Assam ವಿಧಾನಸಭೆ: 2 ತಾಸು ನಮಾಜ್ ವಿರಾಮಕ್ಕೆ ವಿದಾಯ
1937ರಿಂದ ಇದ್ದ ಕ್ರಮ ರದ್ದು ಅಸ್ಸಾಂ ಸರಕಾರ ನಿರ್ಧಾರ
Team Udayavani, Aug 31, 2024, 7:20 AM IST
ಹೊಸದಿಲ್ಲಿ: ಶುಕ್ರವಾರ ಮಧ್ಯಾಹ್ನದ ನಮಾಜ್ಗೆ ಮುಸ್ಲಿಮ್ ಶಾಸಕರು ಮತ್ತು ಅಧಿಕಾರಿಗಳಿಗೆ ನೀಡಲಾಗುತ್ತಿದ್ದ 2 ತಾಸುಗಳ ವಿರಾಮವನ್ನು ಅಸ್ಸಾಂ ವಿಧಾನಸಭೆ ಶುಕ್ರವಾರ ರದ್ದುಪಡಿಸಿದೆ.
ಈ ಸೌಲಭ್ಯವನ್ನು ರದ್ದುಪಡಿ ಸುವ ಮೂಲಕ ವಿಧಾನಸಭೆಯ ಉತ್ಪಾದಕತೆಗೆ ಆದ್ಯತೆ ನೀಡಿ ವಸಾಹತುಶಾಹಿಯ ಮತ್ತೊಂದು ಕುರುಹನ್ನು ಕಿತ್ತೂಗೆಯಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಹೇಳಿದ್ದಾರೆ.
ಈ ಪದ್ಧತಿಯನ್ನು ಮುಸ್ಲಿಂ ಲೀಗ್ನ ಸೈಯದ್ ಸಾದುಲ್ಲಾ 1937ರಲ್ಲಿ ಆರಂಭಿಸಿದ್ದರು. ಕಳೆದ ಚಳಿಗಾಲದ ಅಧಿವೇಶನದ ಕೊನೆಯ ದಿನ ಶುಕ್ರವಾರ ನೀಡಲಾಗಿದ್ದ 2 ತಾಸು ಗಳ ವಿರಾಮವೇ ಕೊನೆಯದು ಎನಿಸಿಕೊಳ್ಳಲಿದೆ.
ಈ ಪದ್ಧತಿಯನ್ನು ಕಿತ್ತು ಹಾಕುವ ಐತಿಹಾಸಿಕ ನಿರ್ಧಾರವನ್ನು ಜಾರಿಗೆ ತರಲೊಪ್ಪಿದ ಸ್ಪೀಕರ್ ಬಿಸ್ವಜಿತ್ ದೈಮಾರಿ ಹಾಗೂ ಶಾಸಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅಸ್ಸಾಂ ಸಿಎಂ ಹೇಳಿದ್ದಾರೆ.
ವಿಧಾನಸಭೆಯ ನಿಯಮಗಳ ಸಮಿತಿ ಈ ಪದ್ಧತಿಯನ್ನು ಕೈಬಿಡಲು ಅವಿರೋಧವಾಗಿ ಒಪ್ಪಿಕೊಂಡಿದೆ. ಇದೊಂದು ವಸಾಹತುಶಾಹಿ ಪದ್ಧತಿ ಆಗಿತ್ತು ಎಂದು ಅಸ್ಸಾಂ ಸರಕಾರ ತಿಳಿಸಿದೆ.
ವಸಾಹತು ಶಾಹಿ ಕಾಲದ ಪದ್ಧತಿಯನ್ನು ಕೈಬಿಡಲು ನೆರವಾದ ಸ್ಪೀಕರ್ ಹಾಗೂ ಎಲ್ಲ ಶಾಸಕರಿಗೆ ಕೃತಜ್ಞತೆ.
-ಹಿಮಾಂತ ಬಿಸ್ವ ಶರ್ಮಾ, ಅಸ್ಸಾಂ ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Election ಅಸಂಭವ: ಕೇಂದ್ರ ಸಂಪುಟ ನಿರ್ಧಾರಕ್ಕೆ ಖರ್ಗೆ ವಿರೋಧ
Rahul Gandhi ವಿರುದ್ಧ ಕೇಂದ್ರ ಸಚಿವ, ಬಿಜೆಪಿಗರ ಹೇಳಿಕೆ;ದೇಶದ ವಿವಿಧೆಡೆ ಕೈ ಪ್ರತಿಭಟನೆ
One Nation One Election; ಏಕಕಾಲದಲ್ಲಿ ಚುನಾವಣೆ: ಕೇಂದ್ರ ಸಚಿವ ಸಂಪುಟ ಒಪ್ಪಿಗೆ
School Bus: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ಸಿನಲ್ಲಿ ಬ್ಯಾಟರಿ ಸ್ಫೋಟ…
Haryana ಭರ್ಜರಿ ಗ್ಯಾರಂಟಿಗಳನ್ನು ಘೋಷಿಸಿದ ಕಾಂಗ್ರೆಸ್: ಏನೇನಿದೆ?
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.