Color Paradise: 1999ರಲ್ಲಿ ತೆರೆ ಕಂಡ “ಕಲರ್‌ ಪ್ಯಾರಡೈಸ್‌”


Team Udayavani, Sep 5, 2024, 4:12 PM IST

10-uv-fusion

ಇರಾನಿನ ಚಿತ್ರ ನಿರ್ದೇಶಕ ಮಜಿದ್‌ ಮಜಿದಿ ರೂಪಿಸಿರುವ ಸಿನಿಮಾ. 1999ರಲ್ಲಿ ತೆರೆ ಕಂಡದ್ದು. ಸಂಬಂಧಗಳಲ್ಲಿ ಸೂಕ್ಷ್ಮತೆಯನ್ನು ಹೇಳುವುದು ಅಥವಾ ಕಟ್ಟಿಕೊಡುವುದು ಅತ್ಯಂತ ಕಷ್ಟದ ಹಾಗೂ ನಾಜೂಕಿನ ಕೆಲಸ. ಅದನ್ನು ಯಾವಾಗಲೂ ಸಮರ್ಥವಾಗಿ ಮಜಿದ್‌ ಮಜಿದಿ ಮಾಡಬಲ್ಲರು. ಈ ಮಾತು ಅವರ ಚಿಲ್ಡ್ರನ್‌ ಆಫ್ ಹೆವನ್‌ನಿಂದ ಹಿಡಿದು ಹಲವು ಸಿನಿಮಾಗಳಲ್ಲಿ ಸಾಬೀತಾಗಿದೆ.

ದಿ ಕಲರ್‌ ಆಫ್ ಪ್ಯಾರಡೈಸ್‌ ಶೀರ್ಷಿಕೆಯೇ ಹೇಳುವಂತೆ ಸ್ವರ್ಗದ ಬಣ್ಣ ಯಾವುದು ಎನ್ನುವ ಕುತೂಹಲ ನಮ್ಮಲ್ಲಿ ಅರಳಿಸುವುದಿಲ್ಲವೇ. ಬದುಕಿನ ಉತ್ಸಾಹದ, ಜೀವನ ಪ್ರೀತಿಯ ಬಣ್ಣದ ಬಗ್ಗೆ ಪ್ರಶ್ನೆ ಎತ್ತಿದಾಗಲೂ ಅಷ್ಟೇ. ಅದೇ ಬಗೆಗಿನ ಬೆರಗು ಇದ್ದದ್ದೇ.

ಈ ಸಿನಿಮಾದಲ್ಲೂ ಮಜಿದ್‌ ಹೇಳಲು ಪ್ರಯತ್ನಿಸುವುದು ಮಾನವ ಸಂಬಂಧಗಳ ಬಣ್ಣದ ಕುರಿತಾಗಿಯೇ. ಅಂಧ ಬಾಲಕನೊಬ್ಬ (ಮೊಹಮ್ಮದ್‌) ಬದುಕನ್ನು ಪ್ರೀತಿಸುವ ಬಗೆ, ಆ ಅನನ್ಯತೆಯನ್ನು ಹೇಳಲು ಪ್ರಯತ್ನಿಸಿದ್ದಾನೆ ಮಜಿದ್‌. ಅಂಧನಾದರೂ ಒಳಗಣ್ಣಿನಿಂದಲೇ ಬದುಕಿನ ಸೌಂದರ್ಯವನ್ನು ತುಂಬಿಕೊಳ್ಳುತ್ತಾ, ಬಣ್ಣವನ್ನು ಬದುಕಿಗೆ ತುಂಬಿಕೊಳ್ಳುತ್ತಾ ಪ್ರಕೃತಿಯ ಪ್ರತಿ ಕಣ ಕಣವನ್ನೂ ಆನುಭವಿಸಲು ಪ್ರಯತ್ನಿಸುತ್ತಾನೆ. ದುಃಖ, ಸಂತೋಷಗಳನ್ನು ಅನುಭವದ ನೆಲೆಯಲ್ಲೇ ಗ್ರಹಿಸಲು ಯತ್ನಿಸುತ್ತಾ ಬದುಕಿನ ಸಾಧ್ಯತೆಗಳತ್ತ ಹೊರಳುತ್ತಾನೆ.

ಕರ್ಣ, ದೃಷ್ಠಿಗಿಂತ ಬದುಕನ್ನು ಅನುಭವಿಸಲು ಸೃಷ್ಠಿಯ ಆಗಾಧ ಸಾಧ್ಯತೆಯನ್ನು ತನ್ನೊಳಗೆ ಮರು ಸೃಷ್ಠಿಸುವ ಸಾಮರ್ಥ್ಯ ಇದ್ದವರು ಮಾತ್ರ ಬದುಕನ್ನು ಪೂರ್ತಿಯಾಗಿ ಅನುಭವಿಸಬಲ್ಲರು. ನದಿಯ ಹರವಿನ ನಾದವನ್ನು ಗ್ರಹಿಸಲು ಸಂಗೀತ ತಿಳಿಯುವುದಕ್ಕಿಂತ ಬದುಕಿನ ಲಯ ತಿಳಿದಿದ್ದರೆ ಸಾಕು. ಮೊಹಮ್ಮದ್‌ ಮತ್ತು ಮಜಿದ್‌ ಮಜಿದಿ ಈ ಸಿನಿಮಾದ ಮೂಲಕ ನಮಗೆ ಕಲಿಸಲು ಪ್ರಯತ್ನಿಸಿರುವುದು ಇದನ್ನೇ.

ಮಗನ ಕುರುಡುತನವೇ ತನ್ನ ಸುಖಕ್ಕೆಲ್ಲ ದೊಡ್ಡ ಅಡ್ಡಿ ಎನ್ನುವಂತೆ ಕಾಣುವ ಅಪ್ಪನಿಗೆ ಸಂಬಂಧದ ಮಹತ್ವವನ್ನೂ ಹೇಳುವ ಮೊಹಮ್ಮದ್‌, ಕೊನೆಗೂ ಕಲಿಸುವುದು ಬದುಕನ್ನು ಆಗಾಧವಾಗಿ ಪ್ರೀತಿಸುವುದನ್ನೇ. ಪುರಸ್ಕಾರಗಳನ್ನು ಪಡೆದಿರುವ ಈ ಸಿನಿಮಾ ನಮ್ಮೊಳಗಿನ ಸಣ್ಣ ವಿಷಾದಕ್ಕೆ ನೀರು ಸುರಿಯುತ್ತದೆ. ಸಂಬಂಧಗಳ ಮಳೆಯಲ್ಲಿ ಒದ್ದೆಯಾಗಿಸಬಲ್ಲ ಶಕ್ತಿ ಇರುವಂಥ ಸಿನಿಮಾ.

-ಅಪ್ರಮೇಯ

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.