Davanagere; ನನ್ನಅಳಿಯನನ್ನು ಬಿಟ್ಟು ಬಿಟ್ಟಿದ್ದರೆ ದರ್ಶನ್ ಗೆ….: ರೇಣುಕಾಸ್ವಾಮಿ ಮಾವ
Team Udayavani, Sep 5, 2024, 6:20 PM IST
ದಾವಣಗೆರೆ: ನನ್ನ ಹೆಂಡತಿ ಗರ್ಭಿಣಿ, ಬಿಟ್ಟು ಬಿಡಿ ಎಂದು ನನ್ನ ಅಳಿಯ ಕೈ ಮುಗಿದು ಕೇಳಿಕೊಂಡಾಗ ದರ್ಶನ್ ಇತರರು ಬಿಟ್ಟು ಬಿಟ್ಟಿದ್ದರೆ ಒಳ್ಳೆಯದಾಗುತ್ತಿತ್ತು… ಹೀಗೆಂದು ಹೇಳಿದವರು ದರ್ಶನ್ ಮತ್ತು ಗ್ಯಾಂಗ್ನಿಂದ ಕೊಲೆಗೀಡಾಗಿರುವ ರೇಣುಕಾಸ್ವಾಮಿ ಅವರ ಮಾವ (ಪತ್ನಿ ತಂದೆ) ಸೋಮಣ್ಣ.
ಗುರುವಾರ ಹರಿಹರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಮ್ಮ ಅಳಿಯ ಏನಾದರೂ ತಪ್ಪು ಮಾಡಿದ್ದರೆ ಕಾನೂನಿದೆ. ಅದರ ಪ್ರಕಾರ ಶಿಕ್ಷೆ ಆಗುತ್ತಿತ್ತು. ಆದರೆ, ಆಷ್ಟೊಂದು ಹೀನಾಯವಾಗಿ ನನ್ನ ಅಳಿಯನನ್ನು ಕೊಲೆ ಮಾಡಬಾರದಿತ್ತು” ಎಂದು ಕಣ್ಣೀರು ಹಾಕಿದರು.
ನನ್ನ ಅಳಿಯ ಹೆಂಡತಿ ಗರ್ಭಿಣಿ. ನನ್ನನ್ನು ಬಿಟ್ಟುಬಿಡಿ ಎಂದು ಕೈ ಮುಗಿದು ಕೇಳಿಕೊಂಡಾಗ ಮಾನವೀಯತೆಯಿಂದ ಬಿಟ್ಟಿದ್ದರೆ ಸಾಕಾಗಿತ್ತು. ಆದರೆ, ಯಾವುದೇ ಕನಿಕರ ಇಲ್ಲದೆ ಹೊಡೆದಿದ್ದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ನನ್ನ ಮಗಳು (ರೇಣುಕಾಸ್ವಾಮಿ ಪತ್ನಿ ಸಹನಾ) ಏಳು ತಿಂಗಳ ಗರ್ಭಿಣಿ. ನಮ್ಮ ಆರ್ಥಿಕ ಪರಿಸ್ಥಿತಿಯೂ ಚೆನ್ನಾಗಿಲ್ಲ. ಹೊಡೆಯುವಾಗ ಅವರು ನನ್ನ ಮಗಳು, ಆಕೆ ಗರ್ಭಿಣಿ ಎಂಬುದರ ಬಗ್ಗೆಯಾದರೂ ಯೋಚನೆ ಮಾಡಬೇಕಿತ್ತು ಎಂದರು.
ರೇಣುಕಾಸ್ವಾಮಿಗೂ ಹೆಂಡತಿ ಇದ್ದಾಳೆ. ಏನಾದರೂ ಆದರೆ ಪರಿಸ್ಥಿತಿ ಏನಾಗುತ್ತದೆ ಎಂದು ಯೋಚನೆ ಮಾಡಿದ್ದರೆ ಅವರಿಗೆ ಮತ್ತು ನಮಗೂ ಎಲ್ಲರಿಗೂ ಒಳ್ಳೆಯದಾಗುತ್ತಿತ್ತು. ಕೈ ಮುಗಿದು ಕೇಳಿಕೊಂಡರೂ ಬಿಟ್ಟಿಲ್ಲ ಎಂದರೆ ಅಂತಹವರನ್ನು ದೇವರೆ ನೋಡಿಕೊಳ್ಳಲಿ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.