Paralympics: ಕಂಚಿನ ಓಟ ಓಡಿದ ದೀಪ್ತಿ; ಗೇಲಿಗೀಡಾಗಿದ್ದ ಕುಟುಂಬಕ್ಕೀಗ ಹೆಮ್ಮೆ

ಮಹಿಳೆಯರ 400 ಮೀ. ಟಿ20 ವಿಭಾಗದಲ್ಲಿ ಕಂಚು ಗೆದ್ದ ದೀಪ್ತಿ ಜೀವನ್‌ಜೀ 55.82 ಸೆ.ನಲ್ಲಿ ಗುರಿ ತಲುಪಿ ಸಾಧನೆ | ಚೊಚ್ಚಲ ಪ್ಯಾರಾಲಿಂಪಿಕ್ಸ್ ಪದಕ ಗಳಿಕೆ

Team Udayavani, Sep 4, 2024, 3:05 PM IST

Paralympics: ಕಂಚಿನ ಓಟ ಓಡಿದ ದೀಪ್ತಿ; ಗೇಲಿಗೀಡಾಗಿದ್ದ ಕುಟುಂಬಕ್ಕೀಗ ಹೆಮ್ಮೆ

ಪ್ಯಾರಿಸ್‌: ಪ್ಯಾರಾಲಿಂಪಿಕ್ಸ್‌ ಮಹಿಳೆಯರ 400 ಮೀ. ಓಟದಲ್ಲಿ ಭಾರತದ ದೀಪ್ತಿ ಜೀವನ್‌ಜೀಗೆ ಕಂಚಿನ ಪದಕ ಒಲಿದಿದೆ. ಮಹಿಳಾ 400 ಮೀ. ಟಿ20 ವಿಭಾಗದಲ್ಲಿ 55.82 ಸೆಕೆಂಡ್‌ ಸಾಧನೆಯೊಂದಿಗೆ ದೀಪ್ತಿ ಕಂಚಿಗೆ ಕೊರಳೊಡ್ಡಿದ್ದಾರೆ. ಇದು ಪ್ಯಾರಾಲಿಂಪಿಕ್ಸ್‌ನಲ್ಲಿ ಅವರಿಗೊಲಿದ ಚೊಚ್ಚಲ ಪದಕ.

ಈ ವಿಭಾಗದಲ್ಲಿ ಉಕ್ರೇನ್‌ನ ಯುಲಿಯಾ ಶುಲಿಯರ್‌ (55.16), ಟರ್ಕಿಯ ಐಸೆಲ್‌ ವಂಡರ್‌ (55.23) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ವಿಶ್ವ ದಾಖಲೆ ನಿರ್ಮಿಸಿದ್ದ ಸಾಧಕಿ: 20 ವರ್ಷದ ತೆಲಂಗಾಣದವರಾದರ ಜೀವನ್‌ ಜೀ, ಕಳೆದ ಮೇ ತಿಂಗಳು ಜಪಾನ್‌ನ ಕೋಬೆಯಲ್ಲಿ ನಡೆದಿದ್ದ ಪ್ಯಾರಾ ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 55.06 ಸೆಕೆಂಡ್‌ ಸಾಧನೆಯೊಂದಿಗೆ ವಿಶ್ವ ದಾಖಲೆ ಸಹಿತ ಚಿನ್ನ ಗೆದ್ದಿದ್ದರು.2022ರ ಹಾಂಗ್‌ಝೌ ಪ್ಯಾರಾ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಸಾಧನೆ ಅವರದ್ದಾಗಿದೆ.

