Nature: ಪ್ರಕೃತಿಯೊಂದಿಗೆ ಕಳೆದ ಆ ದಿನ


Team Udayavani, Sep 3, 2024, 8:06 PM IST

13-

ಭೂ ಮಂಡಲದ ಅತ್ಯಾಕರ್ಷಕ ಹಾಗೂ ಅದ್ಭುತವಾದ ಸೃಷ್ಟಿಗಳಲ್ಲಿ ಮಳೆಯೂ ಒಂದು. ಮಳೆಯ ಆವಶ್ಯಕತೆ ಈ ಭೂಮಿಗೆ ಎಷ್ಟಿದೆಯೋ, ಭೂಮಿಯಲ್ಲಿ ವಾಸಿಸುವ ಪ್ರತಿಯೊಂದು ಜೀವಿಗಳಿಗೂ ಅಷ್ಟೇ ಇದೆ. ಭಾರತದಲ್ಲಿ ಸುಮಾರು ನಾಲ್ಕೈದು ತಿಂಗಳುಗಳ ಕಾಲ ಮಳೆ ಸುರಿಯುತ್ತದೆ. ಬೇಸಗೆಯ ಬಿಸಿಲಿನಲ್ಲಿ ಬೆಂದು ಬಾಯಾರಿದಂತಹ ಭೂಮಿ ತನ್ನ ದಾಹವನ್ನು ತೀರಿಸಿಕೊಳ್ಳುವ ಕಾಲವದು.

ಜಗತ್ತಿಗೆ ಅನ್ನ ನೀಡುವ ರೈತ ತನ್ನ ಬೆಳೆ ಬೆಳೆಯುತ್ತಿರುವುದನ್ನು ನೋಡಿ ನಲಿದಾಡುವ ಕಾಲವದು. ಬಿಸಿಲಿನ ತಾಪಕ್ಕೆ ಕಂಗೆಟ್ಟ ಪರಿಸರ ಮತ್ತೆ ಚಿಗುರೊಡೆಯುವ ಕಾಲವದು. ಇದೇ ಅವಧಿಯಲ್ಲಿ ಪರಿಸರ ಎಲ್ಲೆಡೆ ಹಸುರು ಬಣ್ಣವನ್ನು ತೊಟ್ಟುನಿಂತು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಇದನ್ನೆಲ್ಲಾ ನೋಡಿದಾಗ ಪ್ರಕೃತಿಗೂ ಮಳೆಗಾಲಕ್ಕೂ ಅವಿನಾಭಾವ ಸಂಬಂಧವಿದೆ ಎಂಬುದು ಖಂಡಿತವಾಗಿಯೂ ಅರ್ಥವಾಗುತ್ತದೆ.

ಜಗತ್ತಿನ ಕೋಟ್ಯಂತರ ಪ್ರವಾಸಿಗರ ಪೈಕಿ ನಾನೂ ಒಬ್ಬ ಪುಟ್ಟ ಪ್ರವಾಸಿಗ. ನನ್ನ ಬಹುತೇಕ ಪ್ರವಾಸ ಇರುವುದು ನನ್ನ ಜಿಲ್ಲೆಯಲ್ಲೇ. ಅದುವೇ ಕರ್ನಾಟಕದ ಸ್ವರ್ಗದ ಹೆಬ್ಟಾಗಿಲು ಎಂದು ಕರೆಯಲ್ಪಡುವ ಚಿಕ್ಕಮಗಳೂರು. ನನ್ನದು ಎಲ್ಲವೂ ಸಣ್ಣಪುಟ್ಟ ಪ್ರವಾಸಗಳಾಗಿರುವುದರಿಂದ ನಮ್ಮ ಜಿಲ್ಲೆಯ ಬೆಟ್ಟ, ಜಲಪಾತಗಳನ್ನು ಕಣ್ತುಂಬಿಕೊಳ್ಳುವುದೇ ನನಗೆ ಮಹದಾನಂದ.

