Ashwini Vaishnaw; ಭಾರತಕ್ಕೆ 12 ಕೈಗಾರಿಕಾ ಸ್ಮಾರ್ಟ್‌ಸಿಟಿಗಳ ನೆಕ್ಲೇಸ್‌

12 ಹೊಸ ಕೈಗಾರಿಕಾ ಸ್ಮಾರ್ಟ್‌ಸಿಟಿಗಳ ನಿರ್ಮಾಣಕ್ಕೆ ಕೇಂದ್ರ ಸಮ್ಮತಿ

Team Udayavani, Aug 29, 2024, 7:15 AM IST

Ashwini Vaishnaw; ಭಾರತಕ್ಕೆ 12 ಕೈಗಾರಿಕಾ ಸ್ಮಾರ್ಟ್‌ಸಿಟಿಗಳ ನೆಕ್ಲೇಸ್‌

ಹೊಸದಿಲ್ಲಿ: ದೇಶೀಯ ಉತ್ಪಾದನ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ 28,602 ಕೋಟಿ ರೂ. ವೆಚ್ಚದಲ್ಲಿ 12 ಹೊಸ ಕೈಗಾರಿಕಾ ಸ್ಮಾರ್ಟ್‌ ಸಿಟಿಗಳ ನಿರ್ಮಾಣಕ್ಕೆ, ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಈ ಕೈಗಾರಿಕಾ ಸ್ಮಾರ್ಟ್‌ ಸಿಟಿಗಳು ಭಾರತದ ಬೃಹತ್‌ ಕಂಠಹಾರ (ಗ್ರ್ಯಾಂಡ್‌ ನೆಕ್ಲೇಸ್‌) ರೀತಿಯಿದ್ದು, ಸುವರ್ಣ ಚತುಷ್ಪಥಕ್ಕೆ ಬೆಂಬಲ ನೀಡಲಿವೆ ಎಂದು ಕೇಂದ್ರ ಸಚಿವ ಅಶ್ವಿ‌ನ್‌ ವೈಷ್ಣವ್‌ ಹೇಳಿದ್ದಾರೆ.

ಈ 12 ಕೈಗಾರಿಕಾ ಸ್ಮಾರ್ಟ್‌ಸಿಟಿಗಳ ಪೈಕಿ ಒಂದೊಂದು ಬಿಹಾರ ಮತ್ತು ಆಂಧ್ರ ಪ್ರದೇಶದಲ್ಲೂ ಇರಲಿವೆ. ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್‌ ಅಭಿವೃದ್ಧಿ ಕಾರ್ಯಕ್ರಮ (ಎನ್‌ಐಸಿಡಿಪಿ)ದ ಅಡಿ ಈ ಕೈಗಾರಿಕಾ ಸ್ಮಾರ್ಟ್‌ಸಿಟಿಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. 6 ಪ್ರಮುಖ ಕೈಗಾರಿಕಾ ಕಾರಿಡಾರ್‌ಗಳ ಅಡಿ 10 ರಾಜ್ಯ ಗಳಲ್ಲಿ ಈ 12 ಕೈಗಾರಿಕಾ ಸ್ಮಾರ್ಟ್‌ ಸಿಟಿಗಳು ನಿರ್ಮಾಣ ಗೊಳ್ಳಲಿವೆ ಎಂದು ತಿಳಿಸಿದ್ದಾರೆ. ಈಗಾಗಲೇ ದೇಶದಲ್ಲಿ 8 ಕೈಗಾರಿಕಾ ಸ್ಮಾರ್ಟ್‌ ಸಿಟಿಗಳಿದ್ದು, ಹೊಸದಾಗಿ 12 ನಿರ್ಮಾಣಗೊಂಡರೆ ಒಟ್ಟು ಸಂಖ್ಯೆ 20ಕ್ಕೇರಲಿದೆ.

ಎಲ್ಲೆಲ್ಲಿ ಕಾರಿಡಾರ್‌ಗಳು?
ಖುರ್ಪಿಯಾ (ಉತ್ತರಾಖಂಡ), ರಾಜ್‌ಪುರಾ- ಪಟಿಯಾಲಾ (ಪಂಜಾಬ್‌), ದಿ (ಮಹಾರಾಷ್ಟ್ರ), ಪಾಲಕ್ಕಾಡ್‌ (ಕೇರಳ), ಆಗ್ರಾ ಮತ್ತು ಪ್ರಯಾಗ್‌ರಾಜ್‌ (ಉತ್ತರ ಪ್ರದೇಶ), ಗಯಾ (ಬಿಹಾರ), ಝರೀದಾಬಾದ್‌ (ತೆಲಂಗಾಣ), ಓರ್ವಕಲ್‌ ಮತ್ತು ಕೂಪರ್ತಿ (ಆಂಧ್ರ ಪ್ರದೇಶ), ಜೋಧಪುರ್‌-ಪಾಲಿ (ರಾಜಸ್ಥಾನ) ನಗರಗಳಲ್ಲಿ ಕೈಗಾರಿಕಾ ಕಾರಿಡಾರ್‌ಗಳು ತಲೆ ಎತ್ತಲಿವೆ ಎಂದು ಸಚಿವರು ತಿಳಿಸಿದ್ದಾರೆ.

