Udupi ಗೀತಾರ್ಥ ಚಿಂತನೆ-19: ದೇವರಿಚ್ಛೆಯ ಅರಿವು ಬರಲು ಸತತ ಜಿಜ್ಞಾಸೆ
Team Udayavani, Aug 27, 2024, 11:57 PM IST
“ವೃತ್ತಿ’ ಎನ್ನುವುದಕ್ಕೆ ಮನೋವೃತ್ತಿ ಎಂಬರ್ಥವಿದೆ. ಈಗ ವೃತ್ತಿ ಎನ್ನುವುದನ್ನು “ಉದ್ಯೋಗ’ ಎಂಬರ್ಥದಲ್ಲಿ ಕಾಣುತ್ತೇವೆ. ಮನೋವೃತ್ತಿ ಎಲ್ಲ ಪ್ರಾಣಿಗಳಿಗೂ ಅನ್ವಯ. ಪ್ರತಿಯೊಂದು ಪ್ರಾಣಿಯೂ (ಜೀವಿಗಳೂ) ಕರ್ಮ ಮತ್ತು ಸ್ವಭಾವಕ್ಕೆ ತಕ್ಕುದಾಗಿ ವ್ಯವಹರಿಸುತ್ತವೆ. ಸರ್ವಜೀವಿಗಳ ಉದ್ಧಾರವನ್ನುದ್ದೇಶಿಸಿ ಭಗವಂತ ವೇದವ್ಯಾಸರಾಗಿ ಅವತರಿಸಿದ ಎಂದದ್ದು ಇದೇ ಕಾರಣಕ್ಕೆ.
ಪ್ರಾಣಿ, ಪಕ್ಷಿಗಳಿಗೂ ಮಾನಸಿಕ ವೃತ್ತಿ ಇದ್ದೇ ಇರುತ್ತದೆ. ಇದರ ಆಧಾರದಲ್ಲಿಯೇ ಆ ಜೀವ ವಿಕಾಸಗೊಳ್ಳುತ್ತ ಮುಂದುವರಿದು ಮನುಷ್ಯನಾಗಿ ಮತ್ತೆ ಮೋಕ್ಷದತ್ತ ಪಯಣಿಸುತ್ತದೆ. ಇದಕ್ಕೆ ಪೂರಕವಾಗಿ ಧರ್ಮಶಾಸ್ತ್ರಗಳು ಹೇಳಲ್ಪಟ್ಟಿವೆ. ಅವರವರ ಯೋಗ್ಯತೆಗೆ ಅನುಸಾರವೇ ಅವರವರ ಚಿಂತನೆ ಮೊಳಕೆಯೊಡೆಯುತ್ತವೆ.
ರಾವಣನ ಆಸ್ಥಾನದಲ್ಲಿಯೇ ವಿಭೀಷಣನಿದ್ದರೂ ಇಬ್ಬರ ಚಿಂತನೆಗಳು ಭಿನ್ನ ಭಿನ್ನ ಆಗಿದ್ದವು. ಏಕೆ ಎಂದು ಕೇಳಿದರೆ ಆಯಾ ಜೀವದ ಯೋಗ್ಯತೆ ಕಾರಣ. ಒಳ್ಳೆಯವರೂ ಕರ್ಮದ ಕಾರಣದಿಂದ ದಾರಿ ತಪ್ಪುವುದಿದೆ, ಆದರೆ ಕೊನೆಗೆ ತನ್ನ ಸ್ವಭಾವಕ್ಕೆ ಮರಳುತ್ತಾರೆ. ದೇವರ ಇಚ್ಛೆಯನ್ನು ಅರಿಯಲು ವಿಮರ್ಶೆ (ಚಿಂತನೆ) ಮಾಡುತ್ತಲೇ ಇರಬೇಕಾಗುತ್ತದೆ. ನಮ್ಮಿಂದ ಭಗವಂತ ಏನನ್ನು ಮಾಡಲು ಉದ್ದೇಶಿಸಿದ್ದಾನೆ ಎಂಬ ಚಿಂತನೆ ಸತತ ಇರಬೇಕು. ನಾವು ಮಾಡುವ ಕಾರ್ಯ ವಿಹಿತವೂ, ಸತ್ಕಾರ್ಯವೂ ಆಗಿರಬೇಕು.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Vijayapura: ಗ್ರಾ.ಪಂ ಕಾಯಕ ಮಿತ್ರ ಸಿಬ್ಬಂದಿ ಮೇಲೆ ಗ್ರಾಪಂ ಉಪಾಧ್ಯಕ್ಷೆ ಚಪ್ಪಲಿಯಿಂದ ಹಲ್ಲೆ
Sagara: ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಮೆಸ್ಕಾಂ ನೀತಿ ಖಂಡನೆ; ಪ್ರತಿಭಟನೆ
Job Opportunities:ಪಂಜಾಬ್ and ಸಿಂಧ್ ಬ್ಯಾಂಕ್-213 ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.