Dental Checkup: ದಂತ ವೈದ್ಯಕೀಯ ತಪಾಸಣೆಗಳನ್ನು ತಪ್ಪಿಸಿಕೊಳ್ಳದಿರಿ


Team Udayavani, Sep 1, 2024, 12:12 PM IST

11-tooth

“ದಂತ ವೈದ್ಯಕೀಯ ತಪಾಸಣೆ ದುಬಾರಿಯಲ್ಲ; ಆದರೆ ಅದರತ್ತ ನಿರ್ಲಕ್ಷ್ಯ ದುಬಾರಿಯಾದೀತು!’

ಭಾರತದಲ್ಲಿ ದಂತವೈದ್ಯಕೀಯ ಆರೋಗ್ಯವನ್ನು ಬಹಳ ನಿರ್ಲಕ್ಷ್ಯದಿಂದ ಕಾಣಲಾಗುತ್ತದೆ. ದಂತ ವೈದ್ಯರ ಬಳಿಗೆ ನಿಯಮಿತ ತಪಾಸಣೆಗೆ ತೆರಳುವುದು ಎಂದರೆ, “ಅಯ್ಯೋ ಯಾರಪ್ಪಾ ಅಲ್ಲಿಗೆ ಹೋಗುವುದು’ ಎಂಬ ಭಾವನೆ! ನೋವು ಅಧಿಕವಾಗಿದ್ದರೂ ಕೂಡ ವೈದ್ಯರ ಬಳಿಗೆ ಹೋಗುವುದನ್ನು ಬಿಟ್ಟು ಯಾವುದಾದರೊಂದು ನೋವು ನಿವಾರಕ ಮಾತ್ರೆ ನುಂಗಿ ಸುಮ್ಮನಿದ್ದು ಬಿಡುವ ಪರಿಪಾಠ ನಮ್ಮದು. ಇದಕ್ಕೆ ಕಾರಣಗಳು ತುಂಬ ಸರಳ: ದಂತವೈದ್ಯಕೀಯ ಚಿಕಿತ್ಸೆ, ತಪಾಸಣೆ ಎಂದರೆ ನೋವು, ಆತಂಕ, ಭಯ ಮತ್ತು ವೆಚ್ಚ ತಗಲುತ್ತದೆ ಎಂಬ ತಪ್ಪು ಕಲ್ಪನೆಗಳು.

ಆದರೆ ಇವೆಲ್ಲವುಗಳಿಗೂ ಮೂಲ ಕಾರಣ ಏನು? ಕೇವಲ ನಿರ್ಲಕ್ಷ್ಯ! ಇಲ್ಲೊಂದು ಸರಳ ಪ್ರಶ್ನೆಯಿದೆ: ನಿಯಮಿತ ರಕ್ತದೊತ್ತಡ ತಪಾಸಣೆಗಾಗಿ ವೈದ್ಯರ ಬಳಿಗೆ ಹೋಗುವುದಕ್ಕೆ ವ್ಯಕ್ತಿಯೊಬ್ಬರು ಹೆದರುತ್ತಾರೆ ಅಥವಾ ಅದನ್ನು ನಿರ್ಲಕ್ಷಿಸುತ್ತಾರೆ ಎಂದಿಟ್ಟುಕೊಳ್ಳಿ. ಪರಿಣಾಮವಾಗಿ ಮುಂದೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಒಂದು ಸಣ್ಣ ನಿರ್ಲಕ್ಷ್ಯದಿಂದಾಗಿ ಮುಂದೆ ಒಳಗಾಗಬೇಕಾದ ನೋವು ಮತ್ತು ಹಣಕಾಸಿನ ಹೊರಗೆ ಇದು ಒಂದು ಸಣ್ಣ ಉದಾಹರಣೆ. ದಂತ ವೈದ್ಯಕೀಯ ಚಿಕಿತ್ಸೆಯ ವಿಚಾರದಲ್ಲಿಯೂ ಈ ಮಾತು ನಿಜ.

