ಕೊಪ್ಪಳ- ಗ್ರಾನೈಟ್ ಪಾಲೀಶ್ ಘಟಕ ಜೀವಕ್ಕೆ ಮಾರಕ: ಸಾರ್ವಜನಿಕರ ವಿರೋಧ
Team Udayavani, Aug 27, 2024, 11:20 AM IST
ಕುಷ್ಟಗಿ: ಕೈಗಾರಿಕಾ ಪ್ರದೇಶ ಸೇರಿದಂತೆ ವಿವಿಧ ಗ್ರಾನೈಟ್ ಪಾಲೀಶ್ ಘಟಕಗಳಿಂದ ವಿಸರ್ಜಿಸುವ ಮಡ್ (ದ್ರವ ರೂಪದ ತ್ಯಾಜ್ಯ) ಪರಿಸರಕ್ಕೆ ಮಾರಕವಾಗಿರುವುದಲ್ಲದೇ ಜೀವ ಜಂತುಗಳಿಗೆ ಮಾರಕವಾಗಿದೆ.
ಕುಷ್ಟಗಿಯಲ್ಲಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಈ ಗ್ರಾನೈಟ್ ಪಾಲೀಸ್ ಕಾರ್ಖಾನೆಗಳು ತಲೆ ಎತ್ತಿದ ಸಂದರ್ಭದಲ್ಲಿ ತ್ಯಾಜ್ಯದ ಮಡ್ ಹಳ್ಳ, ತಗ್ಗು ಪ್ರದೇಶದ ಎಲ್ಲೆಂದರಲ್ಲಿ ಸುರಿಯುತ್ತಿದ್ದರು. ಈ ಬೆಳವಣಿಗೆ ಸಾರ್ವಜನಿಕವಾಗಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಕುಷ್ಟಗಿ ಕೈಗಾರಿಕಾ ಪ್ರದೇಶದ ಗ್ರಾನೈಟ್ ಮಾಲೀಕರು, ಕುಷ್ಟಗಿ-ಇಲಕಲ್ ಚತುಷ್ಪಥ ರಾಷ್ಟ್ರೀಯ
ಹೆದ್ದಾರಿಯಿಂದ ದೋಟಿಹಾಳ ರಸ್ತೆಗೆ ಹೊಂದಿಕೊಂಡಿರುವ ಸ್ಥಳದಲ್ಲಿ 6 ಎಕರೆ ಜಮೀನು ಖರೀದಿಸಿದ್ದಾರೆ.
ಈಗಾಗಲೇ ಇಪ್ಪತ್ತಕ್ಕೂ ಅಧಿಕ ಅಡಿ ಆಳ ಗ್ರಾನೈಟ್ ದ್ರವ ರೂಪದ ತ್ಯಾಜ್ಯ ತುಂಬಿಸಿದ್ದು ಅಲ್ಲದೇ ನೆಲಮಟ್ಟದಿಂದ 3 ಅಡಿ ಎತ್ತರಕ್ಕೇರಿದೆ. ಭರ್ತಿಯಾದ ಘಟಕದಿಂದ ಕಲ್ಲಿನ ಪುಡಿ ಗಾಳಿಗೆ ಹಾರಿ ರೈತರ ಜಮೀನು ಸೇರುತ್ತಿದ್ದು ಫಲವತ್ತತೆ ನಾಶವಾಗುವ ಆತಂಕ, ಮಳೆ ನೀರು ಇಂಗಿ, ಕುರಿಗಳು, ನಾಯಿ ಸೇರಿದಂತೆ ಜಾನುವಾರು ಸಿಲುಕಿ ಹೊರ ಬರಲಾರದೇ ಜೀವ ಕಳೆದುಕೊಳ್ಳುತ್ತಿರುವುದು ಮತ್ತೊಂದೆಡೆಯಾಗಿದೆ. ಈ ಘಟಕ ಸಂಪೂರ್ಣ ಬಂದ್ ಮಾಡಿ, ಬೇರೆಡೆ ಸ್ಥಳಾಂತರಿಸಬೇಕಿದೆ ಎಂದು ರೈತರಾದ ಸಂಗಪ್ಪ ಬಳ್ಳೋಡಿ ಒತ್ತಾಯಿಸಿದ್ದಾರೆ.
