Laos; 47 ಸೈಬರ್ ಗುಲಾಮರ ರಕ್ಷಿಸಿದ ಕೇಂದ್ರ ಸರಕಾರ
Team Udayavani, Sep 1, 2024, 6:48 AM IST
ಹೊಸದಿಲ್ಲಿ: ಲಾವೋಸ್ನ ಸೈಬರ್ ವಂಚನಾ ಕೇಂದ್ರಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ 47 ಭಾರತೀಯರನ್ನು ರಕ್ಷಿಸಿರುವುದಾಗಿ ಭಾರತೀಯ ರಾಯಭಾರ ಕಚೇರಿ ಶನಿವಾರ ತಿಳಿಸಿದೆ. ಈ ಪೈಕಿ 29 ಮಂದಿ ರಾಯಭಾರ ಕಚೇರಿಯ ಸುಪರ್ದಿಯಲ್ಲಿದ್ದು, ಇನ್ನುಳಿದ 18 ಜನ ರಕ್ಷಣೆಗಾಗಿ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದಾರೆ.
ಉದ್ಯೋಗಕ್ಕಾಗಿ ಲಾವೋಸ್ಗೆ ತಲುಪುವವರ ಪಾಸ್ಪೋರ್ಟ್ಗಳನ್ನು ಕಸಿಯುತ್ತಿದ್ದ ವಂಚಕರು, ಡೇಟಿಂಗ್ ಆ್ಯಪ್ಗ್ಳ ಮೂಲಕ ವಂಚನೆ ನಡೆಸುವಂತೆ ಟಾರ್ಗೆಟ್ ನೀಡುತ್ತಿದ್ದವು. ನಿಗದಿತ ಗುರಿ ಮುಟ್ಟದಿದ್ದಲ್ಲಿ ಶಿಕ್ಷಿಸುತ್ತಿದ್ದವು. ವಿದೇಶಾಂಗ ಸಚಿವ ಎಸ್.ಜೈಶಂಕರ್ ಆಗ್ನೇಯ ಏಷ್ಯಾ ರಾಷ್ಟ್ರಗಳ ಭೇಟಿ ನೀಡಿದ್ದಾಗ ಲಾವೋಸ್ ಸರಕಾರದ ಜತೆಗೆ ಈ ಬಗ್ಗೆ ಚರ್ಚೆ ನಡೆಸಿದ್ದರು. ಲಾವೋಸ್ನಿಂದ ಇದುವರೆಗೆ ಒಟ್ಟು 635 ಮಂದಿ ಭಾರತೀಯರನ್ನು ರಕ್ಷಿಸಿದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.