Kolkata; ವೈದ್ಯೆ ರೇಪ್ ಮೊದಲು ಗೆಳತಿ ಬೆತ್ತಲೆ ಫೋಟೊ ವೀಕ್ಷಿಸಿದ್ದ!!
ಟ್ರೈನಿ ವೈದ್ಯೆ ಅತ್ಯಾಚಾರ, ಕೊಲೆ ಒಪ್ಪಿಕೊಂಡ ಆರೋಪಿ... ಸ್ನೇಹಿತನ ಜತೆ ರೆಡ್ಲೈಟ್ ಪ್ರದೇಶಕ್ಕೆ ಭೇಟಿ: ವರದಿ
Team Udayavani, Aug 27, 2024, 6:55 AM IST
ಹೊಸದಿಲ್ಲಿ: ಕೋಲ್ಕತಾ ಟ್ರೈನಿ ವೈದ್ಯೆ ಅತ್ಯಾಚಾರ ನಡೆಸಿ, ಕೊಲೆ ಮಾಡಿರುವುದಾಗಿ ಆರೋಪಿ ಸಂಜಯ್ ರಾಯ್ ಸುಳ್ಳು ಪತ್ತೆ ಪರೀಕ್ಷೆಯಲ್ಲಿ ಒಪ್ಪಿಕೊಂಡಿ ರುವುದಾಗಿ ಹಲವು ಮಾಧ್ಯಮಗಳು ವರದಿ ಮಾಡಿವೆ.
ವೈದ್ಯೆಯ ಕೊಲೆ ನಡೆಸುವ ಮುಂಚೆ ಸಂಜಯ್ ತನ್ನ ಸ್ನೇಹಿತನ ಜತೆಗೂಡಿ ಕೋಲ್ಕತಾದ 2 ರೆಡ್ಲೈಟ್ ಪ್ರದೇಶಗಳಿಗೆ ಭೇಟಿ ನೀಡಿದ್ದ. ಆದರೆ ಸೆಕ್ಸ್ ಮಾಡಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ.
ಮೊದಲು ಸೋನಾಗಚಿ ರೆಡ್ಲೈಟ್ಗೆ ಸ್ನೇಹಿತನ ಜತೆಗೂಡಿ ಹೋದೆ. ಆದರೆ ಅಲ್ಲಿ ಯಾವುದೇ ಉಪಯೋಗವಾಗದ್ದರಿಂದ ಬಳಿಕ ಮತ್ತೂಂದು ರೆಡ್ ಲೈಟ್ ಏರಿಯಾ ಚೆಟ್ಲಾಗೆ ಹೋದೆವು. ಅಲ್ಲಿಗೆ ಹೋಗು ವಾಗ ದಾರಿ ಮಧ್ಯೆ ಮಹಿಳೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದೆವು. ಚೆಟ್ಲಾದಲ್ಲಿ ನನ್ನ ಸ್ನೇಹಿತ ಸೆಕ್ಸ್ ಮಾಡಿದ. ಈ ವೇಳೆ ನಾನು, ನನ್ನ ಗೆಳತಿಗೆ ವೀಡಿಯೋ ಕಾಲ್ ಮಾಡಿ, ಬೆತ್ತಲೆ ಫೋಟೋ ಕಳುಹಿಸುವಂತೆ ಕೇಳಿದೆ. ಅವಳು ತನ್ನ ಬೆತ್ತಲೆ ಫೋಟೋ ಕಳುಹಿಸಿದಳು. ಬಳಿಕ ಅಲ್ಲಿಂದ ನೇರವಾಗಿ ಆರ್ಜಿ ಕಾರ್ ಆಸ್ಪತ್ರೆಗೆ ಬಂದೆವು. ನಾನು ನೇರವಾಗಿ 4ನೇ ಅಂತಸ್ತಿಗೆ ಹೋದೆ. ಅಲ್ಲಿನ ಸೆಮಿನಾರ್ ಹಾಲ್ನಲ್ಲಿ ಮಲಗಿದ್ದ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿ ಸೀದಾ ಸ್ನೇಹಿತ ಎಎಸ್ಐ ಮನೆಗೆ ಹೋದೆ ಎಂದು ಆರೋಪಿ ಸಂಜಯ್ ಹೇಳಿದ್ದಾನೆ. ಆರೋಪಿ ಹೇಳಿದ ವಿಷಯಗಳು ಅಷ್ಟೂ ದೃಢಪಟ್ಟಿವೆ ಎನ್ನಲಾಗಿದೆ. ಹಾಗಿದ್ದೂ, ಅನೇಕ ವಿಷಯಗಳಲ್ಲಿ ಆತ ಸುಳ್ಳು ಹೇಳಿದ್ದಾನೆ ಎನ್ನಲಾಗಿದೆ. ಈತನ ಮೊಬೈಲ್ನಲ್ಲಿ ಸಾಕಷ್ಟು ಅಶ್ಲೀಲ ವೀಡಿಯೋಗಳ ಚಿತ್ರಿಕೆಗಳಿದ್ದವು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಮಾಜಿ ಪ್ರಿನ್ಸಿಪಾಲ್ಗೆ 2ನೇ ದಿನ ಸುಳ್ಳು ಪತ್ತೆ ಪರೀಕ್ಷೆ
ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಇತರೆ 5 ಆರೋಪಿಗಳ ಮೇಲೆ 2ನೇ ಹಂತದ ಸುಳ್ಳು ಪತ್ತೆ ಪರೀಕ್ಷೆ ನಡೆಸಲಾಗಿದೆ. ತನಿಖೆ ಯಲ್ಲಿ ಘೋಷ್ ಅಸಮಂಜಸ ಉತ್ತರಗಳನ್ನು ನೀಡುತ್ತಿ ರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತೂಂದು ಸುತ್ತಿನ ಸುಳ್ಳು ಪತ್ತೆ ಪರೀಕ್ಷೆ ನಡೆಸು ತ್ತಿದ್ದಾರೆ. ಅತ್ಯಾಚಾರದ ತನಿಖೆಯೊಂದಿಗೆ ಆಸ್ಪತ್ರೆ ಯಲ್ಲಿ ನಡೆದಿರುವ ಹಣಕಾಸು ಅವ್ಯವಹಾರಗಳ ಕುರಿತು ಕೂಡ ತನಿಖೆ ನಡೆಸುತ್ತಿದೆ.
ಬಂಗಾಲದಲ್ಲಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ಶುರು ಏಕಿಲ್ಲ?: ಕೇಂದ್ರ
ಪಶ್ಚಿಮ ಬಂಗಾಲದಲ್ಲಿ ಅತ್ಯಾಚಾರ ಸೇರಿ ಮಹಿಳೆಯರ ವಿರುದ್ಧದ ಪ್ರಕರಣಗಳ ತನಿಖೆಗೆ ತ್ವರಿತ ಗತಿ ಕೋರ್ಟ್ಗಳನ್ನು ಸ್ಥಾಪಿಸಲು ಅನುಮೋದನೆ ನೀಡ ಲಾಗಿ ದ್ದರೂ, ಏಕೆ ಆರಂಭಿ ಸ ಲಾಗಿಲ್ಲ ಎಂದು ಕೇಂದ್ರ ಸರಕಾರ ಪ್ರಶ್ನಿಸಿದೆ. ಟ್ರೈನಿ ವೈದ್ಯೆ ಮೇಲೆ ಅತ್ಯಾ ಚಾರ, ರೇಪ್ ನಡೆದಿದ್ದ ಪ್ರಕರಣ ಖಂಡಿಸಿ ಕಠಿನ ಕಾನೂನು ಜಾರಿಗೆ ತರಬೇಕು ಎಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಮಮತಾ ಬ್ಯಾನರ್ಜಿಗೆ ಉತ್ತರಿಸಿದ ಕೇಂದ್ರ ಸಚಿವೆ ಅನ್ನಪೂರ್ಣಾ ದೇವಿ, ಮಹಿಳೆಯರ ಸಹಾಯವಾಣಿ ಆರಂಭಿಸುವಂತೆ ಸೂಚಿಸಲಾಗಿತ್ತು. ಅದು ಇನ್ನೂ ಶುರುವಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
Jammu Kashmir: ಯುವಕರ ಕೈಯಲ್ಲೀಗ ಕಲ್ಲುಗಳಿಲ್ಲ, ಪೆನ್ನು-ಪುಸ್ತಕಗಳಿವೆ: ಪ್ರಧಾನಿ ಮೋದಿ
West Bengal: ಪ್ರವಾಹ ಪರಿಸ್ಥಿತಿ ಅವಲೋಕಿಸಲು ಹೋದ ಸಂಸದರು, ಶಾಸಕರಿದ್ದ ದೋಣಿ ಪಲ್ಟಿ
ಪ್ರತೀ ಪೇಜರ್ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್ನ ಮೊಸಾದ್?
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್, ಜಡೇಜಾ; ಶತಕ ಬಾರಿಸಿದ ಲೋಕಲ್ ಬಾಯ್
Contractors Association ಅಧ್ಯಕ್ಷ ಕೆಂಪಣ್ಣ ವಿಧಿವಶ; ಗಣ್ಯರ ಸಂತಾಪ
Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!
Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ
Sep.20: ಮುನಿಯಾಲ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಕಾಲೇಜು ಘಟಿಕೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.