ಇತ್ತೀಚೆಗೆ ಭಾರೀ ಮಳೆಯ ಮಧ್ಯವೂ ಸಣ್ಣ ಪ್ರವಾಸವೊಂದನ್ನು ಕೈಗೊಂಡಿದ್ದೆ. ನನ್ನ ಪ್ರವಾಸದ ಮೊದಲ ಭೇಟಿ ಕರ್ನಾಟಕದ ಅತೀ ಎತ್ತರದ ಶಿಖರ ಎಂದೇ ಗುರುತಿಸಿಕೊಂಡಿರುವ ಮುಳ್ಳಯ್ಯನಗಿರಿಗೆ. ಬೆಟ್ಟವನ್ನು ಹತ್ತುತ್ತಿದ್ದಂತೆ ಪ್ರಕೃತಿಯನ್ನು ಆವರಿಸುತ್ತಿದ್ದ ಮಂಜಿನ ವಾತಾವರಣವನ್ನು ಆಸ್ವಾಧಿಸುತ್ತಾ ಬೆಟ್ಟದ ಮೇಲೆ ತಲುಪಿ ಕೆಳಗೆ ನೋಡಿದಾಗ ಆಹಾ… ನಾನು ನಿಜವಾಗಿಯೂ ಬೇರೊಂದು ಲೋಕದಲ್ಲಿದ್ದೇನೆ ಎಂಬಂತೆ ಭಾಸವಾಗಿ ಮೂಕವಿಸ್ಮಿತನಾದೆ.

ಸುತ್ತಲಿನ ಯಾವ ಪ್ರದೇಶವೂ ಕಾಣದ ಹಾಗೆ ಹಬ್ಬಿದ ಮಂಜು, ಅಲ್ಪಸ್ವಲ್ಪ ಕಾಣುವ ಸುತ್ತುವರೆದ ಸರಣಿ ಬೆಟ್ಟ ಗುಡ್ಡಗಳು, ಹರಿದು ಬರುತ್ತಿದ್ದ ಪರಿಶುದ್ಧವಾದ ಜಲಧಾರೆ, ಮಳೆಗೆ ಚಿಗುರಿ ನಲಿದಾಡುತ್ತಿದ್ದ ಗಿಡ ಮರಗಳು ಇದನ್ನೆಲ್ಲ ನೋಡಿ ನಿಂತಾಗ ಸಮಯ ಕಳೆದದ್ದೇ ಗೊತ್ತಾಗಲಿಲ್ಲ.

ಮುಂದೆ ನನ್ನ ಪಯಣ ಝರಿ ಜಲಪಾತದ ಕಡೆಗೆ. ಕಾಫಿ ತೋಟ ಮಧ್ಯೆ ನುಸುಳುತ್ತಾ, ಜಿಗಣೆಗಳೊಂದಿಗೆ ಯುದ್ಧ ಮಾಡುತ್ತಾ ಸಾಗಿ ಮಹಿಳೆಯೊಬ್ಬಳು ತಲೆ ತುಂಬಾ ಹೂವು ಮುಡಿದು, ಒಡವೆಗಳನ್ನು ತೊಟ್ಟು ಸಿಂಗಾರಗೊಂಡಂತೆ ತನ್ನ ಮೈಯೆಲ್ಲ ನೀರಿನಿಂದ ಅಲಂಕರಿಸಿದಂತೆ ಕಾಣುವ ಝರಿ ಜಲಪಾತಕ್ಕೆ ತಲುಪಿದೆ. ಸುಮಾರು 70ರಿಂದ 80 ಅಡಿ ಎತ್ತರದಿಂದ ನೀರು ನೆಲಕ್ಕೆ ಧುಮುಕುವ ದೃಶ್ಯ ಸ್ವರ್ಗವೇ ಧರೆಗಿಳಿದಂತೆ ಕಾಣುತ್ತಿತ್ತು. ಸಮಯದ ಪರಿವಿಲ್ಲದೆ ಅಲ್ಲಿ ನೀರಿನಲ್ಲಿ ಆಟವಾಡಿ, ನಲಿದಾಡಿ ಬಳಿಕ ಮನೆಗೆ ಮರಳುವ ಹೊತ್ತಾಯಿತೆಂದು ಮುಖ ಬಾಡಿಸಿಕೊಂಡು ಅಲ್ಲಿಂದ ಹೊರಟೆ.

