Kasaragod ಅಪರಾಧ ಸುದ್ದಿಗಳು
Team Udayavani, Sep 1, 2024, 8:32 PM IST
ಬಾಲಕಿ ಅಪಹರಣ: ಬಂಧನ
ಕಾಸರಗೋಡು: ಎರಡು ವರ್ಷದ ಬಾಲಕಿಯನ್ನು ಅಪಹರಿಸಿದ್ದ ಎರ್ನಾಕುಳಂ ನಿವಾಸಿ ಅನೀಶ್ ಕುಮಾರ್(49)ನನ್ನು ಕಾಸರಗೋಡು ರೈಲ್ವೇ ಪೊಲೀಸ್ ಹಾಗೂ ಆರ್ಪಿಎಫ್ ಬಂಧಿಸಿದೆ.
ಮಂಗಳೂರಿನ ಕಂಕನಾಡಿಯಿಂದ ಈ ಮಗುವನ್ನು ಅಪಹರಿಸಲಾಗಿತ್ತು. ಈ ಮಗುವನ್ನು ಗೋವಾದಿಂದ ಅಪಹರಿಸಲಾಗಿದೆ ಎಂದು ವಿಚಾರಣೆಯ ಸಂದರ್ಭ ಆತ ಆರಂಭದಲ್ಲಿ ಹೇಳಿದ್ದ. ಆ ಬಳಿಕ ತನ್ನ ಹೇಳಿಕೆಯನ್ನು ಬದಲಾಯಿಸಿ ಕಂಕನಾಡಿಯಿಂದ ಅಪಹರಿಸಲಾಗಿದೆ ಎಂದಿದ್ದಾನೆ.
ಗಾಂಧಿ ಧಾಂ – ನಾಗರಕೋವಿಲ್ ಎಕ್ಸ್ಪ್ರೆಸ್ ರೈಲಿನಲ್ಲಿ ಈ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದ. ಈತನ ನಡವಳಿಕೆ ಕಂಡು ಸಂಶಯಿಸಿದ ಇತರ ಪ್ರಯಾಣಿಕರು ಆರ್ಪಿಎಫ್ಗೆ ಮಾಹಿತಿ ನೀಡಿದ್ದರು. ಅದರಂತೆ ಮಗು ಸಹಿತ ಈತನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಈ ಮಗುವನ್ನು ಹೇಗೆ ಅಪಹರಿಸಲಾಯಿತು ಎಂಬ ಬಗ್ಗೆ ಯಾವುದೇ ಮಾಹಿತಿ ಈವರೆಗೂ ಲಭಿಸಿಲ್ಲ. ಹೆಚ್ಚಿನ ತನಿಖೆಯ ಬಳಿಕವಷ್ಟೇ ಸಂಪೂರ್ಣ ಮಾಹಿತಿ ಲಭಿಸಲಿದೆ. ವ್ಯಕ್ತಿ ಹಾಗೂ ಮಗುವನ್ನು ಕಂಕನಾಡಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಎರಡಂತಸ್ತಿನ ಕಟ್ಟಡ ಕುಸಿತ
ಕಾಸರಗೋಡು: ನಗರದ ಎಂ.ಜಿ. ರಸ್ತೆಯ ಹಳೆಯ ಎರಡಂತಸ್ತಿನ ಕಟ್ಟಡ ಆ. 31ರಂದು ರಾತ್ರಿ ಕುಸಿದು ಬಿದ್ದಿದೆ. ಈ ಕಟ್ಟಡದಲ್ಲಿದ್ದ ಅಂಗಡಿಗಳನ್ನು ವ್ಯಾಪಾರಿಗಳು ಮುಚ್ಚಿ ಹೋಗಿದ್ದರಿಂದ ಸಂಭವನೀಯ ದುರಂತ ತಪ್ಪಿತು.
ಹಳೆ ಬಸ್ ನಿಲ್ದಾಣ ಸಮೀಪದ ಮೀನು ಮಾರುಕಟ್ಟೆ ರಸ್ತೆಯ ಹೆಂಚು ಹಾಸಿದ ಹಳೆಯ ಕಟ್ಟಡ ಮುರಿದು ಬಿದ್ದಿದೆ. ಮಳೆಯಿಂದಾಗಿ ಎಲ್ಲ ವ್ಯಾಪಾರಿಗಳು ಬೇಗನೆ ಮನೆಗೆ ಹೋಗಿದ್ದರು. ಏಳು ಅಂಗಡಿಗಳು ಕುಸಿದು ಬಿದ್ದಿದೆ. ತರಕಾರಿ, ಒಣಗಿದ ಮೀನು ಮಾರಾಟದ ಅಂಗಡಿಗಳು ಕುಸಿದಿವೆ. ಇದರ ಸಮೀಪದ ಅಂಗಡಿಗಳು ಯಾವುದೇ ಕ್ಷಣದಲ್ಲೂ ಕುಸಿದು ಬೀಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪೊಲೀಸರು ಅತ್ತ ಸಾಗದಂತೆ ತಡೆಹಿಡಿದಿದ್ದಾರೆ. ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದೆ.
ಕಾರು ಢಿಕ್ಕಿ: ಬೈಕ್ ಸವಾರ ಸಾವು
ಕುಂಬಳೆ: ಸೀತಾಂಗೋಳಿ ಸೂರಂಬೈಲ್ನಲ್ಲಿ ಕಾರು ಢಿಕ್ಕಿ ಹೊಡೆದು ಬೈಕ್ ಸವಾರ ವಸಂತ (53) ಸಾವಿಗೀಡಾದರು. ಕಾರು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ವಸಂತ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.