Keradi: ಮೂಡುಗಲ್ಲು ಗುಹಾಂತರ ದೇಗುಲಕ್ಕೆ ಜೂನಿಯರ್ ಎಂಟಿಆರ್, ರಿಷಬ್ ಭೇಟಿ
Team Udayavani, Sep 1, 2024, 9:48 PM IST
ಕುಂದಾಪುರ; ಕೆರಾಡಿ ಗ್ರಾಮದ ಮೂಡುಗಲ್ಲಿನ ಶ್ರೀ ಕೇಶವನಾಥೇಶ್ವರ ಗುಹಾಂತರ ದೇವಸ್ಥಾನಕ್ಕೆ ರವಿವಾರ ತೆಲುಗು ನಟ ಜೂನಿಯರ್ ಎನ್ಟಿಆರ್ ಹಾಗೂ ರಿಷಬ್ ಶೆಟ್ಟಿ(ನಂದಮೂರಿ ತಾರಕ್ ರಾಮ್) ಅವರು ಭೇಟಿ ನೀಡಿ, ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಕೊಲ್ಲೂರಿನಿಂದ ಇಲ್ಲಿಗೆ ಆಗಮಿಸಿದ ಅವರು ಇಲ್ಲಿನ ದೇವಸ್ಥಾನ ಮತ್ತು ಪ್ರಾಕೃತಿಕ ಸೌಂದರ್ಯವನ್ನು ಕಂಡು ಅತೀವ ಖುಷಿಪಟ್ಟರು.
ಪ್ರಕೃತಿಯ ವಿಸ್ಮಯ ಈ ದೇಗುಲ
ಪ್ರಕೃತಿಯಿಂದಲೇ ನಿರ್ಮಿತವಾಗಿರುವ ವಿಶಿಷ್ಟ, ವಿಶೇಷವಾಗಿದೆ ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ದೇವಸ್ಥಾನ. ಗುಹೆಯೇ ಶಿವನಿಗೆ ಆಲಯವಾಗಿದೆ. ಇಲ್ಲಿ ಗುಡಿಯೊಳಗೆ ಸುಮಾರು 20 30 ಅಡಿಗಳಷ್ಟು ವಿಶಾಲವಾದ ಜಾಗದಲ್ಲಿ ಹರಡಿರುವ ನೀರು, ಅಲ್ಲಿರುವ ಹಲವು ಬಗೆಯ ಮೀನುಗಳು, ನೀರಿನಲ್ಲಿಯೇ ನಿಂತು ದೇವರಿಗೆ ಕೈ ಮುಗಿಯುವ ಕ್ಷಣ, ಕಾಲಿಗೆ ಮುತ್ತಿಕ್ಕುವ ಮೀನುಗಳು ಎಲ್ಲವೂ ಒಂದು ರೀತಿಯ ವಿಶಿಷ್ಟ ಅನುಭೂತಿಯನ್ನು ನೀಡುತ್ತದೆ. ಕತ್ತಲಲ್ಲಿ ದೇವರ ದೀಪದ ಬೆಳಕು ಬಿಟ್ಟರೆ ಬೇರೆ ಬೆಳಕಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.