Belthangady: ಮಾನವನ ಸ್ವಯಂಕೃತ ಅಪರಾಧದಿಂದ ಬಹುಪಾಲು ಸಮಸ್ಯೆ

ಶೇ.80 ಮನೆ ಹಾನಿಗೆ ಭೂಕುಸಿತ ಕಾರಣ

Team Udayavani, Sep 4, 2024, 1:06 PM IST

Belthangady: ಮಾನವನ ಸ್ವಯಂಕೃತ ಅಪರಾಧದಿಂದ ಬಹುಪಾಲು ಸಮಸ್ಯೆ

ಬೆಳ್ತಂಗಡಿ: ಕಡಿದಾದ ಪ್ರದೇಶ ದಲ್ಲಿ ಭೂ ಸಮತಟ್ಟು ಮಾಡಿ ಬೆಟ್ಟವನ್ನು ಕಡಿದು ಮನೆಗಳ ನಿರ್ಮಿಸಿದ ಪರಿಣಾಮ ಪ್ರಸಕ್ತ ಸಾಲಿನ ಮಳೆಗೆ ಶೇ.80ರಷ್ಟು ಮನೆಗಳು ಹಾನಿಗೊಳಗಾಗಿರುವ ವರದಿ ಬಹಿರಂಗವಾಗಿದೆ.

ಬೆಳ್ತಂಗಡಿ ತಾಲೂಕಿನಲ್ಲಿ 2019ರ ಆಗಸ್ಟ್‌ನಲ್ಲಿ ಪ್ರವಾಹ ಎದುರಾದಾಗ ಅನೇಕ ಮನೆಗಳು ಹಾನಿಗೀಡಾಗಿದ್ದವು. ಈ ಭಾರೀ ಮಳೆ 2019ರ ಪ್ರವಾಹವನ್ನು ನೆನಪಿಸುವಂತಿತ್ತು. ಆದರೆ ಅಂದು ಪ್ರಾಕೃತಿಕ ವಿಕೋಪಕ್ಕೆ ಸಂಭವಿಸಿದ ಹಾನಿಯಾದರೆ, ಪ್ರಸಕ್ತ ಸಾಲಿನಲ್ಲಿ ಮಾನವ ಸ್ವಯಂಕೃತ ಅಪರಾಧದಿಂದ ಬಹುಪಾಲು ಹಾನಿ ಸಂಭವಿಸಿರುವುದು ಸ್ಪಷ್ಟವಾಗಿದೆ.

ಗರಿಷ್ಠ 220 ಮಿ.ಮೀ. ವರೆಗೆ ಮಳೆ ಜೂನ್‌ 2024ರಿಂದ ಈ ವರೆಗೆ ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 233 ಮನೆಗಳು ಹಾನಿಗೊಳಗಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಈ ಬಾರಿ ಸರಾಸರಿ ಕನಿಷ್ಠ 30ರಿಂದ ಗರಿಷ್ಠ 220 ಮಿ.ಮೀ. ವರೆಗೆ ಮಳೆಯಾಗಿದೆ.

ಪರಿಣಾಮ 233 ಮನೆಗಳು ಭಾಗಶಃ ಹಾನಿ ಗೀಡಾಗಿವೆ. ಈ ಪೈಕಿ ಸುಮಾರು 191 ಮನೆ ಗಳು ಮೇಲೆ ಪಕ್ಕದ ಗುಡ್ಡ ಕುಸಿತದಿಂದಲೇ ಹಾನಿಗೊಳಗಾಗಿರುವುದು ಖಚಿತವಾಗಿದೆ.

ತೀವ್ರ ಮಳೆಯಿಂದಾಗಿ ಈ ಬಾರಿ ಹೆಚ್ಚಿನ ಹಾನಿ ಸಂಭವಿಸಿದೆ. ಬೆಟ್ಟ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಭೂಮಿ ಸಮತಟ್ಟು ಮಾಡಿ ಮನೆ ನಿರ್ಮಿಸಿದಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಮುಂದೆ ಹೀಗಾಗದಂತೆ ಜಿಲ್ಲಾ ಧಿಕಾರಿಗಳ ನೇತೃತ್ವದ ತಂಡ ಹೊಸ ನಿಯಮ ಜಾರಿಗೆ ತರುವಲ್ಲಿ ವಿಶ್ಲೇಷಣೆ ನಡೆಸುತ್ತಿದೆ. ಮುಂದೆ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ.
-ಪೃಥ್ವಿ ಸಾನಿಕಮ್‌ ತಹಶೀಲ್ದಾರ್‌, ಬೆಳ್ತಂಗಡಿ

