Udayavani.Com…”ನಮ್ಮನೆ ಕೃಷ್ಣ ರೀಲ್ಸ್ ” ಕಳುಹಿಸಲು ಇಂದೇ (ಆ.28) ಕೊನೇ ದಿನ….
ಮಗುವಿನ ಬೆರಗಿನ ಲೋಕವನ್ನು ಎಲ್ಲರ ಮನೆ-ಮನಗಳಿಗೆ ತಲುಪಿಸಲು ಸಜ್ಜು...
Team Udayavani, Aug 28, 2024, 12:40 PM IST
ಮಣಿಪಾಲ: ಹೆತ್ತವರಿಗೆ ಪ್ರತಿ ಮಗುವೂ ಚೆಲುವ ಕೃಷ್ಣನೇ, ಮಕ್ಕಳಿಗೆ ಉಡುಗೆ ಉಡಿಸಿ, ನವಿಲುಗರಿ ಮುಡಿಸಿ ಕೃಷ್ಣನ ರೂಪದಲ್ಲಿ ಕಾಣುವುದು ಎಲ್ಲರ ಆಸೆ. ನಿಮಗೂ ಆ ಆಸೆ ಇದ್ದೇ ಇರುತ್ತಲ್ವ?ಅದಕ್ಕಾಗಿ ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿಗೆ Udayavani.com ಹಾಗೂ ಮಂಗಳೂರು ಬಿಜೈನ ಐ ಯಾಮ್ ಜಯಲಕ್ಷ್ಮಿ ಸಿಲ್ಕ್ಸ್, ಸಹ ಪ್ರಾಯೋಜಕರಾದ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್, ಕೆಎಂಎಫ್ ನಂದಿನಿ ನಿಮಗೊಂದು ಸುವರ್ಣಾವಕಾಶ ಒದಗಿಸಿ ಕೊಡುತ್ತಿದೆ. ಮಗುವಿನ ಬೆರಗಿನ ಲೋಕವನ್ನು ಎಲ್ಲರ ಮನೆ-ಮನಗಳಿಗೆ ತಲುಪಿಸಲು ಸಜ್ಜಾಗಿದ್ದು, ಆ ಚೆಲುವಾದ ವೇದಿಕೆಯೇ…”ನಮ್ಮನೆ ಕೃಷ್ಣ”.
ಪುಟಾಣಿ ಮಕ್ಕಳ ರೀಲ್ಸ್ ಸ್ಪರ್ಧೆ-2024 ಅನ್ನು ಉದಯವಾಣಿ ಡಾಟ್ ಕಾಮ್ ಹಾಗೂ ಮಂಗಳೂರು ಬಿಜೈನ ಜಯಲಕ್ಷ್ಮಿ ಸಿಲ್ಕ್ಸ್ ಆಯೋಜಿಸಿದ್ದು, ಈಗಾಗಲೇ ಎಲ್ಲೆಡೆಯಿಂದ ಭರ್ಜರಿಯಾಗಿ ರೀಲ್ಸ್ ಗಳು ಬರಲಾರಂಭಿಸಿವೆ. ರೀಲ್ಸ್ ಗಳನ್ನು ಕಳುಹಿಸಲು ಕೊನೆಯ ದಿನಾಂಕ ಆಗಸ್ಟ್ 28.
ಸ್ಪರ್ಧೆಯ ವಿವರ ಮತ್ತು ನಿಯಮ:
*ರೀಲ್ಸ್ ಅವಧಿ ಗರಿಷ್ಠ 50 ಸೆಕೆಂಡ್ಸ್ ಒಳಗೆ
*ಉತ್ತಮ ಗುಣಮಟ್ಟದ ದೃಶ್ಯಗಳು, ಕ್ರಿಯೇಟಿವ್ ಎಡಿಟಿಂಗ್ ಮತ್ತು ಆಕರ್ಷಕ ಹಿನ್ನಲೆ ಸಂಗೀತ ಅಗತ್ಯ. ನೀವು ಕಳುಹಿಸುವ ವಿಡಿಯೋ HD ಕ್ವಾಲಿಟಿಯಲ್ಲಿರಲಿ.
*ಆಯ್ದ ಅತ್ಯುತ್ತಮ 15 ರೀಲ್ಸ್ ಗಳನ್ನು ಉದಯವಾಣಿ.ಕಾಮ್, ಫೇಸ್ ಬುಕ್, ಇನ್ ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ನಲ್ಲಿ ಪ್ರಕಟಿಸಲಾಗುತ್ತದೆ.
*ಆಯ್ದ 3 ರೀಲ್ಸ್ ಗಳಿಗೆ ಆಕರ್ಷಕ ಬಹುಮಾನ ಹಾಗೂ 4 ರೀಲ್ಸ್ ಗಳಿಗೆ ಸಮಾಧಾನಕರ ಬಹುಮಾನ ಮತ್ತು ಎಲ್ಲಾ ಆಯ್ದ 15 ರೀಲ್ಸ್ ಗಳಿಗೂ ಗಿಫ್ಟ್ ಹ್ಯಾಂಪರ್ ನೀಡಲಾಗುವುದು.
*ಭಾಗವಹಿಸುವ ಕೃಷ್ಣ 5 ವರ್ಷದೊಳಗಿರಬೇಕು. ಇದರ ಜತೆಗೆ ಮಗುವಿನ ಹೆಸರು, ಊರು, ವಿಳಾಸ, ಜನನ ಪ್ರಮಾಣ ಪತ್ರದ ಪ್ರತಿಯ ಜತೆಗೆ ಸಂಪರ್ಕ ಸಂಖ್ಯೆ ಕಡ್ಡಾಯವಾಗಿ ಕಳುಹಿಸಬೇಕು.
ರೀಲ್ಸ್ ಗಳನ್ನು ಈ ವಾಟ್ಸಪ್ ಸಂಖ್ಯೆಗೆ ( 8050073661) ಕಳುಹಿಸಿ.
* [email protected]ಗೂ ರೀಲ್ಸ್ ಕಳುಹಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.