Bantwal: ದೇವಸ್ಯಪಡೂರು ಗ್ರಾಮದ ಮಾಲಬೆ ಮೋರಿ ಕುಸಿತ: ರಸ್ತೆ ಸಂಚಾರ ಕಡಿತ ಭೀತಿ!
Team Udayavani, Sep 4, 2024, 1:22 PM IST
ಬಂಟ್ವಾಳ: ಅಲ್ಲಿಪಾದೆ- ಕುಂಟಾಲಪಲ್ಕೆ ರಸ್ತೆಯ ದೇವಸ್ಯಪಡೂರು ಗ್ರಾಮದ ಮಾಲಬೆಯಲ್ಲಿ ಮೋರಿ ಕುಸಿದು ರಸ್ತೆಯಲ್ಲಿ ಸಂಚಾರ ಕಡಿತದ ಭೀತಿ ಎದುರಾಗಿದೆ. ಕಳೆದ ಮಳೆಗಾಲದಲ್ಲೇ ಮೋರಿ ಕುಸಿದಿದ್ದು, ಇದೀಗ ಮತ್ತೆ ಹೆಚ್ಚಿನ ಕುಸಿತ ಉಂಟಾಗಿ
ಕಳೆದ ಎರಡು ತಿಂಗಳ ಹಿಂದೆ ಭೀಕರ ಮಳೆಯ ಸಂದರ್ಭದಲ್ಲಿ ಈ ಭಾಗದಲ್ಲಿ ಮೋರಿ ಕುಸಿದಿದ್ದು, ಬಳಿಕ ಅಲ್ಲಿಗೆ ಕಪ್ಪು ಕಲ್ಲು ಸಹಿತ ಹುಡಿಗಳನ್ನು ಹಾಕಿ ತಾತ್ಕಾಲಿಕ ಪರಿಹಾರ ಕಲ್ಪಿಸಲಾಗಿತ್ತು. ಆದರೆ ಈಗ ಮತ್ತೆ ಜೋರಾಗಿ ಮಳೆಯಾಗುತ್ತಿರುವುದರಿಂದ ಹಿಂದಿನ ಸ್ಥಿತಿ ಪುನರಾವರ್ತನೆಯಾಗಿದೆ.
ವಾಹನ ಸಂಚಾರ ಸಂಕಷ್ಟ
ರಸ್ತೆಯಲ್ಲಿ ಕುಸಿತ ಉಂಟಾಗಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದ್ದು, ಈ ರಸ್ತೆಯಲ್ಲಿ ಖಾಸಗಿ ಬಸ್ಸಿನ ಸಂಚಾರ ಕೂಡ ಇರುವುದರಿಂದ ಕುಸಿತದಿಂದ ಸಂಪರ್ಕ ಕಡಿತಗೊಂಡಲ್ಲಿ ನೂರಾರು ಪ್ರಯಾಣಿಕರಿಗೂ ತೊಂದರೆ ಉಂಟಾಗಲಿದೆ. ಜತೆಗೆ ಇಲ್ಲಿನ ರಸ್ತೆಯು ಈ ಭಾಗದ ನೂರಾರು ಮನೆಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಒಂದು ವೇಳೆ ಮತ್ತಷ್ಟು ಕುಸಿದು ಸಂಚಾರ ಕಡಿತಗೊಂಡಲ್ಲಿ ನೂರಾರು ಗ್ರಾಮಸ್ಥರಿಗೆ ತೊಂದರೆಯಾಗಲಿದೆ.
ಗಲಬೆಯಲ್ಲಿ ಕಳೆದ ಜುಲೈಯಲ್ಲಿ ಮೋರಿ ಕುಸಿದು ರಸ್ತೆಗೆ ಹಾನಿಯಾಗಿದ್ದು, ಆ ಸಂದರ್ಭದಲ್ಲಿ ಜಿ.ಪಂ.ಎಂಜಿನಿಯರಿಂಗ್ ವಿಭಾಗದವರು ತಾತ್ಕಾಲಿಕ ಪರಿಹಾರ ಕಲ್ಪಿಸಿದ್ದರು. ಈಗ ಮತ್ತೆ ಕುಸಿತದಿಂದ ಹೆಚ್ಚಿನ ಹಾನಿ ಉಂಟಾಗಿದೆ. ಹೀಗಾಗಿ ಕಂದಾಯ ಇಲಾಖೆ ಹಾಗೂ ಎಂಜಿನಿಯರಿಂಗ್ ವಿಭಾಗದವರು ಇತ್ತ ಗಮನಹರಿಸಿ ಮಳೆಹಾನಿ ಪರಿಹಾರದಲ್ಲಿ ದುರಸ್ತಿ ಕಾರ್ಯ ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ.
– ವಿನ್ಸೆಂಟ್ ಪಿಂಟೋ, ಸ್ಥಳೀಯರು
ರಸ್ತೆಯು ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆಯ ಮೂಲಕ ಅನುಷ್ಠಾನಗೊಂಡಿದ್ದು, ಪ್ರಸ್ತುತ ಮೋರಿ ಕುಸಿದಿರುವ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ರಸ್ತೆಯ ಕುಸಿಯುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಕಾರ್ಯ ಮಾಡಬೇಕಿದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sullia: ಅಭಿವೃದ್ಧಿ ಕಾಣದ ಪೆರ್ಮಾಜೆ-ಕೋಟೆಗುಡ್ಡೆ-ಪಂಬೆತ್ತಾಡಿ ರಸ್ತೆ
Bengaluru:ಟಿವಿ ರಿಪೇರಿಗೆ ಸ್ಪಂದಿಸದ ಎಲೆಕ್ಟ್ರಾನಿಕ್ಸರ್ವೀಸ್ ಸೆಂಟರ್ಗೆ 12 ಸಾವಿರ ದಂಡ!
Thumbe: ಅಗೆದಲ್ಲಿ ಕಡೆಗೂ ಡಾಮರು
Bengaluru: ʼರಾಹುಲ್ ಭಯೋತ್ಪಾದಕ’ ಹೇಳಿಕೆ: ಕೇಂದ್ರ ಸಚಿವ ರವನೀತ್ ವಿರುದ್ಧ ಕೇಸ್
Surrender Arms: ಶಸ್ತ್ರಾಸ್ತ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಅಮಿತ್ ಶಾ ಮನವಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Sullia: ಅಭಿವೃದ್ಧಿ ಕಾಣದ ಪೆರ್ಮಾಜೆ-ಕೋಟೆಗುಡ್ಡೆ-ಪಂಬೆತ್ತಾಡಿ ರಸ್ತೆ
Bengaluru:ಟಿವಿ ರಿಪೇರಿಗೆ ಸ್ಪಂದಿಸದ ಎಲೆಕ್ಟ್ರಾನಿಕ್ಸರ್ವೀಸ್ ಸೆಂಟರ್ಗೆ 12 ಸಾವಿರ ದಂಡ!
Thumbe: ಅಗೆದಲ್ಲಿ ಕಡೆಗೂ ಡಾಮರು
Bengaluru: ʼರಾಹುಲ್ ಭಯೋತ್ಪಾದಕ’ ಹೇಳಿಕೆ: ಕೇಂದ್ರ ಸಚಿವ ರವನೀತ್ ವಿರುದ್ಧ ಕೇಸ್
Surrender Arms: ಶಸ್ತ್ರಾಸ್ತ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಅಮಿತ್ ಶಾ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.