ಗ್ರಾಪಂ ಮಟ್ಟದಲ್ಲಿ ಈ ಬಾರಿ ಹಾನಿಗೊಳಗಾದ ಮನೆ, ರಸ್ತೆ, ಸೇತುವೆ ಸಹಿತ ಸಮಗ್ರ ಮಾಹಿತಿ ಪಡೆದು ವರದಿ ಸಿದ್ಧಪಡಿಸಿ ನೀಡಲಾ ಗಿದೆ. ಇದಕ್ಕಾಗಿಯೇ ಜಿಲ್ಲಾಡಳಿತ ನಿಯೋಜಿಸಿದ ತಂಡ ವರದಿ ನೀಡಿದೆ. ಅದರಂತೆ ಹಾನಿಗೊಳಗಾದ ರಸ್ತೆ, ಸೇತುವೆ ದುರಸ್ತಿಗೆ ಅನುದಾನ ಕೋರಿ ಸರಕಾರಕ್ಕೆ ಬರೆಯಲಾಗಿದೆ.
– ಭವಾನಿ ಶಂಕರ್‌, ಇಒ, ತಾ.ಪಂ. ಬೆಳ್ತಂಗಡಿ

ಹಾನಿ ಹಾಗೂ ಪರಿಹಾರ ವಿವರ
ಸಂಪೂರ್ಣ ಹಾನಿ: 15 ಮನೆ-ತಲಾ 1.25 ಲ.ರೂ.
ಶೇ.15-20 ಹಾನಿ: 141 ಮನೆ- ತಲಾ 6,500 ರೂ. ನಂತೆ 9,16,500 ಲ.ರೂ.
ಶೇ.20-50 ಹಾನಿ: 50 ಮನೆ -ತಲಾ 30,000ರೂ. ನಂತೆ 15,00,000 ಲ.ರೂ.
ಶೇ.50-75 ಹಾನಿ: 5 ಮನೆ- ತಲಾ 50,000ರೂ. ನಂತೆ 2,50,000 ಲ.ರೂ. ಪರಿಹಾರ
ಜಾನುವಾರ ಹಾನಿ: 2 ಹಸು, 1 ಕರು – 57,000 ರೂ. ಪರಿಹಾರ
ಕೃಷಿ ಹಾನಿ: 10 ಹೆಕ್ಟೇರ್‌ ಭತ್ತ ಬೆಳೆ ನಾಶ
ತೋಟಗಾರಿಕೆ-ಶೇ.33, ಹೆಚ್ಚಿನ ಹಾನಿಯಿಲ್ಲ.

ನಿಯಮ ಬಾಹಿರ ಮನೆ ನಿರ್ಮಾಣ
ಮನೆ ನಿರ್ಮಾಣಕ್ಕಾಗಿ ಸ್ಥಳೀಯಾಡಳಿತ ಕಾಯ್ದಿರಿಸಿದ ಸ್ಥಳಗಳೇ ಬಹುತೇಕ ಸುರಕ್ಷತೆಯಿಲ್ಲ. ಈ ನಡುವೆ ಖಾಸಗಿ ಸ್ಥಳಗಳಲ್ಲಿ ಕೆಲವೆಡೆ ಮನೆಗಳು ನಿಯಮ ಬಾಹಿರವಾಗಿ ನಿರ್ಮಿಸಿರುವುದು ಇದಕ್ಕೆ ಕಾರಣವಾಗಿದೆ. ಮನೆ ಪಕ್ಕ 90 ಡಿಗ್ರಿ ಲಂಭವಾಗಿ ಗುಡ್ಡವನ್ನು ಕಡಿದು ಸಮೀಪವೇ ಮನೆ ನಿರ್ಮಿಸಿದ ಅನೇಕ ಮನೆಗಳಿವೆ. ಸೆಟ್‌ ಬ್ಯಾಕ್‌ ಬಿಡುವ ಉದ್ದೇಶ ಬಹುತೇಕ ನಿಯಮ ಗಾಳಿಗೆ ತೂರಲಾಗಿದೆ. ಇವೆಲ್ಲ ಈ ವರ್ಷದ ವರ್ಷಧಾರೆಗೆ ಕುಸಿತ ಉಂಟಾಗಿದೆ.

