Tollywood Industry: ಮಲಯಾಳಂ, ತಮಿಳು ಬಳಿಕ ತೆಲುಗು ಚಿತ್ರರಂಗದಲ್ಲೂ ಮೀಟೂ ಬಿರುಗಾಳಿ?
ಲೈಂಗಿಕ ಕಿರುಕುಳ ಕುರಿತ ವರದಿ ಬಿಡುಗಡೆಗೆ ನಟಿ ಸಮಂತಾ ಆಗ್ರಹ
Team Udayavani, Sep 1, 2024, 7:00 AM IST
ಹೈದರಾಬಾದ್: ನ್ಯಾ| ಹೇಮಾ ಸಮಿತಿ ವರದಿ ಮಲಯಾಳ ಚಿತ್ರರಂಗದಲ್ಲಿ ಕೋಲಾಹಲ ಸೃಷ್ಟಿಸಿರುವಂತೆಯೇ ಈಗ ತೆಲುಗು ಸಿನಿರಂಗದಲ್ಲೂ ಮೀ ಟೂ ಬಿರುಗಾಳಿಯ ಅಬ್ಬರ ಆರಂಭವಾಗುವ ಲಕ್ಷಣ ಗೋಚರಿಸಿದೆ. ತೆಲುಗು ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯಗಳ ಕುರಿತು ಉಪ ಸಮಿತಿ ನೀಡಿದ್ದ ವರದಿಯನ್ನು ಬಹಿರಂಗಗೊಳಿಸಬೇಕೆಂದು ತೆಲಂಗಾಣ ಸರಕಾರವನ್ನು ನಟಿ ಸಮಂತಾ ರುತ್ ಪ್ರಭು ಆಗ್ರಹಿಸಿದ್ದಾರೆ.
ಈ ಬಗ್ಗೆ ಸಮಂತಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. “ತೆಲುಗು ಚಿತ್ರರಂಗದ (ಟಿಎಫ್ಐ) ಲೈಂಗಿಕ ದೌರ್ಜನ್ಯಗಳ ಕುರಿತು ಉಪ ಸಮಿತಿ ನೀಡಿದ್ದ ವರದಿಯನ್ನು ತೆಲಂಗಾಣ ಸರಕಾರ ಬಹಿರಂಗಗೊಳಿಸಬೇಕೆಂದು ಈ ಚಿತ್ರರಂಗದ ಮಹಿಳೆಯರಾದ ನಾವು ಆಗ್ರಹಿಸುತ್ತೇವೆ. ವರದಿ ಬಹಿರಂಗಗೊಂಡರೆ ಸಿನಿರಂಗದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸಿಕೊಡಲು ಸೂಕ್ತ ಕಾನೂನು, ನೀತಿ ರೂಪಿಸಲು ಸರಕಾರಕ್ಕೆ ಹಾಗೂ ಚಿತ್ರರಂಗಕ್ಕೂ ನೆರವಾಗಲಿದೆ’ ಎಂದಿದ್ದಾರೆ.
ಅಲ್ಲದೆ ಹೇಮಾ ಸಮಿತಿಯ ವರದಿಯನ್ನು ನಾವು ಸ್ವಾಗತಿಸುತ್ತೇವೆ. ಈ ಚಳವಳಿಯನ್ನು ಸೃಷ್ಟಿಸುವಲ್ಲಿ ಮಲಯಾಳ ಸಿನಿಮಾ ಮಹಿಳಾ ಒಕ್ಕೂಟದ (ಡಬ್ಲ್ಯುಸಿಸಿ) ನಿರಂತರ ಪ್ರಯತ್ನವನ್ನೂ ಶ್ಲಾ ಸುತ್ತೇವೆ. ಡಬ್ಲ್ಯುಸಿಸಿಯ ಪ್ರೇರಣೆಯೊಂದಿಗೆ 2019ರಲ್ಲಿ ತೆಲುಗು ಸಿನಿರಂಗದ ಮಹಿಳೆಯರ ಧ್ವನಿಯಾಗಲೆಂದು “ದಿ ವಾಯ್ಸ ಆಫ್ ವುಮೆನ್’ ಎಂಬ ಒಕ್ಕೂಟವನ್ನು ಸ್ಥಾಪಿಸಲಾಗಿದೆ. ಈ ಮೂಲಕ ಟಿಎಫ್ಐ ಸದಸ್ಯರ ಬೆನ್ನಿಗಿರಲಿದ್ದೇವೆ ಎಂದಿದ್ದಾರೆ.
ಜಾಲತಾಣಗಳಲ್ಲಿ ಪೋಸ್ಟ್:
ಸಮಂತಾ ಮಾತ್ರವಲ್ಲದೆ ನಟಿ ಲಕ್ಷ್ಮೀ ಮಂಚು, ನಿರೂಪಕಿ ಸುಮಾ, ಝಾನ್ಸಿ, ನಿರ್ದೇಶಕಿ ನಂದಿನಿ ರೆಡ್ಡಿ ಸಹಿತ ಟಿಎಫ್ಐನ ಹಲವು ಮಹಿಳೆಯರು ಜಾಲತಾಣಗಳಲ್ಲಿ ಇದೇ ಪೋಸ್ಟ್ಗಳ ಮೂಲಕ ವರದಿ ಬಿಡುಗಡೆಗೆ ಸರಕಾರವನ್ನು ಆಗ್ರಹಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಟಾಲಿವುಡ್ನಲ್ಲೂ ಮೀಟೂ ಬಿರುಗಾಳಿಯೆಬ್ಬಿಸುವ ಸುಳಿವನ್ನು ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್ ಟಿಆರ್ ಸಿನಿಮಾ ವೀಕ್ಷಿಸಿದ ರೋಗಿ.!
Actress Sakunthala: ಹೃದಯಾಘಾತದಿಂದ ಬಹುಭಾಷಾ ನಟಿ ʼಸಿ.ಐ.ಡಿ. ಶಕುಂತಲಾʼ ನಿಧನ
Poonam Kaur: ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ವಿರುದ್ಧ ನಟಿ ಪೂನಂ ಗಂಭೀರ ಆರೋಪ
Raghu Thatha: ಓಟಿಟಿಯಲ್ಲಿ ರಿಲೀಸ್ ಆದ 24 ಗಂಟೆಯಲ್ಲೇ ಹೊಸ ದಾಖಲೆ ಬರೆದ ʼರಘು ತಾತʼ
Dhoom 4: ಬಾಲಿವುಡ್ ʼಧೂಮ್-4ʼ ನಲ್ಲಿ ಸೌತ್ ಸ್ಟಾರ್ ಸೂರ್ಯ ವಿಲನ್?
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.