ನಿಯಮಿತವಾದ ದಂತ ವೈದ್ಯಕೀಯ ತಪಾಸಣೆಯನ್ನು ನಿರ್ಲಕ್ಷಿಸುವುದರಿಂದ ಇರಬಹುದಾದ ಅನಾರೋಗ್ಯಗಳು ಉಲ್ಬಣಗೊಂಡು ಗಂಭೀರ ದಂತ ವೈದ್ಯಕೀಯ, ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳಿಗೆ ತುತ್ತಾಗಬೇಕಾದೀತು. ಪ್ರತೀ ಮೂರು ತಿಂಗಳುಗಳಿಗೆ ಒಮ್ಮೆ ಸಮೀಪದ ದಂತ ವೈದ್ಯರ ಬಳಿಗೆ ಹೋಗಿ ತಪಾಸಣೆ ಮಾಡಿಸಿಕೊಂಡರೆ ನಿಮ್ಮ ಹಲ್ಲುಗಳ ಆರೋಗ್ಯ ಮಾತ್ರವಲ್ಲದೆ ಒಟ್ಟಾರೆ ಆರೋಗ್ಯ ಮತ್ತು ಹಣಕಾಸಿನ ಸ್ಥಿತಿಗತಿ ಬಾಧೆಗೀಡಾಗದೆ ಸುಸ್ಥಿತಿಯಲ್ಲಿರುತ್ತವೆ.

ಇದರಿಂದ ನೀವು ಹಲವು ತೊಂದರೆಗಳಿಂದ ಪಾರಾಗಬಹುದು.

ಒಂದು ಉದಾಹರಣೆ ನೋಡೋಣ. ನೀವು ಬಾಯಿಯ ನೈರ್ಮಲ್ಯವನ್ನು ನಿರ್ಲಕ್ಷಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ವಸಡುಗಳ ಉದ್ದಕ್ಕೆ ಕೊಳೆಯ ಪದರ ಬೆಳೆಯುತ್ತದೆ. ವಸಡುಗಳು ಮತ್ತು ಹಲ್ಲುಗಳ ನಡುವೆ ಬ್ಯಾಕ್ಟೀರಿಯಾ ಹೆಚ್ಚುತ್ತವೆ. ನಿಯಮಿತವಾದ ಹಲ್ಲುಶುಚಿಗಾಗಿ ವೈದ್ಯರಲ್ಲಿಗೆ ಹೋಗುವುದಿಲ್ಲ. ಇದರಿಂದ ಜಿಂಜಿವೈಟಿಸ್‌ ಉಂಟಾಗುತ್ತದೆ, ಕ್ರಮೇಣ ಪೆರಿಯೋಡಾಂಟಿಕ್ಸ್‌ ತಲೆದೋರುತ್ತದೆ. ಬಾಯಿಯೊಳಗೆ ಗಾಯ, ಬಿರುಕು ಅಥವಾ ಹಲ್ಲುಜ್ಜುವಾಗ ಉಂಟಾಗುವ ಗಾಯದಿಂದಾಗಿ ಅವಕಾಶ ದೊರೆತರೆ ಬಾಯಿಯಲ್ಲಿ ಬೆಳೆದಿರುವ ಬ್ಯಾಕ್ಟೀರಿಯಾಗಳು ರಕ್ತ ಪರಿಚಲನೆ ವ್ಯವಸ್ಥೆಯೊಳಕ್ಕೂ ಹೊಕ್ಕು ಬಿಡುವ ಸಾಧ್ಯತೆಯಿದೆ.

