Udupi ಗೀತಾರ್ಥ ಚಿಂತನೆ -28; ಧರ್ಮದ ಭಾವ religionನಲ್ಲಿಲ್ಲ
Team Udayavani, Sep 6, 2024, 12:53 AM IST
ಅಮೃತಮಥನ ಕಾಲದಲ್ಲಿ ಸುರಾಸುರರು ಜತೆಗೂಡಿ ಕಡೆದರೂ ಅಮೃತವನ್ನು ದೇವತೆಗಳಿಗೆ ಮಾತ್ರ ಕೊಟ್ಟದ್ದು ಎಷ್ಟು ಸರಿ ಎಂದು ಪ್ರಶ್ನಿಸುವವರಿದ್ದಾರೆ. ಅಮೃತ ಬಂದ ತತ್ಕ್ಷಣ ಅಮೃತಕಲಶವನ್ನು ಮೊದಲು ಎತ್ತಿಕೊಂಡು ಓಡಿಹೋದವರು ಅಸುರರು. ಅವರು ಮೊದಲೇ ಹಂಚಿಕೊಳ್ಳೋಣ ಎಂದು ಹೇಳಬಹುದಿತ್ತು.
ಹಾಗೆ ಯಾರಿಗೂ ಹೇಳದೆ ಕಳ್ಳತನ ಮಾಡಲು ಯತ್ನಿಸಿದರು. ಭಗವಂತ ಮೋಹಿನಿ ರೂಪದಲ್ಲಿ ಬಂದು ಏಕೆ ದೇವತೆಗಳಿಗೆ ಅಮೃತವನ್ನು ಕೊಡಿಸಬೇಕಿತ್ತು ಎಂದೂ ಪ್ರಶ್ನಿಸುತ್ತಾರೆ. ಮೇರು ಪರ್ವತವನ್ನು ಕಡೆಗೋಲಾಗಿ ಸುರಾಸುರರು ಕಡೆಯುತ್ತಿರುವಾಗ ಕೆಳಗೆ ಕೂರ್ಮರೂಪದಲ್ಲಿದ್ದು ರಕ್ಷಿಸಿದ್ದೇ ಭಗವಂತ. ಇಲ್ಲಿಯೂ ಅಮೃತಕಲಶದ ಮಾಲಕತ್ವ ಯಾರಿಗೆ ಸೇರಿದ್ದಾಯಿತು? ಭಗವಂತನಿಗೇ. ಆತನಿಗೆ ಸೇರಿದ ಅಮೃತವನ್ನು ಆತ ದೇವತೆಗಳಿಗೆ ಹಂಚಿದ, ತಪ್ಪೇನು? ಒಟ್ಟಾರೆ ಧರ್ಮದ ಅರ್ಥವೆಂದರೆ ಸಮಷ್ಟಿ ಹಿತ, ನನ್ನದಲ್ಲ ಎಂಬುದು.
ಆದ್ದರಿಂದಲೇ ಧರ್ಮ ಎನ್ನುವುದು religion ಗೆ ಸಮನಾಗದು, ಧಾರಕತ್ವ ಎಂಬ ಭಾವ ರಿಲಿಜಿಯನ್ ಶಬ್ದದಲ್ಲಿ ಬರುವುದಿಲ್ಲ. ಧರ್ಮಕ್ಕೆ ಅನೇಕ ವ್ಯಾಪ್ತಿ ಇದೆ. ಕರ್ಮವೂ ಇಷ್ಟೇ. ಧರ್ಮಕ್ಕೆ ಪುಣ್ಯ ಎಂಬರ್ಥವೂ ಇದೆ. “ಸರ್ವಧರ್ಮಾನ್ ಪರಿತ್ಯಜ್ಯ’ ಎನ್ನುವಾಗ “ಪುಣ್ಯ’, “ಫಲ’ ಎಂಬ ಅರ್ಥದಲ್ಲಿ ಬಳಸಲಾಗಿದೆ. ಭಿಕ್ಷುಕರು ಯಾಚಿಸುವಾಗ “ಧರ್ಮ ಮಾಡಿ’ ಎನ್ನುವುದು “ಧರ್ಮ ಮಾಡಿ ಪುಣ್ಯ ಕಟ್ಟಿಕೊಳ್ಳಿ’ ಎಂಬರ್ಥದಲ್ಲಿ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ
Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
Chaturmasya: ವಿಶ್ವಕರ್ಮ ಮ್ಯೂಸಿಯಂ ಸ್ಥಾಪನೆ ಗುರಿ: ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ
Child safety: ಮಕ್ಕಳ ರಕ್ಷಣ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ
Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
Dharmasthala: ಶೌರ್ಯ ಯೋಧರು ಆಪತ್ಕಾಲದ ಆಪ್ತ ರಕ್ಷಕರು: ಡಾ.ಡಿ.ವೀರೇಂದ್ರ ಹೆಗ್ಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.