Cat; ಚಿತ್ರ ನಿರ್ದೇಶಕಿಯ ಮನೆಗೆ ನುಗ್ಗಿದ ಕಳ್ಳ: ಬೆಕ್ಕಿನಿಂದಾಗಿ ಹೆದರಿ ಪರಾರಿ!
Team Udayavani, Aug 28, 2024, 9:59 AM IST
ಮುಂಬೈ: ಮರಾಠಿ ಚಲನಚಿತ್ರ ನಿರ್ದೇಶಕಿ ಸ್ವಪ್ನಾ ಜೋಶಿ ಅವರ ಮುಂಬೈನಲ್ಲಿರುವ ಫ್ಲಾಟ್ಗೆ ಕಳ್ಳನೊಬ್ಬ ನುಗ್ಗಿ 6,000 ರೂಪಾಯಿ ನಗದು ಹಣದೊಂದಿಗೆ ಪರಾರಿಯಾಗಿದ್ದಾನೆ ಎಂದು ಮಂಗಳವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಮವಾರ, ಅಂಧೇರಿ (ಪಶ್ಚಿಮ) ದಲ್ಲಿರುವ ಜೋಶಿ ಅವರ ಫ್ಲಾಟ್ಗೆ ಭಾನುವಾರ ಪ್ರವೇಶಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಅಂಬೋಲಿ ಪೊಲೀಸ್ ಠಾಣೆಯ ಅಧಿಕಾರಿಯ ಪ್ರಕಾರ, ಕಳ್ಳನು ಡ್ರೈನೇಜ್ ಪೈಪ್ ಮೂಲಕ ಮರಾಠಿ ನಿರ್ದೇಶಕಿಯ ಫ್ಲ್ಯಾಟ್ಗೆ ನುಸುಳಿದ್ದಾನೆ. ಮನೆಯಲ್ಲಿದ್ದ ಸಾಕು ಬೆಕ್ಕು ಅಪರಿಚಿತನನ್ನು ಕಂಡು ಆತಂಕಕಾರಿ ಶಬ್ದ ಮಾಡಿದ ನಂತರ ಮನೆಯಲ್ಲಿದ್ದ ನಿರ್ದೇಶಕಿಯ ಅಳಿಯ ಎಚ್ಚೆತ್ತುಕೊಂಡಿದ್ದಾರೆ.
ಫ್ಲಾಟ್ನಲ್ಲಿ ಅಳವಡಿಸಲಾದ ಸಿಸಿಟಿವಿ ಕೆಮರಾಗಳನ್ನು ಪರಿಶೀಲಿಸಿದಾಗ, ಬೆಳಗಿನ ಜಾವ 3.10 ರಿಂದ 3.30 ರ ನಡುವೆ ಡ್ರೈನೇಜ್ ಪೈಪ್ ಹತ್ತಿ ಕಿಟಕಿಯಿಂದ ಟಿ-ಶರ್ಟ್ ಮತ್ತು ಶಾರ್ಟ್ಸ್ ಧರಿಸಿದ್ದ ಕಳ್ಳ ಮನೆಗೆ ಪ್ರವೇಶಿಸುವುದನ್ನು ಕಂಡಿದ್ದಾರೆ.
ಮನೆಯಲ್ಲಿ ಮಲಗಿದ್ದ ನಿರ್ದೇಶಕಿಯ ವೃದ್ಧ ತಾಯಿಯ ಕೋಣೆಗೆ ಕಳ್ಳ ಪ್ರವೇಶಿಸಿದ್ದಾನೆ. ನಂತರ ಬೆಡ್ ರೂಮ್ ಗೆ ಪ್ರವೇಶಿಸಿದ್ದಾನೆ. ಅಲ್ಲಿ ನಿರ್ದೇಶಕಿ ಪುತ್ರಿ ಮತ್ತು ಆಕೆಯ ಪತಿ ಮಲಗಿದ್ದರು. ಪರ್ಸ್ ಕದ್ದು ಅದರಲ್ಲಿದ್ದ 6,000 ರೂ.ಗಳನ್ನು ಹೊರತೆಗೆದಿದ್ದಾನೆ, ಆದರೆ ಕೋಣೆಯಲ್ಲಿಟ್ಟಿದ್ದ ಲ್ಯಾಪ್ಟಾಪ್ ಅನ್ನು ಮುಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಕ್ಕಿನ ಕೂಗು ಕೇಳಿಸಿ ಎಚ್ಚೆತ್ತುಕೊಂಡ ನಿರ್ದೇಶಕಿ ಅಳಿಯ ದೇವನ್ ಕಳ್ಳನನ್ನು ಗುರುತಿಸಿ ಅವನನ್ನು ಹಿಡಿಯಲು ಮುಂದಾಗಿದ್ದಾರೆ. ಆದರೆ ಆತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು.
ಚಲನಚಿತ್ರ ನಿರ್ಮಾಪಕರು ಪೊಲೀಸರನ್ನು ಸಂಪರ್ಕಿಸಿದರು ಮತ್ತು ದೂರು ದಾಖಲಿಸಿದರು ಮತ್ತು ಅದರ ಆಧಾರದ ಮೇಲೆ ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jaipur: ಸರಪಂಚ್ ಮಹಿಳೆಯ ಇಂಗ್ಲೀಷ್ ಭಾಷಣಕ್ಕೆ ಐಐಎಸ್ ಅಧಿಕಾರಿ ಫಿದಾ
Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ
Viral: ತಾಜ್ ಮಹಲ್ ಆವರಣದಲ್ಲೇ ಮೂತ್ರ ವಿಸರ್ಜನೆ ಮಾಡಿದ ಪ್ರವಾಸಿಗರು; ತನಿಖೆಗೆ ಆದೇಶ
U.P: ಜ್ಯೂಸ್ಗೆ ಮೂತ್ರ ಬೆರೆಸಿ ನೀಡುತ್ತಿದ್ದ ವ್ಯಾಪಾರಿ: ಕ್ಯಾನ್ನಲ್ಲಿತ್ತು ಮಾನವ ಮೂತ್ರ!
Tragedy: ಒಂದೇ ದಿನ 23 ಹಲ್ಲನ್ನು ಕಿತ್ತುಹಾಕಿದ ವೈದ್ಯ… ಹೃದಯಾಘಾತದಿಂದ ವ್ಯಕ್ತಿ ಮೃತ್ಯು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.