Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Team Udayavani, Aug 30, 2024, 1:17 AM IST
ಇ-ಸಿಗರೇಟ್ ಪತ್ತೆ: ಇಬ್ಬರು ಪೊಲೀಸ್ ವಶಕ್ಕೆ
ಕಾಸರಗೋಡು: ನಗರದ ಪ್ರಸ್ ಕ್ಲಬ್ ಜಂಕ್ಷನ್ ಪರಿಸರದಲ್ಲಿ ಕಾಸರಗೋಡು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 3000 ದಷ್ಟು ಇ-ಸಿಗರೇಟ್ ಅನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದು, ಈ ಸಂಬಂಧ ಮಂಜೇಶ್ವರ ನಿವಾಸಿಗಳಾದ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ವಿತರಿಸಲೆಂದು ಮಲಪ್ಪುರಂನಿಂದ ಇದನ್ನು ತರಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.
ಬಸ್ ಢಿಕ್ಕಿ: ಗಾಯಾಳು ಯುವಕ ಸಾವು
ಉಪ್ಪಳ: ಬದಿಯಡ್ಕ ಸಮೀಪದ ಮಾವಿನಕಟ್ಟೆಯಲ್ಲಿ ಆ.28 ರಂದು ಬೆಳಗ್ಗೆ ಖಾಸಗಿ ಬಸ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಿನ ಪ್ರಯಾಣಿಕ, ಮಂಗಲ್ಪಾಡಿ ಪ್ರತಾಪನಗರದ ಮದ್ರಸ ಬಳಿಯ ಅಬ್ದುಲ್ ರಹಿಮಾನ್ ಅವರ ಪುತ್ರ ಮುಬಾಶಿರ್(21) ಸಾವಿಗೀಡಾದರು.
ಕುಂಬಳೆ-ಮುಳ್ಳೇರಿಯ ಕೆಎಸ್ಟಿಪಿ ರಸ್ತೆಯಲ್ಲಿ ಖಾಸಗಿ ಬಸ್ ಢಿಕ್ಕಿ ಹೊಡೆದು ಕಾರು ನಜ್ಜುಗುಜ್ಜಾಗಿತ್ತು. ಕಾರಿನಲ್ಲಿದ್ದ ಮುಬಾಶಿರ್ ಗಂಭೀರ ಗಾಯಗೊಂಡಿದ್ದರು. ಕೊಲ್ಲಿಯಲ್ಲಿ ಸೂಪರ್ ಮಾರ್ಕೆಟ್ನಲ್ಲಿ ಕೆಲಸ ಮಾಡುತ್ತಿದ್ದ ಮುಬಾಶಿರ್ ಒಂದು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು. ಸೆ. 6ರಂದು ಕೊಲ್ಲಿಗೆ ಮರಳುವವರಿದ್ದರು.
ನಾರಂಪಾಡಿ: ಯುವಕ ನಾಪತ್ತೆ
ಬದಿಯಡ್ಕ: ಮನೆಯಲ್ಲಿ ಏಕಾಂಗಿಯಾಗಿದ್ದ ನಾರಂಪಾಡಿ ನಿವಾಸಿ ರೋಶನ್ ಜೋನ್ ಡಿ’ಸೋಜಾ (41) ನಾಪತ್ತೆಯಾಗಿರುವುದಾಗಿ ಸಹೋದರಿ ತೂಮಿನಾಡು ನಿವಾಸಿ ಸರಿತಾ ಡಿ’ಸೋಜಾ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೆಲವು ದಿನಗಳಿಂದ ಇವರು ಕಾಣದೇ ಇದ್ದುದರಿಂದ ನೆರೆಮನೆ ನಿವಾಸಿಗಳು ಆ.25ರಂದು ಸಹೋದರಿ ಸರಿತಾ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದರು.
ಪಾಣತ್ತೂರು: ದನವನ್ನು ಅರ್ಧ ತಿಂದ ಚಿರತೆ
ಕಾಸರಗೋಡು: ಪಾಣತ್ತೂರು ಪರಿಸರದಲ್ಲಿ ಮತ್ತೆ ಚಿರತೆ ಹಾವಳಿ ತಲೆದೋರಿದೆ. ಪಾಣತ್ತೂರು ಸಮೀಪದ ದೊಡ್ಡ ಮನೆಯ ಚಂದ್ರಶೇಖರ ಅವರ ಹಟ್ಟಿಯಲ್ಲಿ ಕಟ್ಟ ಹಾಕಿದ್ದ ದನವನ್ನು ಚಿರತೆ ಕೊಂದು ಅರ್ಧ ತಿಂದಿದೆ. ಹಟ್ಟಿಯಲ್ಲಿ ಮೂರು ದನಗಳಿದ್ದವು. ಈ ಪೈಕಿ ಒಂದನ್ನು ಕೊಂದು ಹಾಕಿದೆ. ಬಳಾಂತೋಡು ಪಶುಸಂಗೋಪನಾ ಆಸ್ಪತ್ರೆಯ ವೈದ್ಯರಾದ ಡಾ| ಅರುಣ್ ನೇತೃತ್ವದ ತಂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ದನದ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿ ಸಂಸ್ಕರಿಸಲಾಯಿತು.
ಈ ಪರಿಸರದಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಹೆಚ್ಚಿನ ಜಾಗ್ರತೆ ವಹಿಸುವಂತೆ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UP: ಹಾವು ಕಚ್ಚಿ ಮೂವರು ಮೃತ್ಯು, ಇಬ್ಬರು ಗಂಭೀರ… ಹಾವಾಡಿಗನ ಮೊರೆ ಹೋದ ಅಧಿಕಾರಿಗಳು
India: ಮತ್ತೆ ಏರ್ ಇಂಡಿಯಾ, ವಿಸ್ತಾರ ಸೇರಿ 85 ವಿಮಾನಗಳಿಗೆ ನಕಲಿ ಬಾಂಬ್ ಬೆದರಿಕೆ ಕರೆ
INDvsNZ: ವಾಷಿಂಗ್ಟನ್ ಸ್ಪಿನ್ ಜಾಲಕ್ಕೆ ಸಿಲುಕಿದ ಕಿವೀಸ್; 259 ರನ್ ಗೆ ಆಲೌಟ್
Salaar 2: ಪ್ರಭಾಸ್ – ಪ್ರಶಾಂತ್ ನೀಲ್ ʼಸಲಾರ್ -2ʼ ಶೂಟಿಂಗ್ ಆರಂಭ?
Udupi: ಸಂಸ್ಕೃತ ಎಲ್ಲ ಭಾಷೆಗಳ ಮೂಲ.. ಪ್ರಾಚ್ಯವಿದ್ಯಾ ಸಮ್ಮೇಳನ ಉದ್ಘಾಟಿಸಿ ಬಾಬಾ ರಾಮ್ ದೇವ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.