Karkala ಬೋಳ ರಮನಾಥ ಕಾಮತ್ ಆದರ್ಶ ಉದ್ಯಮಿ: ಡಾ| ಪ್ರಭಾಕರ ಜೋಷಿ
Team Udayavani, Sep 2, 2024, 12:09 AM IST
ಕಾರ್ಕಳ: ಉದ್ಯಮಿ, ರಫ್ತುದಾರ, ಯಕ್ಷಗಾನ ಪ್ರೇಮಿ ಬೋಳ ರಮಾನಾಥ ಕಾಮತ್ ಅವರು ಹಂತ ಹಂತದ ಹೊಸ ಯೋಜನೆಯ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಗುಣಮಟ್ಟದ ಉದ್ಯಮ ನಡೆಸಿ ಬಿಆರ್ಕೆ ಎಂಬ ಗೇರು ಉದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಆವರಿಸಿದ್ದರು. ಸಹ ಉದ್ಯಮಿಗಳಿಗೆ ಮಾರ್ಗದರ್ಶನ ನೀಡಿರುವ ಜತೆಗೆ ಯಕ್ಷಗಾನ ಪ್ರೇಮಿಯಾಗಿ ಜಿಲ್ಲೆಯಲ್ಲಿ ಯಕ್ಷಗಾನ ಅಭಿರುಚಿ ಬೆಳೆಸಿದವರು ಎಂದು ಯಕ್ಷಗಾನ ಪ್ರೇಮಿ ಡಾ| ಪ್ರಭಾಕರ ಜೋಷಿ ಹೇಳಿದರು.
ಎಸ್ವಿಟಿ ಶಾಲೆಯ ಸಭಾಂಗಣದಲ್ಲಿ ಸೆ. 1ರಂದು ಇತ್ತೀಚೆಗೆ ನಿಧನ ಹೊಂದಿದ ಉದ್ಯಮಿ ಬೋಳ ರಮನಾಥ ಕಾಮತ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಒಂದನೆ ಮೊಕ್ತೇಸರ ಜಯರಾಮ ಪ್ರಭು, ಉದ್ಯಮಿಗಳಾದ ಬೋಳ ಪ್ರಭಾಕರ ಕಾಮತ್, ಬೋಳ ಜಯವಂತ ಕಾಮತ್, ಗಣೇಶ್ ಕಾಮತ್, ರೋಹಿತ್ ಕಾಮತ್, ಗಣಪತಿ ಕಾಮತ್, ನಾಗರಾಜ ಶೆಟ್ಟಿ, ಬೋಳ ರಮಾನಾಥ ಕಾಮತ್ ಅವರ ಪುತ್ರರಾದ ಬೋಳ ಅಣ್ಣಪ್ಪ ಕಾಮತ್, ಬೋಳ ರಘುನಂದನ್ ಕಾಮತ್, ಬೋಳ ನಾಗರಾಜ ಕಾಮತ್ ಉಪಸ್ಥಿತರಿದ್ದರು. ಎನ್. ರಾಮಭಟ್ ಕಾರ್ಯಕ್ರಮ ನಿರೂಪಿಸಿದರು. ಕೆ.ಜೆ. ಗಣೇಶ್ ಮತ್ತು ತಂಡ ಯಕ್ಷಗಾನ ಹಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.