Asian Champions Trophy: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ… ಪಾಠಕ್ ಗೋಲ್ಕೀಪರ್
Team Udayavani, Aug 29, 2024, 8:55 AM IST
ಹೊಸದಿಲ್ಲಿ: ಪಿ.ಆರ್. ಶ್ರೀಜೇಶ್ ಅವರ ನಿವೃತ್ತಿಯಿಂದ ತೆರವಾದ ಭಾರತೀಯ ಹಾಕಿ ಗೋಲ್ ಕೀಪರ್ ಸ್ಥಾನವನ್ನು ಕಿೃಶನ್ ಬಹಾದೂರ್ ಪಾಠಕ್ ತುಂಬಲಿದ್ದಾರೆ. ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆಂದು ಬುಧವಾರ ಪ್ರಕಟ ಗೊಂಡ ತಂಡದಲ್ಲಿ ಪಾಠಕ್ ಅವರಿಗೆ ಪ್ರಧಾನ ಗೋಲ್ ಕೀಪಿಂಗ್ ಜವಾಬ್ದಾರಿ ನೀಡಲಾಗಿದೆ. ಸೂರಜ್ ಕರ್ಕೇರ ಮೀಸಲು ಕೀಪರ್ ಆಗಿದ್ದಾರೆ.
ಇಷ್ಟು ಕಾಲ ಕಿೃಶನ್ ಬಹಾದೂರ್ ಪಾಠಕ್ ಮೀಸಲು ಕೀಪರ್ ಆಗಿದ್ದರು. ಶ್ರೀಜೇಶ್ ಗೈರಿನ ವೇಳೆಯಷ್ಟೇ ಇವರಿಗೆ ಅವಕಾಶ ಸಿಗುತ್ತಿತ್ತು. ಇನ್ನು ಪೂರ್ಣಾ ವಧಿಗೆ ಈ ಹುದ್ದೆಯನ್ನು ನಿಭಾ ಯಿಸಬಹುದಾಗಿದೆ.
ಐವರಿಗೆ ವಿಶ್ರಾಂತಿ
ತಂಡವನ್ನು ಹರ್ಮನ್ಪ್ರೀತ್ ಸಿಂಗ್ ಮುನ್ನಡೆಸಲಿದ್ದಾರೆ. ಆದರೆ ಉಪನಾಯಕತ್ವದಲ್ಲಿ ಬದಲಾವಣೆ ಸಂಭವಿಸಿದೆ. ಹಾರ್ದಿಕ್ ಸಿಂಗ್ ಅವರಿಗೆ ವಿಶ್ರಾಂತಿ ನೀಡಿದ ಕಾರಣ ಅನುಭವಿ ಮಿಡ್ಫಿಲ್ಡರ್ ವಿವೇಕ್ ಸಾಗರ್ ಪ್ರಸಾದ್ ಈ ಜವಾಬ್ದಾರಿ ವಹಿಸಲಿದ್ದಾರೆ. ವಿಶ್ರಾಂತಿ ಪಡೆದ ಇತರ ಪ್ರಮುಖರೆಂದರೆ ಮನ್ದೀಪ್ ಸಿಂಗ್, ಲಲಿತ್ ಉಪಾಧ್ಯಾಯ, ಶಮ್ಶೆರ್ ಸಿಂಗ್ ಮತ್ತು ಗುರ್ಜಂತ್ ಸಿಂಗ್.
ಪಂದ್ಯಾವಳಿ ಸೆ. 8ರಿಂದ 17ರ ತನಕ ಚೀನದ ಹುಲುನ್ಬುಯಿರ್ನಲ್ಲಿ ನಡೆಯಲಿದೆ. ಭಾರತ ಹಾಲಿ ಚಾಂಪಿ ಯನ್ ಎಂಬುದು ವಿಶೇಷ. ಭಾರತ ತನ್ನ ಮೊದಲ ಪಂದ್ಯವನ್ನು ಸೆ. 8ರಂದು ಚೀನ ವಿರುದ್ಧ ಆಡಲಿದೆ. ಬಳಿಕ ಜಪಾನ್ (ಸೆ. 9), ಮಲೇಷ್ಯಾ (ಸೆ. 11), ಕೊರಿಯಾ (ಸೆ. 12) ಹಾಗೂ ಪಾಕಿಸ್ಥಾನವನ್ನು (ಸೆ. 14) ಎದುರಿಸಲಿದೆ.
ಭಾರತ ತಂಡ
ಗೋಲ್ಕೀಪರ್: ಕಿೃಶನ್ ಬಹಾ ದೂರ್ ಪಾಠಕ್, ಸೂರಜ್ ಕರ್ಕೇರ. ಡಿಫೆಂಡರ್: ಜರ್ಮನ್ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಹರ್ಮನ್ ಪ್ರೀತ್ ಸಿಂಗ್ (ನಾಯಕ), ಜುಗ್ರಾಜ್ ಸಿಂಗ್, ಸಂಜಯ್, ಸುಮಿತ್. ಮಿಡ್ ಫೀಲ್ಡರ್: ರಾಜ್ಕುಮಾರ್ ಪಾಲ್, ನೀಲಕಂಠ ಶರ್ಮ, ವಿವೇಕ್ ಸಾಗರ್ ಪ್ರಸಾದ್, ಮನ್ಪ್ರೀತ್ ಸಿಂಗ್, ಮೊಹಮ್ಮದ್ ರಾಹೀಲ್ ಮೌಸೀನ್.
ಫಾರ್ವರ್ಡ್ಸ್: ಅಭಿಷೇಕ್, ಸುಖಜೀತ್ ಸಿಂಗ್, ಅರೈಜೀತ್ ಸಿಂಗ್ ಹುಂಡಾಲ್, ಉತ್ತಮ್ ಸಿಂಗ್, ಗುರ್ಜೋತ್ ಸಿಂಗ್.
ಇದನ್ನೂ ಓದಿ: Ballari: ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್… ಪೊಲೀಸರಿಂದ ಬ್ಯಾಗ್ ಪರಿಶೀಲನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್, ಜಡೇಜಾ; ಶತಕ ಬಾರಿಸಿದ ಲೋಕಲ್ ಬಾಯ್
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ
Ricky Ponting: ಡೆಲ್ಲಿಯಿಂದ ಪಂಜಾಬ್ ಗೆ ಬಂದ ರಿಕಿ ಪಾಂಟಿಂಗ್
Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್ ಟೆಸ್ಟ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.