Ganesh Chaturthi; ಬೇಡಿಕೆ ಹೆಚ್ಚಳ, ಪೂರೈಕೆ ಕೊರತೆ: ಹಬ್ಬಕ್ಕೆ ಬಾಳೆಹಣ್ಣು ಬಲು ದುಬಾರಿ


Team Udayavani, Sep 5, 2024, 7:10 AM IST

Ganesh Chaturthi; ಬೇಡಿಕೆ ಹೆಚ್ಚಳ, ಪೂರೈಕೆ ಕೊರತೆ: ಹಬ್ಬಕ್ಕೆ ಬಾಳೆಹಣ್ಣು ಬಲು ದುಬಾರಿ

ಬಂಟ್ವಾಳ: ವಿಪರೀತ ಮಳೆಯಿಂದಾಗಿ ಬಾಳೆ ಬೆಳೆ ತೀವ್ರ ಹಾನಿಯಾಗಿದ್ದು, ಜತೆಗೆ ಶ್ರೀ ಗಣೇಶ ಚತುರ್ಥಿ ಸಹಿತ ಸಾಲು ಸಾಲು ಹಬ್ಬಗಳ ಕಾರಣದಿಂದ ಬಾಳೆಹಣ್ಣಿನ ಬೆಳೆ ಗಗನಕ್ಕೇರಿಸಿದೆ. ಅತಿ ಹೆಚ್ಚು ಮಾರಾಟವಾಗುವ ಕದಳಿ ಬಾಳೆಹಣ್ಣಿನ ಬೆಲೆ ಕೆ.ಜಿ.ಗೆ 20ರಿಂದ 30 ರೂ.ನಷ್ಟು ಹೆಚ್ಚಾಗಿದೆ.

ಘಟ್ಟದ ಕದಳಿಗೆ 120 ರೂ.
ಬಿ.ಸಿ.ರೋಡಿನ ಮಾರುಕಟ್ಟೆಯಲ್ಲಿ ಊರಿನ ಕದಳಿ ಬಾಳೆಹಣ್ಣು ಕೆ.ಜಿ.ಗೆ 80 ರೂ.ಗಳಿಗೆ ಮಾರಾಟವಾಗುತ್ತಿದ್ದು, ಕೆಲವು ಸಮಯಗಳ ಹಿಂದೆ 50 ರೂ.ನಷ್ಟಿತ್ತು. ಘಟ್ಟದ ಕದಳಿ ಧಾರಣೆ ಕೆ.ಜಿ.ಗೆ 120 ರೂ. ಇದೆ. ಇದರ ಕಾಯಿ 88ರಿಂದ 90 ರೂ.ಗಳಿಗೆ ರಖಂ ವರ್ತಕರಿಗೆ ಬರುತ್ತಿದ್ದು, ಇದು ಕೂಡ 20ರಿಂದ 30 ರೂ.ಗಳನ್ನಷ್ಟು ದುಬಾರಿಯಾಗಿದೆ.

ಉಳಿದಂತೆ ಗಾಳಿ, ಬೂದಿ ಬಾಳೆಹಣ್ಣು ಬೆಲೆ 40 ರೂ., ಕ್ಯಾವಂಡೀಸ್‌ 40 ರೂ.ಗಳಿಗೆ ಮಾರಾಟವಾಗುತ್ತಿದೆ. ಇದರಲ್ಲಿ ಉತ್ತಮ ಗುಣಮಟ್ಟದವು 50 ರೂ.ಗಳಿಗೆ ಮಾರಾಟವಾಗುತ್ತಿವೆ. ಘಟ್ಟದ ಮೇಲಿನ ಮೈಸೂರು ಬಾಳೆಹಣ್ಣು 60 ರೂ.ಗಳಿಗೆ ಮಾರಾಟವಾಗುತ್ತಿದ್ದು, ಊರಿನದ್ದಕ್ಕೆ 50 ರೂ. ಬೆಲೆ ಇದೆ.

ಇನ್ನಷ್ಟು ಹೆಚ್ಚಾಗುವ ಸಾಧ್ಯತೆ
ಸದ್ಯಕ್ಕೆ ಈ ಧಾರಣೆ ಇದ್ದರೂ ಹಬ್ಬದ ದಿನಗಳು ಹತ್ತಿರ ಬರುತ್ತಿದ್ದಂತೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ವರ್ತಕರು ಹೇಳುತ್ತಿದ್ದು, ಹಬ್ಬದ ಋತು ಮುಗಿದರೆ ಧಾರಣೆ ಕಡಿಮೆಯಾಗಬಹುದು. ಆದರೆ ಬೇಡಿಕೆಯಷ್ಟು ಪೂರೈಕೆಯಾಗದಿದ್ದರೆ ಬೆಲೆ ಇಳಿಕೆ ಸಂಶಯ ಎನ್ನಲಾಗುತ್ತಿದೆ.

ಅರಸೀಕೆರೆ ಸಹಿತ ಘಟ್ಟ ಪ್ರದೇಶದ ಹಣ್ಣುಗಳು ಉತ್ತಮ ಗುಣಮಟ್ಟದಿಂದ ಕೂಡಿರುವುದರಿಂದ ಧಾರಣೆ ಕೊಂಚ ಹೆಚ್ಚಿದ್ದು, ಊರಿನ ಹಣ್ಣುಗಳು ಇಷ್ಟು ಗುಣಮಟ್ಟದಿಂದ ಕೂಡಿರುವುದಿಲ್ಲ ಎಂಬುದು ವರ್ತಕರ ಅಭಿಪ್ರಾಯ.

