Bellary; ಜೈಲು ಪಕ್ಕದ ದೇವಸ್ಥಾನದಲ್ಲಿ ದರ್ಶನ್ ಅಭಿಮಾನಿಗಳಿಂದ ಪೂಜೆ
Team Udayavani, Aug 30, 2024, 1:17 PM IST
ಬಳ್ಳಾರಿ: ಬಳ್ಳಾರಿ ಜೈಲಿನಲ್ಲಿರುವ ದರ್ಶನ್ (Darshan) ಬಿಡುಗಡೆಗೆ ಹಾರೈಸಿ ಅಭಿಮಾನಿಗಳು ದುರ್ಗಮ್ಮ ದೇಗುಲದಲ್ಲಿ (ಆ.30) ವಿಶೇಷ ಪೂಜೆ ಮಾಡಿಸಿದ್ದಾರೆ.
ಅಭಿಮಾನಿಗಳು ದುರ್ಗಮ್ಮ ಬೃಹತ್ ಮೂರ್ತಿಗೆ ಹಾರ ಹಾಕಿ ನೂರು ತೆಂಗಿನಕಾಯಿ ಒಡೆದರು. ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಮಂಜುನಾಥ ಬಳಿಗಾರ ನೇತೃತ್ವದಲ್ಲಿ ಪೂಜೆ ನಡೆಸಲಾಗಿದೆ.
ಬಾಸ್ ತಪ್ಪು ಮಾಡಿಲ್ಲ ಅವರ ಜೊತೆಗೆ ಇರುವವರು ತಪ್ಪು ಮಾಡಿದ್ದಾರೆ. ಆ ತಪ್ಪು ದರ್ಶನ್ ಮೇಲೆ ಬಂದಿದೆ ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಕನಕ ದುರ್ಗಮ್ಮ ದೇವಸ್ಥಾನವು ಬಳ್ಳಾರಿ ಜೈಲಿನಿಂದ ಅನತಿ ದೂರದಲ್ಲಿದೆ. ಹೀಗಾಗಿ ದುರ್ಗಮ್ಮ ದೇವರ ಆಶೀರ್ವಾದದಿಂದ ದರ್ಶನ್ ಗೆ ಶೀಘ್ರದಲ್ಲೇ ಜಾಮೀನಿನ ಮೇಲೆ ಹೊರಬರಲಿದೆ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.