ಈಗ ನಿಮ್ಮ ರೋಗ ನಿರೋಧಕ ವ್ಯವಸ್ಥೆ ಬಲಿಷ್ಠವಾಗಿದ್ದರೆ ದೇಹ ಸುಲಭವಾಗಿ ಅವುಗಳ ವಿರುದ್ಧ ಹೋರಾಡಿ ನಾಶ ಮಾಡಿ ಬಿಡುತ್ತದೆ. ಆದರೆ ಕ್ಯಾನ್ಸರ್‌, ಮಧುಮೇಹ ಅಥವಾ ಎಚ್‌ಐವಿಯಂತಹ ಅನಾರೋಗ್ಯಗಳಿಂದ ರೋಗ ನಿರೋಧಕ ವ್ಯವಸ್ಥೆ ದುರ್ಬಲವಾಗಿದ್ದರೆ ಇದು ದೇಹದ ಯಾವುದೇ ಅಂಗದಲ್ಲಿ ಸೋಂಕಿಗೆ ಕಾರಣವಾಗಬಹುದು. ಉದಾಹರಣೆಗೆ, ದುರ್ಬಲ ಎಂಡೊಕಾರ್ಡಿಟಿಸ್‌ – ಬ್ಯಾಕ್ಟೀರಿಯಾಗಳು ರಕ್ತ ಪರಿಚಲನೆ ವ್ಯವಸ್ಥೆಗೆ ಸೇರಿ ಹೃದಯದ ಕವಾಟಗಳ ಭಿತ್ತಿಗೆ ಅಂಟಿಕೊಳ್ಳುವುದರಿಂದ ತಲೆದೋರುವ ಗಂಭೀರ ಅನಾರೋಗ್ಯ ಇದು.

ತೀವ್ರ ತರಹದ ವಸಡಿನ ಕಾಯಿಲೆಗಳು ಅವಧಿಪೂರ್ವ ಹೆರಿಗೆ ಮತ್ತು ಶಿಶು ಅಪ್ರಾಪ್ತವಾಗಿ ಜನಿಸುವಂತಹ ಸಮಸ್ಯೆಗಳನ್ನೂ ಉಂಟು ಮಾಡುತ್ತದೆ.

ಅಧ್ಯಯನಗಳು ಹೇಳುವುದೇನೆಂದರೆ, ಭ್ರೂಣದ ಬೆಳವಣಿಗೆ ಮತ್ತು ಪ್ರಗತಿಗೆ ಅಡಚಣೆ ಉಂಟುಮಾಡುವ ವಿಷಾಂಶಗಳನ್ನು ಬ್ಯಾಕ್ಟೀರಿಯಾಗಳು ಬಿಡುಗಡೆ ಮಾಡಬಲ್ಲವು. ಬಾಯಿಯ ಸೋಂಕಿನಿಂದ ಅವಧಿಪೂರ್ವ ಪ್ರಸೂತಿಯೂ ತಲೆದೋರಬಹುದಾಗಿದೆ.

ಸ್ಥೂಲವಾಗಿ ಏನು ಹೇಳಬಹುದು ಎಂದರೆ, ಪ್ರತೀ ಮೂರು ತಿಂಗಳುಗಳಿಗೆ ಒಂದು ಬಾರಿ ದಂತ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳುವುದರಿಂದ ನಿಮ್ಮ ಒಟ್ಟು ಆರೋಗ್ಯವನ್ನು ಕಾಪಾಡಿಕೊಂಡಂತಾಗುತ್ತದೆ; ಸದ್ಯಕ್ಕೆ ಮಾತ್ರ ಅಲ್ಲ, ಭವಿಷ್ಯದ ದೃಷ್ಟಿಯಿಂದಲೂ.

ದಂತ ವೈದ್ಯರನ್ನು ನಿಯಮಿತವಾಗಿ ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳುವುದರಿಂದ ನಿಮ್ಮ ಹಲ್ಲುಗಳು ಮತ್ತು ವಸಡುಗಳನ್ನು ಮಾತ್ರ ಆರೋಗ್ಯವಾಗಿ ಇರಿಸಿಕೊಳ್ಳುವುದಲ್ಲ; ಇನ್ನಿತರ ಹಲವು ಅನಾರೋಗ್ಯಗಳು ಕಾಡದಂತೆ ಪ್ರತಿಬಂಧಿಸಬಹುದು.

