Hurun India Rich List 2024: ಏಷ್ಯಾದ ಶತಕೋಟ್ಯಧೀಶರ ರಾಜಧಾನಿ ಮುಂಬಯಿ !
"ಹುರುನ್' ಶ್ರೀಮಂತರ ಪಟ್ಟಿ: ಮುಂಬಯಿ ಅಗ್ರಸ್ಥಾನಿ
Team Udayavani, Aug 30, 2024, 7:10 AM IST
ಹೊಸದಿಲ್ಲಿ: ಏಷ್ಯಾದಲ್ಲಿ ಅತೀ ಹೆಚ್ಚು ಶತಕೋಟ್ಯಧಿಪತಿಗಳಿರುವ ರಾಜಧಾನಿ ಎಂಬ ಖ್ಯಾತಿಗೆ ಮುಂಬಯಿ ಪಾತ್ರವಾಗಿದೆ. ಚೀನದ ರಾಜಧಾನಿ ಬೀಜಿಂಗನ್ನು ಹಿಮ್ಮೆಟ್ಟಿಸಿ ಮುಂಬಯಿ ಅಗ್ರಸ್ಥಾನಕ್ಕೇರಿದೆ ಎಂದು ಹುರುನ್ ಇಂಡಿಯಾ ಬಿಡುಗಡೆಗೊಳಿಸಿದ 2024ರ ಶ್ರೀಮಂತರ ಪಟ್ಟಿಯಲ್ಲಿ ತಿಳಿಸಲಾಗಿದೆ.
ದೇಶದಲ್ಲಿ ಗರಿಷ್ಠ ಬಿಲಿಯನೇರ್ಗಳನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು 4ನೇ ಸ್ಥಾನಕ್ಕೆ ಜಾರಿದೆ.
ಮುಂಬಯಿಯಲ್ಲಿ ಈ ಬಾರಿ 58 ಶತ ಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಒಟ್ಟು 92 ಶತಕೋಟ್ಯಧೀಶರನ್ನು ಹೊಂದಿದೆ. ಬೀಜಿಂಗ್ 91 ಶತಕೋಟ್ಯಧೀಶರನ್ನು ಒಳಗೊಳ್ಳುವ ಮೂಲಕಅಗ್ರಸ್ಥಾನದಿಂದ ಕೆಳಗಿಳಿದಿದೆ. ಇನ್ನು ಮುಂಬಯಿ ಯಲ್ಲಿ 386 ಮಂದಿ ಶ್ರೀಮಂತರಿದ್ದಾರೆ. ಈ ಮೂಲಕ ದೇಶದಲ್ಲಿರುವ ಶ್ರೀಮಂತರ ಪೈಕಿ ಶೇ. 25 ಮಂದಿ ಮುಂಬಯಿಯಲ್ಲೇ ವಾಸವಿದ್ದಾರೆ ಎನ್ನಲಾಗಿದೆ. ಶ್ರೀಮಂತರು ವಾಸಕ್ಕೆ ಆದ್ಯತೆ ನೀಡುವ ದೇಶದ ನಗರಗಳ ಸಾಲಿನಲ್ಲೂ ಮುಂಬಯಿ ಅಗ್ರಸ್ಥಾನ ಪಡೆದುಕೊಂಡಿದೆ.
ಬೆಂಗಳೂರನ್ನು
ಹಿಮ್ಮೆಟ್ಟಿಸಿದ ಹೈದರಾಬಾದ್
ದೇಶದಲ್ಲಿ ಅತೀ ಹೆಚ್ಚು ಶ್ರೀಮಂತರನ್ನು ಹೊಂದಿರುವ ನಗರಗಳ ಪೈಕಿ ಅಗ್ರ 3ನೇ ಸ್ಥಾನದಲ್ಲಿದ್ದ ಬೆಂಗಳೂರನ್ನು ಹೈದರಾಬಾದ್ ಈ ಬಾರಿ ಹಿಮ್ಮೆಟ್ಟಿಸಿದೆ. 18 ಮಂದಿ ಶತಕೋಟ್ಯಧಿಪತಿಗಳ ಹೊಸ ಸೇರ್ಪಡೆಯೊಂದಿಗೆ ಹೈದರಾಬಾದ್ನಲ್ಲಿರುವ ಶ್ರೀಮಂತರ ಸಂಖ್ಯೆ 104ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 27 ಶತಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚಾದರೂ ಒಟ್ಟು ಶ್ರೀಮಂತರ ಸಂಖ್ಯೆ 100ನ್ನಷ್ಟೇ ತಲುಪಿದೆ.
ಕರ್ನಾಟಕಕ್ಕೆ 6ನೇ ಸ್ಥಾನ
ಶ್ರೀಮಂತರು ವಾಸವಿರುವ ಭಾರತದ ಅಗ್ರ 10 ರಾಜ್ಯಗಳ ಪೈಕಿ ಕರ್ನಾಟಕಕ್ಕೆ 6ನೇ ಸ್ಥಾನ ದೊರೆತಿದೆ. ಮಹಾರಾಷ್ಟ್ರದಲ್ಲಿ 470 ಮಂದಿ, ದಿಲ್ಲಿ 213, ಗುಜರಾತ್ 129, ತಮಿಳುನಾಡು 119, ತೆಲಂಗಾಣ 109, ಕರ್ನಾಟಕ 108 ಮಂದಿ ಶ್ರೀಮಂತರಿಗೆ ಆಶ್ರಯ ನೀಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
Jammu Kashmir: ಯುವಕರ ಕೈಯಲ್ಲೀಗ ಕಲ್ಲುಗಳಿಲ್ಲ, ಪೆನ್ನು-ಪುಸ್ತಕಗಳಿವೆ: ಪ್ರಧಾನಿ ಮೋದಿ
West Bengal: ಪ್ರವಾಹ ಪರಿಸ್ಥಿತಿ ಅವಲೋಕಿಸಲು ಹೋದ ಸಂಸದರು, ಶಾಸಕರಿದ್ದ ದೋಣಿ ಪಲ್ಟಿ
ಪ್ರತೀ ಪೇಜರ್ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್ನ ಮೊಸಾದ್?
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್, ಜಡೇಜಾ; ಶತಕ ಬಾರಿಸಿದ ಲೋಕಲ್ ಬಾಯ್
Contractors Association ಅಧ್ಯಕ್ಷ ಕೆಂಪಣ್ಣ ವಿಧಿವಶ; ಗಣ್ಯರ ಸಂತಾಪ
Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!
Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ
Sep.20: ಮುನಿಯಾಲ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಕಾಲೇಜು ಘಟಿಕೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.