ನೇಂದ್ರ ಧಾರಣೆ ಕುಸಿತ
ನೇಂದ್ರ ಬಾಳೆ ಹಣ್ಣಿನ ಪೂರೈಕೆ ಹೆಚ್ಚಿರುವುದರಿಂದ ಧಾರಣೆ ಕೊಂಚ ಇಳಿಕೆಯಾಗಿದೆ. ಕೆಲವು ಸಮಯದ ಹಿಂದೆ 80ರಿಂದ 90 ರೂ.ಗೆ ಮಾರಾಟವಾಗುತ್ತಿದ್ದ ನೇಂದ್ರ, ಪ್ರಸ್ತುತ 60-70 ರೂ.ಗಳಿಗೆ ಇಳಿದಿದೆ.

20ರಿಂದ 30 ರೂ. ಹೆಚ್ಚಳ
ಮಳೆ ಹಾಗೂ ಹಬ್ಬದ ಸೀಸನ್‌ ಕಾರಣಕ್ಕೆ ಬಾಳೆ ಹಣ್ಣಿನ ಧಾರಣೆ ಹೆಚ್ಚಿದ್ದು, ಇನ್ನೆರಡು ದಿನಗಳಲ್ಲಿ ಮತ್ತಷ್ಟು ಏರುವ ಸಾಧ್ಯತೆಯೂ ಇದೆ. ಕದಳಿ ಹಣ್ಣಿನ ಧಾರಣೆ ಕೆಜಿಗೆ 20ರಿಂದ 30 ರೂ.ಗಳಷ್ಟು ಹೆಚ್ಚಾಗಿದೆ.
-ವೆಂಕಟೇಶ್‌, ವರ್ತಕರು, ಬಿ.ಸಿ.ರೋಡು.

ಟಾಪ್ ನ್ಯೂಸ್

DC-CHILD

Child safety: ಮಕ್ಕಳ ರಕ್ಷಣ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ

Suside-Boy

Putturu: ವೃದ್ಧನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Court-Symbol

Kasaragodu: ಶಿಕ್ಷಕಿ ಆತ್ಮಹತ್ಯೆ: ಪತಿಗೆ 9 ವರ್ಷ, ಅತ್ತೆಗೆ 7 ವರ್ಷ ಕಠಿನ ಜೈಲು ಶಿಕ್ಷೆ

Udupi ಗೀತಾರ್ಥ ಚಿಂತನೆ-39: ನಿರ್ಮತ್ಸರದ ಮಹತ್ವ

Udupi ಗೀತಾರ್ಥ ಚಿಂತನೆ-39: ನಿರ್ಮತ್ಸರದ ಮಹತ್ವ

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suside-Boy

Putturu: ವೃದ್ಧನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Car-Palti

Sulya: ಎರಡು ಕಾರುಗಳು ಢಿಕ್ಕಿ; ನಿಯಂತ್ರಣ ತಪ್ಪಿ ಕಾರು ಪಲ್ಟಿ

Subramanya ಚಿನ್ನಾಭರಣ ಕಳವು; ಪ್ರಕರಣ ದಾಖಲು

Subramanya ಚಿನ್ನಾಭರಣ ಕಳವು; ಪ್ರಕರಣ ದಾಖಲು

kalla

Vittalpadanur: 36 ಗ್ರಾಂ ಚಿನ್ನಾಭರಣ ಕಳವು; ಪ್ರಕರಣ ದಾಖಲು

Puttur: ಎಪಿಎಂಸಿ ರೈಲ್ವೇ ಸಂಪರ್ಕ ರಸ್ತೆಗೆ ಭೂ ಸ್ವಾಧೀನವೇ ಸವಾಲು

Puttur: ಎಪಿಎಂಸಿ ರೈಲ್ವೇ ಸಂಪರ್ಕ ರಸ್ತೆಗೆ ಭೂ ಸ್ವಾಧೀನವೇ ಸವಾಲು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

DC-CHILD

Child safety: ಮಕ್ಕಳ ರಕ್ಷಣ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ

Suside-Boy

Putturu: ವೃದ್ಧನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Court-Symbol

Kasaragodu: ಶಿಕ್ಷಕಿ ಆತ್ಮಹತ್ಯೆ: ಪತಿಗೆ 9 ವರ್ಷ, ಅತ್ತೆಗೆ 7 ವರ್ಷ ಕಠಿನ ಜೈಲು ಶಿಕ್ಷೆ

Car-Palti

Sulya: ಎರಡು ಕಾರುಗಳು ಢಿಕ್ಕಿ; ನಿಯಂತ್ರಣ ತಪ್ಪಿ ಕಾರು ಪಲ್ಟಿ

Udupi ಗೀತಾರ್ಥ ಚಿಂತನೆ-39: ನಿರ್ಮತ್ಸರದ ಮಹತ್ವ

Udupi ಗೀತಾರ್ಥ ಚಿಂತನೆ-39: ನಿರ್ಮತ್ಸರದ ಮಹತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.