ದೀಪ್ತಿ ಸಾಧನೆ ಮೆಟ್ಟಿಲು
2022 ಏಷ್ಯನ್‌ ಪ್ಯಾರಾಗೇಮ್ಸ್‌ ಚಿನ್ನ
2024 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವ ದಾಖಲೆ (55.06 ಸೆ.) ಸಹಿತ ಚಿನ್ನ

ಪದಕ ಗೆದ್ದ ಬಡ ಕೃಷಿ ಕಾರ್ಮಿಕರ ಮಗಳು: ದೀಪ್ತಿ ಜೀವನ್‌ಜೀ ಹುಟ್ಟಿದ್ದು 2003 ತೆಲಂಗಾಣದ ವಾರಂಗಲ್‌ ಜಿಲ್ಲೆಯ ಕಲ್ಲೆದ ಹಳ್ಳಿಯಲ್ಲಿ. ಯಾಧಗಿರಿ ಜೀವನ್‌ಜೀ ಮತ್ತು ಧನಲಕ್ಷ್ಮಿ ಜೀವನ್‌ಜೀಯ ಪುತ್ರಿಯಾಗಿ ಜನಿಸಿದ ದೀಪ್ತಿಯ ಕುಟುಂಬಕ್ಕೆ ಅರ್ಧ ಎಕರೆಯಷ್ಟು ಕೃಷಿ ಭೂಮಿಯಿದೆ. ಆದರೆ ಮನೆಯಲ್ಲಿ ಬಡತನದ ಕಾರಣ ದೀಪ್ತಿ ಕುಟುಂಬ ಇತರರ ಭೂಮಿಯಲ್ಲಿ ಕೂಲಿ ಯಾಗಿ ದುಡಿದು ಜೀವನದ ಬಂಡಿ ಎಳೆಯುತ್ತಿದೆ.

ದೀಪ್ತಿಯ ಕ್ರೀಡಾ ಬದುಕು ಆರಂಭವಾಗಿದ್ದು ಶಾಲಾ ದಿನಗಳಲ್ಲಿ. 9ನೇ ತರಗತಿ ಕಲಿಯುತ್ತಿದ್ದಾಗ, ಬೌದ್ಧಿಕ ದೌರ್ಬಲ್ಯವಿದ್ದರೂ ಆಟೋಟದಲ್ಲಿ ಮುಂದಿರುತ್ತಿದ್ದ ಹುಡುಗಿ ದೀಪ್ತಿಯನ್ನು ಪಿಇಟಿ ಟೀಚರ್‌ ಒಬ್ಬರು ಗಮನಿಸಿ ಆಕೆಗೆ ಕ್ರೀಡೆಯ ಬಗ್ಗೆ ಉತ್ತೇಜನ ನೀಡಿದರು. ಬಳಿಕ ರಮೇಶ್‌ ಎನ್ನುವ ಭಾರತ ಜೂನಿಯರ್‌ ತಂಡದ ಕೋಚ್‌ ಗರಡಿಯಲ್ಲಿ ಪಳಗಿದ ದೀಪ್ತಿ, ಕ್ರೀಡೆಯಲ್ಲಿ ಇನ್ನೂ ಬೆಳೆದರು. ಬಡತನದ ಹುಡುಗಿಗೆ ಬ್ಯಾಡ್ಮಿಂಟನ್‌ ದಿಗ್ಗಜ ಪುಲ್ಲೇಲ ಗೋಪಿ  ಚಂದ್‌ ಅವರಿಂದಲೂ ಬೆಂಬಲ ಸಿಕ್ಕಿತು. ಹೀಗೆ ಬೆಳೆದ ದೀಪ್ತಿ ಈಗ ಪ್ಯಾರಾಲಿಂಪಿಕ್ಸ್‌ ಪದಕ ಗೆದ್ದು ಮಿನುಗುತ್ತಿದ್ದಾರೆ. ಬುದ್ಧಿಮಾಂದ್ಯ ಹುಡುಗಿಯನ್ನು ಗುರಿಯಾಗಿಸಿ ಅದೆಷ್ಟೋ ಹಳ್ಳಿಗರು ದೀಪ್ತಿ ಕುಟುಂಬವನ್ನು ಗೇಲಿ ಮಾಡಿದ್ದಿದೆ. ಆದರೆ ಅದೇ ಕುಟುಂಬವೀಗ ಹೆಮ್ಮೆ ಪಡುವಂತ ಸಾಧನೆಯನ್ನು ದೀಪ್ತಿ ಮಾಡಿದ್ದಾರೆ.