ಹೀಗೆ ಪ್ರಕೃತಿಯೊಂದಿಗೆ ನಾನು ನನ್ನ ಒಂದು ದಿನದ ಪುಟ್ಟ ಪ್ರವಾಸ ಮುಗಿಸಿದೆ. ದೇಶ ಸುತ್ತು, ಕೋಶ ಓದು ಎಂಬ ನಾಣ್ಣುಡಿಯಂತೆ ಜಗತ್ತಿನ ಆಗುಹೋಗುಗಳನ್ನು ಅರಿಯಲು ಹೊಸ ಜಾಗಗಳಿಗೆ ಭೇಟಿ ಕೊಡುತ್ತಿರೋಣ. ಸಮಯ ಸಿಕ್ಕಾಗ ಪ್ರಕೃತಿಯೊಂದಿಗೆ ಒಂದಾಗಿ ಕಾಲ ಕಳೆಯೋಣ.

-ಪವನ್‌ ಕುಮಾರ್‌

ಎಸ್‌ಡಿಎಂ, ಉಜಿರೆ

ಟಾಪ್ ನ್ಯೂಸ್

Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್‌ ಡೆಲಿವರಿ ಯುವಕ ಆತ್ಮಹತ್ಯೆ

Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್‌ ಡೆಲಿವರಿ ಯುವಕ ಆತ್ಮಹತ್ಯೆ

police crime

Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ

Chikkamagaluru: ಮನೆಯಲ್ಲಿ ಯಾರೂ ಇರದ ವೇಳೆ ಐದರ ಬಾಲಕಿ ಅನುಮಾನಾಸ್ಪದ ಸಾವು

Chikkamagaluru: ಮನೆಯಲ್ಲಿ ಯಾರೂ ಇರದ ವೇಳೆ ಐದರ ಬಾಲಕಿ ಅನುಮಾನಾಸ್ಪದ ಸಾವು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಕೋಡಿಹಳ್ಳಿ ಚಂದ್ರಶೇಖರ್

Davanagere: ಗ್ಯಾರಂಟಿ ಯೋಜನೆಗಳು ಮತ ಪಡೆಯಲೆಂದೇ ರೂಪಿಸಿರುವ ಕಾರ್ಯಕ್ರಮ: ಕೋಡಿಹಳ್ಳಿ

14

Jani Master: ನನ್ನ ಪತಿ ಎಲ್ಲಿದ್ದಾರೆ.. ಠಾಣೆ ಬಳಿ ಜಾನಿ ಮಾಸ್ಟರ್‌ ಪತ್ನಿ ರಾದ್ಧಾಂತ

Leopard ಓಡಿಸಲು ಅರಣ್ಯ ಇಲಾಖೆ ಹಾರಿಸಿದ ಗುಂಡಿನಿಂದ ನಾಲ್ವರು ರೈತರಿಗೆ ಗಾಯ; ಚಿರತೆ ಸಾವು

Leopard ಓಡಿಸಲು ಅರಣ್ಯ ಇಲಾಖೆ ಹಾರಿಸಿದ ಗುಂಡಿನಿಂದ ನಾಲ್ವರು ರೈತರಿಗೆ ಗಾಯ; ಚಿರತೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1

Amparu: ರೆಸ್ಟೋರೆಂಟ್‌ನಲ್ಲಿ ಹೊಡೆದಾಟ

police crime

Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ

Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್‌ ಡೆಲಿವರಿ ಯುವಕ ಆತ್ಮಹತ್ಯೆ

Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್‌ ಡೆಲಿವರಿ ಯುವಕ ಆತ್ಮಹತ್ಯೆ

1

Puttur: ವಿದ್ಯುತ್‌ ಉಪಕರಣದಲ್ಲಿ ಬೆಂಕಿ

sand

Kundapura: ಮರಳು ಅಕ್ರಮ ಸಾಗಾಟ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.