ಕುರಿಯೊಂದು ಗ್ರಾನೈಟ್ ತ್ಯಾಜ್ಯ ಘಟಕದಲ್ಲಿ ಸಿಲುಕಿ ಸತ್ತಿರುವ ಪ್ರಕರಣ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅಶೋಕ ಶಿಗ್ಗಾವಿ, ಪಶು ವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ| ಆನಂದ ದೇವರನಾವದಗಿ, ಕಂದಾಯ ನಿರೀಕ್ಷಕ ಉಮೇಶಗೌಡ್ರು, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಗ್ರಾನೈಟ್ ಪಾಲಿಶ್ ಕಾರ್ಖಾನೆಯಿಂದ ಹೊರಬರುವ ತ್ಯಾಜ್ಯದ ಘಟಕದಲ್ಲಿ ಕುರಿಯೊಂದು ಸತ್ತಿರುವುದು ಗಮನಕ್ಕೆ ಬಂದಿದೆ.
ಸಂಬಂಧಿಸಿದವರಿಂದ ಮಾಹಿತಿ ತರಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳುವೆ.
ಅಶೋಕ, ಶಿಗ್ಗಾವಿ ತಹಶೀಲ್ದಾರ್ ಕುಷ್ಟಗಿ
ಗ್ರಾನೈಟ್ ತ್ಯಾಜ್ಯ ಘಟಕದ ಮಡ್ನಲ್ಲಿ ಸಿಲುಕಿ ಸತ್ತಿರುವ ಕುರಿ ಹೊರಗೆ ತೆಗೆಯಲಾಗಿದ್ದು, ಸತ್ತಿರುವ ಕುರಿ ಕೊಳೆತಿದ್ದು, ನಾಯಿಗಳು ತಿಂದು ಹಾಕಿದ್ದು ಪೋಸ್ಟ್ಮಾರ್ಟಂ ಮಾಡುವಷ್ಟು ದೇಹ ಉಳಿಸಿಲ್ಲ ಬರೀ ಚರ್ಮ ಮಾತ್ರ ಉಳಿಸಿವೆ. ಪರಿಹಾರಕ್ಕೆ ಪತ್ರ
ಬರೆಯಲಾಗುವುದು.
ಡಾ| ಆನಂದ ದೇವರನಾವದಗಿ,
ಪಶು ವೈದ್ಯಕೀಯ ಸೇವಾ ಇಲಾಖೆ ಕುಷ್ಟಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿಯಮಮೀರಿ ಮಹಿಳಾ ಸದಸ್ಯರ ಪತಿರಾಯರು,ಸಂಬಂಧಿಗಳು ಭಾಗಿ
Koppal; ಪ್ರಚೋದನಕಾರಿ ಹೇಳಿಕೆ ಕೊಟ್ಟರೆ ಸಹಿಸಲ್ಲ: ಸಚಿವ ಶಿವರಾಜ ತಂಗಡಗಿ
ಕೊಪ್ಪಳ: ಅದಾಲತ್ನಲ್ಲಿ ಒಂದಾದ 14 ಜೋಡಿ ಇತ್ಯರ್ಥವಾದ 35,721 ಪ್ರಕರಣಗಳು
Koppala: ಮುನಿರತ್ನ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ: ಸಚಿವ ಶಿವರಾಜ ತಂಗಡಗಿ
ಗಂಗಾವತಿ: ಮೀಸಲು ಅರಣ್ಯದಲ್ಲಿ ಅವ್ಯಾಹತ ಮರಳು ದಂಧೆ – ಹದಗೆಟ್ಟ ರಸ್ತೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.