248 ಮನೆ ಹಾನಿ 45 ಲಕ್ಷ ರೂ. ಪರಿಹಾರ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 15 ಮನೆ ಸಂಪೂರ್ಣ ಹಾನಿಗೀಡಾಗಿದ್ದು ತಲಾ 1.25 ಲಕ್ಷ ರೂ.ನಂತೆ 18,75,000 ಲಕ್ಷ ರೂ.ನೆರವು, 223 ಭಾಗಶಃ ಮನೆ ಹಾನಿಗಳ ಪೈಕಿ 191 ಮನೆಗಳನ್ನು ಮೂರು ರೀತಿಯಲ್ಲಿ ವಿಂಗಡಿಸಲಾಗಿದೆ. ಜಾನುವಾರು ಸೇರಿ ಒಟ್ಟು 45,98,500 ಲಕ್ಷ ರೂ. ನೆರವನ್ನು ಜಿಲ್ಲಾಡಳಿತದ ಮೇರೆಗೆ ತಾಲೂಕು ಆಡಳಿತದಿಂದ ನೀಡಲಾಗಿದೆ.

-ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

INDvsBAN: Bangladesh team in fear of ICC punishment

INDvsBAN: ಟೆಸ್ಟ್‌ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Thirthahalli: ಮರವೇರಿ ಕುಳಿತ್ತಿದ್ದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

Thirthahalli: ಮರವೇರಿ ಕುಳಿತ್ತಿದ್ದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

3-bng

Bengaluru: ನಗರದಲ್ಲಿ 3 ವರ್ಷದಲ್ಲಿ 9700 ಮರಗಳ ಹನನ

ನಟಿಯಾಗುವ ಕನಸು ಕಂಡಿದ್ದ ದ್ರುವಿ ಪಟೇಲ್ ಗೆ ‘ಮಿಸ್ ಇಂಡಿಯಾ ವರ್ಲ್ಡ್‌ವೈಡ್ 2024’ ಕಿರೀಟ

ನಟಿಯಾಗುವ ಕನಸು ಕಂಡಿದ್ದ ಧ್ರುವಿ ಪಟೇಲ್ ಗೆ ‘Miss India Worldwide 2024’ ಕಿರೀಟ

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್

Kolkata: ಶನಿವಾರದಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDvsBAN: Bangladesh team in fear of ICC punishment

INDvsBAN: ಟೆಸ್ಟ್‌ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Thirthahalli: ಮರವೇರಿ ಕುಳಿತ್ತಿದ್ದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

Thirthahalli: ಮರವೇರಿ ಕುಳಿತ್ತಿದ್ದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

5-darshan

Bengaluru: ಜೈಲಲ್ಲಿ ವಿಶೇಷ ಆತಿಥ್ಯ: ನಾಗ, ವೇಲು 2 ದಿನ ಕಸ್ಟಡಿಗೆ

ಗಾಂಜಾ ಸೇವನೆ ತಡೆಗೆ ಪೊಲೀಸ್ ಇಲಾಖೆ ಮುಂದಾಗಬೇಕು: ಮೋಹನ್ ಕುಮಾರ್

Anandpura: ಗಾಂಜಾ ತಡೆಗೆ ಪೊಲೀಸ್ ಇಲಾಖೆ ಮುಂದಾಗಬೇಕು: ಮೋಹನ್ ಕುಮಾರ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

INDvsBAN: Bangladesh team in fear of ICC punishment

INDvsBAN: ಟೆಸ್ಟ್‌ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Thirthahalli: ಮರವೇರಿ ಕುಳಿತ್ತಿದ್ದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

Thirthahalli: ಮರವೇರಿ ಕುಳಿತ್ತಿದ್ದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ

5-darshan

Bengaluru: ಜೈಲಲ್ಲಿ ವಿಶೇಷ ಆತಿಥ್ಯ: ನಾಗ, ವೇಲು 2 ದಿನ ಕಸ್ಟಡಿಗೆ

ಗಾಂಜಾ ಸೇವನೆ ತಡೆಗೆ ಪೊಲೀಸ್ ಇಲಾಖೆ ಮುಂದಾಗಬೇಕು: ಮೋಹನ್ ಕುಮಾರ್

Anandpura: ಗಾಂಜಾ ತಡೆಗೆ ಪೊಲೀಸ್ ಇಲಾಖೆ ಮುಂದಾಗಬೇಕು: ಮೋಹನ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.