-ಡಾ| ಆನಂದದೀಪ್‌ ಶುಕ್ಲಾ

ಅಸೊಸಿಯೇಟ್‌ ಪ್ರೊಫೆಸರ್‌,

ಓರಲ್‌ ಸರ್ಜರಿ ವಿಭಾಗ,

ಮಣಿಪಾಲ

ದಂತ ವೈದ್ಯಕೀಯ ಮಹಾವಿದ್ಯಾಲಯ,

ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ದಂತ ವೈದ್ಯಕೀಯ ವಿಭಾಗ, ಎಂಸಿಒಡಿಎಸ್‌, ಮಾಹೆ, ಮಂಗಳೂರು)

ಟಾಪ್ ನ್ಯೂಸ್

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು

Ramalinga Reddy: “ಸಾರಿಗೆ ಸಿಬಂದಿ ವೇತನ ಪರಿಷ್ಕರಣೆಗೆ ಚರ್ಚೆ

Ramalinga Reddy: “ಸಾರಿಗೆ ಸಿಬಂದಿ ವೇತನ ಪರಿಷ್ಕರಣೆಗೆ ಚರ್ಚೆ

Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್‌: ಅಶ್ವಿ‌ನಿ ವೈಷ್ಣವ್‌

Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್‌: ಅಶ್ವಿ‌ನಿ ವೈಷ್ಣವ್‌

sidda

‘One Nation One Election’ ಪ್ರಸ್ತಾವ: ಒಕ್ಕೂಟ ವ್ಯವಸ್ಥೆಗೆ ವಿರುದ್ಧ: ಸಿಎಂ

cmCM Siddaramaiah ಮೈಸೂರಲ್ಲಿ ಚಿತ್ರನಗರಿ: 110 ಎಕರೆ ಹಸ್ತಾಂತರ

CM Siddaramaiah ಮೈಸೂರಲ್ಲಿ ಚಿತ್ರನಗರಿ: 110 ಎಕರೆ ಹಸ್ತಾಂತರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-redmeat

Red Meat: ಮಧುಮೇಹ ಉಂಟಾಗುವ ಅಪಾಯ ಮತ್ತು ಕೆಂಪು ಮಾಂಸ ಸೇವನೆಗಿರುವ ಸಂಬಂಧ

5-body-weight

Body Weight: ಕ್ರೀಡಾಳುಗಳ ಸಾಧನೆಯ ಮೇಲೆ ಕ್ಷಿಪ್ರ ದೇಹತೂಕ ಏರಿಳಿತದ ಪರಿಣಾಮಗಳು

4-female-health

Females Health: ಲಘು ರಕ್ತಸ್ರಾವ ಮತ್ತು ಋತುಸ್ರಾವ್ರ ವ್ಯತ್ಯಾಸ ತಿಳಿಯಿರಿ

19

Health: ಬಿಸಿಲಿನ ತಾಪದಿಂದ ಆರೋಗ್ಯ ಅಪಾಯ ತಡೆಯಲು ಏನು ಮಾಡ ಬೇಕು?

16

Health: ಸ್ತನ ಕಸಿ ಮತ್ತು ಕ್ಯಾನ್ಸರ್‌ ಪರಸ್ಪರ ಸಂಬಂಧ ಇದೆಯೇ?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು

Ramalinga Reddy: “ಸಾರಿಗೆ ಸಿಬಂದಿ ವೇತನ ಪರಿಷ್ಕರಣೆಗೆ ಚರ್ಚೆ

Ramalinga Reddy: “ಸಾರಿಗೆ ಸಿಬಂದಿ ವೇತನ ಪರಿಷ್ಕರಣೆಗೆ ಚರ್ಚೆ

Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್‌: ಅಶ್ವಿ‌ನಿ ವೈಷ್ಣವ್‌

Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್‌: ಅಶ್ವಿ‌ನಿ ವೈಷ್ಣವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.