಮುಧೋಳ ತಾಲೂಕಿನ ಮಿರ್ಜಿ, ಒಂಟಗೋಡಿ, ಚನ್ನಾಳ, ಮಲ್ಲಾಪೂರ ಗ್ರಾಮಗಳು ಹಾಗೂ ಬೆಳಗಾವಿ ಜಿಲ್ಲೆಯ ಗಡಿಭಾಗದ ಮೂಡಲಗಿ ತಾಲೂಕಿನ ಢವಳೇಶ್ವರ, ಬಿಸನಕೊಪ್ಪ, ಹುಣಶ್ಯಾಳ ಪಿವೈ, ವೆಂಕಟಾಪೂರ, ಅವರಾದಿ, ಅಳ್ಳಿಮಟ್ಟಿ, ಯರಗುದ್ರಿ, ತಿಮ್ಮಾಪೂರ, ಹೊಸ ಯರಗುದ್ರಿ, ಕುಲಗೋಡ, ಕೌಲಜಗಿ ಗ್ರಾಮಗಳಿಗೆ ಹೋಗುತ್ತಿದ್ದ ಸಂಪರ್ಕ ರಸ್ತೆಗಳ ಕಡಿತವಾಗಿ ಈ ಗ್ರಾಮಗಳಿಗೆ ಹೋಗುವವರು ಗೋಕಾಕ, ಮುಧೋಳ, ಯಾದವಾಡ ಮಾರ್ಗವಾಗಿ 50-60 ಕಿಮೀ ಸುತ್ತುವರಿದು ಬರುವಂತಹ ಸ್ಥಿತಿ ನಿರ್ಮಾಣವಾಗಿದೆ.
ಘಟಪ್ರಭಾ ನದಿಗೆ 25 ಸಾವಿರ ಕ್ಯೂಸೆಕ್ ನೀರು :
ದುಪದಾಳ ಜಲಾಶಯದಿಂದ 22150 ಕ್ಯೂಸೆಕ್, ಮಾರ್ಕಂಡೇಯ ಜಲಾಶಯದಿಂದ 1771 ಕ್ಯೂಸೆಕ್, ಬಳ್ಳಾರಿ ನಾಲಾದಿಂದ 1339 ಕ್ಯೂಸೆಕ್ ಸೇರಿ ಸರಿ ಸುಮಾರು 25260 ಕ್ಯೂಸೆಕ್ ನೀರು ಘಟಪ್ರಭಾ ನದಿಗೆ ಹರಿದು ಬರುತ್ತಿದೆ. ಗರಿಷ್ಠ 51 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯಯುಳ್ಳ ಹಿಡಕಲ್ ಜಲಾಶಯದಲ್ಲಿ ಸೋಮವಾರ ಮುಂಜಾನೆವರೆಗೆ ಸುಮಾರು 49 ಟಿಎಂಸಿ ನೀರಿನ ಸಂಗ್ರಹವಾಗಿದೆ. ಸದ್ಯ ಜಲಾಶಯಕ್ಕೆ 14588 ಕ್ಯೂಸೆಕ್ ಒಳಹರಿವು ಇದ್ದು, ಜಲಾಶಯದಿಂದ 16833 ಕ್ಯೂಸೆಕ್ ಹೊರ ಹರಿವು ಇದೆ.
ಮುಂಜಾಗ್ರತೆ ಅಗತ್ಯ :
ಘಟಪ್ರಭಾ ನದಿ ಪಾತ್ರದ ಗ್ರಾಮಗಳ ಜನತೆಯು ಸುರಕ್ಷಿತರಾಗಿರಬೇಕು. ಸೇತುವೆಗಳ ಮೇಲೆ ನೀರು ಕಡಿಮೆ ಇದೆ ಎಂದು ಯಾರು ದಾಟುವ ಸಾಹಸ ಮಾಡಬೇಡಿ. ಸೇತುವೆಗಳ ಮೇಲಿನ ಸಂಚಾರ ನಿಷೇಧಿಸಲಾಗಿದೆ. ಸಣ್ಣ ನೀರಾವರಿ ಇಲಾಖೆ ಮತ್ತು ತಾಪಂ, ಗ್ರಾಪಂ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕು. ಜೊತೆಗೆ ಸಾರ್ವಜನಿಕರು ಮುಂಜಾಗ್ರತೆವಹಿಸುವದು ಅಗತ್ಯ. – ಶ್ವೇತಾ ಬೀಡಿಕರ್, ಎಸಿ, ಜಮಖಂಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rabkavi Banhatti: ತೇರಿನ ಮೇಲಿನಿಂದ ಬಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು
ಮಹಾಲಿಂಗಪುರದ ಮಹಾಜಾತ್ರೆ…: ಲಕ್ಷಾಂತರ ಭಕ್ತರು ಭಾಗಿ… ರಾತ್ರಿಯಿಡಿ ಸಾಗುವ ರಥೋತ್ಸವ
Pak flag ಹಾರಾಡುವ ವಾಟ್ಸಪ್ ಸ್ಟೇಟಸ್: ಯುವಕ ಪೊಲೀಸರ ವಶಕ್ಕೆ
Mudhol: ಆರ್ಎಸ್ಎಸ್ನಿಂದ ದೇಶಕ್ಕೆ ಕಂಟಕ: ಆರ್.ಬಿ.ತಿಮ್ಮಾಪುರ
Farmers; ರೈತನ ಬೆಳೆ ಕಾಯುಲು ಸಿನಿ ತಾರೆಯರು; ಉತ್ತಮ ಬೆಳೆಗೆ ರೈತನ ಹೊಸ ಪ್ರಯೋಗ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Job Opportunities:ಪಂಜಾಬ್ and ಸಿಂಧ್ ಬ್ಯಾಂಕ್-213 ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?
Kannada Cinema: ರವಿ ಶ್ರೀವತ್ಸ ಅವರ ಗ್ಯಾಂಗ್ಸ್ ಆಫ್ ಯುಕೆ
Udupi: ಯುಜಿಡಿ ಚೇಂಬರ್ ಅವ್ಯವಸ್ಥೆಗಿಲ್ಲ ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.