Narendra Modi: ಅಭಿವೃದ್ಧಿ ನೀತಿಗೆ ಬೆಂಬಲ, ವಿಸ್ತರಣ ವಾದಕ್ಕಲ್ಲ: ಪ್ರಧಾನಿ ಮೋದಿ
Team Udayavani, Sep 5, 2024, 10:03 AM IST
ಹೊಸದಿಲ್ಲಿ: “ಭಾರತವು ಅಭಿವೃದ್ಧಿ ನೀತಿಯನ್ನು ಬೆಂಬಲಿಸುತ್ತದೆಯೇ ವಿನಃ ವಿಸ್ತರಣ ವಾದವನ್ನಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ದಕ್ಷಿಣ ಚೀನ ಸಮುದ್ರ (ಎಸ್ಸಿಎಸ್), ಪೂರ್ವ ಚೀನ ಸಮುದ್ರ (ಇಸಿಎಸ್)ಗಳಲ್ಲಿ ಚೀನದ ಕ್ಯಾತೆ ಹೆಚ್ಚಿರುವಂತೆಯೇ ಚೀನವನ್ನು ಉಲ್ಲೇಖೀಸದಯೇ ಅವರು ಈ ರೀತಿ ಟಾಂಗ್ ನೀಡಿದ್ದಾರೆ.
ಬ್ರೂನೈ ರಾಜ ಸುಲ್ತಾನ್ ಹಸನಾಲ್ ಬೊಲ್ಕಿಯಾ ಏರ್ಪಡಿಸಿದ್ದ ಔತಣ ಕೂಟದಲ್ಲಿ ಪ್ರಧಾನಿ ಭಾಗಿಯಾಗಿದ್ದರು. ಈ ವೇಳೆ ಭದ್ರತೆ, ಹೂಡಿಕೆ, ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳ ಸಹಕಾರದ ಕುರಿತು ಮಾತುಕತೆ ನಡೆಸಲಾಗಿದೆ. ಅಲ್ಲದೇ ದಕ್ಷಿಣ ಹಾಗೂ ಪೂರ್ವ ಚೀನ ಸಮುದ್ರಗಳಲ್ಲಿನ ವಿವಾದ, ಸದ್ಯದ ಬೆಳವಣಿಗೆ ಕುರಿತೂ ಮಾತುಕತೆ ನಡೆದಿದೆ.
ಈ ವೇಳೆ ಪ್ರಧಾನಿ “ಭಾರತ ಸದಾ ಅಭಿವೃದ್ಧಿ ನೀತಿಯನ್ನು ಬೆಂಬಲಿಸುತ್ತದೆ. ವಿಸ್ತರಣ ವಾದವನ್ನು ಅಲ್ಲ. ಸಾಗರ ಭದ್ರತೆ, ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳಲು ನಾವು ಉತ್ತೇಜಿಸುತ್ತೇವೆ. ಭಾರತ ಸದಾ ಆಸಿಯನ್ ಕೇಂದ್ರೀಕರಣಕ್ಕೆ ಆದ್ಯತೆ ನೀಡುತ್ತಾ ಬಂದಿದೆ. ಅದನ್ನೇ ಮುಂದುವರಿಸುತ್ತದೆ’ ಎಂದಿದ್ದಾರೆ.
ದಕ್ಷಿಣ ಮತ್ತು ಪೂರ್ವ ಚೀನ ಸಮುದ್ರ ಸಂಬಂಧಿಸಿದಂತೆ ಬ್ರೂನೈ, ಫಿಲಿಪೈನ್ಸ್, ಮಲೇಷ್ಯಾ, ವಿಯೆಟ್ನಾಂ, ತೈವಾನ್ ಜತೆಗೆ ಚೀನ ತಕರಾರು ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ಈ ರಾಷ್ಟ್ರಗಳ ಜತೆಗಿನ ವೈಮನಸ್ಸು ಮತ್ತಷ್ಟು ಹೆಚ್ಚಾಗಿದೆ. ಈ ನಡುವೆಯೇ ಪ್ರಧಾನಿ ಹೇಳಿಕೆ ಮಹತ್ವ ಪಡೆದಿದೆ.
ಬಾಹ್ಯಾಕಾಶ ಯೋಜನೆ ಉತ್ತೇಜನಕ್ಕೆ ಒಪ್ಪಂದ: ಬಾಹ್ಯಾಕಾಶ ಕ್ಷೇತ್ರದ ಕಾರ್ಯಾಚರಣೆಗೆ ಪರಸ್ಪರ ಬೆಂಬಲ ನೀಡುವ ನಿಟ್ಟಿನಲ್ಲಿ ಮೋದಿ ಮತ್ತು ಬೊಲ್ಕಿಯಾ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಉಪಗ್ರಹ ಮತ್ತು ಉಡಾವಣ ವಾಹನಗಳ ಅಭಿವೃದ್ಧಿಗಾಗಿ ಟೆಲಿಮಿಟರಿ ಟ್ರ್ಯಾಕಿಂಗ್ ಮತ್ತು ಟೆಲಿ ಕಮಾಂಡ್ ಸ್ಟೇಷನ್ಗಳಿಗೆ ಸಹಕಾರ ಒದಗಿಸಲು ಈ ಒಪ್ಪಂದ ಪ್ರಸ್ತಾವಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು
Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್: ಅಶ್ವಿನಿ ವೈಷ್ಣವ್
ಕಾಂಗ್ರೆಸ್ ನಾಯಿ ನಮ್ಮ ಕಾರ್ಯಕ್ರಮಕ್ಕೆ ಬಂದರೆ…: ಶಿವಸೇನೆ ಶಾಸಕನ ವಿವಾದಾತ್ಮಕ ಹೇಳಿಕೆ
One Nation, One Election ಅಸಂಭವ: ಕೇಂದ್ರ ಸಂಪುಟ ನಿರ್ಧಾರಕ್ಕೆ ಖರ್ಗೆ ವಿರೋಧ
Rahul Gandhi ವಿರುದ್ಧ ಕೇಂದ್ರ ಸಚಿವ, ಬಿಜೆಪಿಗರ ಹೇಳಿಕೆ;ದೇಶದ ವಿವಿಧೆಡೆ ಕೈ ಪ್ರತಿಭಟನೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.