ಜಾಗತಿಕ ಮಾನದಂಡಕ್ಕನುಗುಣವಾಗಿ ಪ್ಲಗ್‌ ಆ್ಯಂಡ್‌ಪ್ಲೇ, ವಾಕ್‌ ಟು ವರ್ಕ್‌ ಮತ್ತು ಅಹೆಡ್‌ ಆಫ್ ಡಿಮಾಂಡ್‌ ಪರಿಕಲ್ಪನೆಯಡಿ ಈ ಕಾರಿಡಾರ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ.

ಈಗ ಒಪ್ಪಿಗೆ ನೀಡಲಾಗಿರುವ ಎಲ್ಲ ಯೋಜನೆಗಳು ವಿಕಸಿತ ಭಾರತಕ್ಕೆ ನೆರವಾಗಲಿವೆ ಎಂದು ತಿಳಿಸಿದ್ದಾರೆ. ರಾಜ್ಯ ಸರಕಾರಗಳು ಮತ್ತು ಖಾಸಗಿಯವರ ನೆರವಿನೊಂದಿಗೆ ಪ್ಲಗ್‌ ಆ್ಯಂಡ್‌ ಪ್ಲೇ (ಎಲ್ಲ ಸೌಲಭ್ಯಗಳನ್ನು ಒಳಗೊಂಡ) ಮಾದರಿಯ 100 ಕೈಗಾರಿಕಾ ಪಾರ್ಕ್‌ಗಳ ನಿರ್ಮಾಣ ಕುರಿತು ಕೇಂದ್ರ ಸರಕಾರವು ಬಜೆಟ್‌ನಲ್ಲಿ ಘೋಷಿಸಿತ್ತು.

ಕೈಗಾರಿಕಾ ಸ್ಮಾರ್ಟ್‌ಸಿಟಿ ವಿವರ
1. ಅಮೃತಸರ್‌-ಕೋಲ್ಕತಾ ಕೈಗಾರಿಕಾ ಕಾರಿಡಾರ್‌ನಲ್ಲಿ 6 ಯೋಜನೆ: ಖುರ್ಪಿಯಾ, ಉತ್ತರಾಖಂಡ- 1,002 ಎಕರೆ, ರಾಜ್‌ಪುರ್‌-ಪಟಿಯಾಲ- 1,099 ಎಕರೆ, ಆಗ್ರಾ- ಉತ್ತರ ಪ್ರದೇಶ- 1,058 ಎಕರೆ, ಪ್ರಯಾಗ್‌ರಾಜ್‌- ಉತ್ತರ ಪ್ರದೇಶ -352 ಎಕರೆ, ಗಯಾ- ಬಿಹಾರ- 1,670 ಎಕರೆ
2. ದಿಲ್ಲಿ-ಮುಂಬಯಿ ಕೈಗಾರಿಕಾ ಕಾರಿಡಾರ್‌ನಲ್ಲಿ 2 ಯೋಜನೆ: ದಿ , ಮಹಾರಾಷ್ಟ್ರ- 6,056 ಎಕರೆ, ಜೋಧಪುರ್‌-ಪಾಲಿ, ರಾಜಸ್ಥಾನ- 1,578 ಎಕರೆ. 3. ದಕ್ಷಿಣ ಭಾರತದಲ್ಲಿ ಕಾರಿಡಾರ್‌: ಕೂಪರ್ತಿ, ಆಂಧ್ರಪ್ರದೇಶ- 2,596 ಎಕರೆ, ಓರ್ವಕಲ್‌, ಆಂಧ್ರಪ್ರದೇಶ- 2,621 ಎಕರೆ, ಝಹೀರಾಬಾದ್‌, ತೆಲಂಗಾಣ- 3,245 ಎಕರೆ, ಪಾಲಕ್ಕಾಡ್‌, ಕೇರಳ- 1,710 ಎಕರೆ(ಈ ಕೈಗಾರಿಕಾ ನಗರಗಳು ವೈಜಾಗ್‌-ಚೆನ್ನೈ, ಹೈದರಾಬಾದ್‌-ಬೆಂಗಳೂರು, ಹೈದರಾಬಾದ್‌-ನಾಗಪುರ್‌ ಮತ್ತು ಚೆನ್ನೈ-ಬೆಂಗಳೂರು (ವಿಸ್ತರಣೆ) ಕಾರಿಡಾರ್‌ಗಳ ವ್ಯಾಪ್ತಿಯಲ್ಲಿ ಬರಲಿವೆ)