ಏನಿದು ಟಿ20 ವಿಭಾಗ?
ದೀಪ್ತಿ ಜೀವನ್‌ಜೀ ಕಂಚು ಗೆದ್ದಿರುವ ಈ ʼಟಿ20ʼ ವಿಭಾಗ ಬೌದ್ಧಿಕ ದೌರ್ಬಲ್ಯ ಉಳ್ಳ ಅಥ್ಲೀಟ್‌ಗಳಿಗಾಗಿಯೇ ಮೀಸಲಾದ ಓಟದ ವಿಭಾಗ. ಇಲ್ಲಿ ʼಟಿʼ ಎಂದರೆ ಟ್ರ್ಯಾಕ್‌ ಎಂದರೆ ಟ್ರ್ಯಾಕ್‌ ಅಥವಾ ಓಟ ಎಂದು ಅರ್ಥೈಸಿಕೊಳ್ಳಬಹುದು.

ಟಾಪ್ ನ್ಯೂಸ್

Udupi ಗೀತಾರ್ಥ ಚಿಂತನೆ-39: ನಿರ್ಮತ್ಸರದ ಮಹತ್ವ

Udupi ಗೀತಾರ್ಥ ಚಿಂತನೆ-39: ನಿರ್ಮತ್ಸರದ ಮಹತ್ವ

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು

Ramalinga Reddy: “ಸಾರಿಗೆ ಸಿಬಂದಿ ವೇತನ ಪರಿಷ್ಕರಣೆಗೆ ಚರ್ಚೆ

Ramalinga Reddy: “ಸಾರಿಗೆ ಸಿಬಂದಿ ವೇತನ ಪರಿಷ್ಕರಣೆಗೆ ಚರ್ಚೆ

Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್‌: ಅಶ್ವಿ‌ನಿ ವೈಷ್ಣವ್‌

Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್‌: ಅಶ್ವಿ‌ನಿ ವೈಷ್ಣವ್‌

sidda

‘One Nation One Election’ ಪ್ರಸ್ತಾವ: ಒಕ್ಕೂಟ ವ್ಯವಸ್ಥೆಗೆ ವಿರುದ್ಧ: ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Athletics: ದ.ಕ. ಜಿಲ್ಲೆ ಸಮಗ್ರ ಚಾಂಪಿಯನ್‌

Athletics: ದ.ಕ. ಜಿಲ್ಲೆ ಸಮಗ್ರ ಚಾಂಪಿಯನ್‌

Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್‌- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು

Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್‌- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು

T20 world cup 2024; ವನಿತೆಯರ ವಿಶ್ವಕಪ್‌ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ

T20 world cup 2024; ವನಿತೆಯರ ವಿಶ್ವಕಪ್‌ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ

Ranji Trophy: Samit Dravid in possible squad

Ranji Trophy: ಸಂಭಾವ್ಯ ತಂಡದಲ್ಲಿ ಸಮಿತ್‌ ದ್ರಾವಿಡ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Car-Palti

Sulya: ಎರಡು ಕಾರುಗಳು ಢಿಕ್ಕಿ; ನಿಯಂತ್ರಣ ತಪ್ಪಿ ಕಾರು ಪಲ್ಟಿ

Udupi ಗೀತಾರ್ಥ ಚಿಂತನೆ-39: ನಿರ್ಮತ್ಸರದ ಮಹತ್ವ

Udupi ಗೀತಾರ್ಥ ಚಿಂತನೆ-39: ನಿರ್ಮತ್ಸರದ ಮಹತ್ವ

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.