ತುಮಕೂರಲ್ಲಿ ಪ್ರಕ್ರಿಯೆ ಆರಂಭ
ಇದೇ ರೀತಿಯ ನಗರಗಳ ನಿರ್ಮಾಣ ಈಗಾಗಲೇ ಧೋಲೆರಾ (ಗುಜರಾತ್‌), ಆರೀಕ್‌ (ಮಹಾರಾಷ್ಟ್ರ), ವಿಕ್ರಮ್‌ ಉದ್ಯೋಗಪುರಿ (ಮಧ್ಯಪ್ರದೇಶ), ಕೃಷ್ಣ ಪಟ್ಟಣಂ (ಆಂಧ್ರಪ್ರದೇಶ)ಗಳಲ್ಲಿ ಚಾಲ್ತಿಯಲ್ಲಿದೆ. ಅದೇ ರೀತಿ ಕರ್ನಾಟಕದ ತುಮಕೂರು, ಹರ್ಯಾಣದ ನಂಗಲ್‌ ಚೌಧರಿ, ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾ ಮತ್ತು ದಾದ್ರಿಯಲ್ಲೂ ಕೈಗಾರಿಕಾ ಪ್ರದೇಶಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಸರಕಾರವು ಎಸ್‌ಪಿವಿ (ವಿಶೇಷ ಉದ್ದೇಶಿತ ಸಂಸ್ಥೆ)ಯು ಅಗತ್ಯ ಮೂಲ ಸೌಕರ್ಯಗಳಾದ ರಸ್ತೆ ಸಂಪರ್ಕ, ನೀರು ಮತ್ತು ವಿದ್ಯುತ್‌ ಪೂರೈಕೆ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡಿದೆ.

ಏನಿದು ನೆಕ್ಲೇಸ್‌ ಸಿಟಿ ?
-ಎನ್‌ಐಸಿಡಿಪಿ ಅಡಿ ಕೈಗಾರಿಕಾ ಕಾರಿಡಾರ್‌ಗಳ ನಿರ್ಮಾಣಕ್ಕೆ ಕೇಂದ್ರ ಸಂಪುಟ ಒಪ್ಪಿಗೆ
-ಉತ್ತರಾಖಂಡದಿಂದ ಹಿಡಿದು ಕೇರಳದವರೆಗೆ 12 ಕಡೆ ಕೈಗಾರಿಕಾ ನಗರ ನಿರ್ಮಾಣ
-ಭಾರತದ ನಕ್ಷೆಯಲ್ಲಿ ಇಡೀ ದೇಶಕ್ಕೆ ಕೊರಳ ಹಾರದಂತೆ ಕಾಣಲಿದೆ ನೆಕ್ಲೇಸ್‌ ಯೋಜನೆ

ಯೋಜನೆಯ ಲಾಭ ?
-ಅಂದಾಜು 1.52 ಲಕ್ಷ ಕೋಟಿ ರೂ. ಹೂಡಿಕೆ ನಿರೀಕ್ಷೆ
-10 ಲಕ್ಷ ನೇರ, 30 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿ
-ಪ್ರಧಾನಿ ಗತಿಶಕ್ತಿ ತತ್ವಗಳಡಿಕಾರಿಡಾರ್‌ಗಳ ನಿರ್ಮಾಣ
- ಪ್ರಾದೇಶಿಕ ಅಭಿವೃದ್ಧಿ ಸಮ ತೋಲನಕ್ಕೆ ಸುಸ್ಥಿರ ಸೌಕರ್ಯ

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

1-tirupati-laddu

Tirupati ತಿರುಪತಿ ಲಡ್ದು ಪ್ರಸಾದದಲ್ಲಿ ಬೀಫ್ ಫ್ಯಾಟ್!:ಲ್ಯಾಬ್ ವರದಿಯಲ್ಲಿ ದೃಢ

Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್‌ ಡೆಲಿವರಿ ಯುವಕ ಆತ್ಮಹತ್ಯೆ

Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್‌ ಡೆಲಿವರಿ ಯುವಕ ಆತ್ಮಹತ್ಯೆ

Haryana: Financial assistance to women, MSP promised; BJP manifesto released

Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್‌ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ

Chennai: ರಸ್ತೆ ಬದಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…

Chennai: ರಸ್ತೆ ಬದಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.