Petrol, diesel ಬೆಲೆ ಹೆಚ್ಚಳ: ಹಿಮಾಚಲ ಬಳಿಕ ಈಗ ಪಂಜಾಬ್ಗೆ ಆರ್ಥಿಕ ಕಷ್ಟ
Team Udayavani, Sep 6, 2024, 6:45 AM IST
ಚಂಡೀಗಢ: ಸಿಎಂ ಭಗವಂತ್ ಸಿಂಗ್ ಮಾನ್ ನೇತೃತ್ವದ ಪಂಜಾಬ್ನ ಆಮ್ ಆದ್ಮಿ ಪಕ್ಷದ ಸರಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್(ಮೌಲ್ಯವರ್ಧಿತ ತೆರಿಗೆ) ಹೆಚ್ಚಳ ಮಾಡಿದೆ. ಅದರಂತೆ ಪೆಟ್ರೋಲ್ ಬೆಲೆ ಪ್ರತೀ ಲೀಟರ್ಗೆ 61 ಪೈಸೆ, ಡೀಸೆಲ್ ಬೆಲೆ 92 ಪೈಸೆ ಹೆಚ್ಚಳವಾಗಲಿದೆ.
ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ, ಸುಖೀÌಂದರ್ ಸಿಂಗ್ ಸುಖು ನೇತೃತ್ವದ ಹಿಮಾಚಲ ಪ್ರದೇಶ ಸರಕಾರದ ಬಳಿಕ ವಿಪಕ್ಷಗಳ ಆಡಳಿತದ ಮತ್ತೂಂದು ಸರಕಾರವೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆಯೇ ಎಂಬ ಪ್ರಶ್ನೆ ಮೂಡಿದೆ.
ಪಂಜಾಬ್ನಲ್ಲಿ ರಾಜ್ಯ ಸರಕಾರಿ ನೌಕರರ ಆಗಸ್ಟ್ ವೇತನ ಹಾಗೂ ಪಿಂಚಣಿ ಸಹ 4 ದಿನಗಳು ವಿಳಂಬವಾಗಿದ್ದು, ಪಂಜಾಬ್ ಆರ್ಥಿಕ ಸಂಕಷ್ಟದ ಬಗ್ಗೆ ಈಗ ಸಾಕಷ್ಟು ಚರ್ಚೆ ಆರಂಭವಾಗಿದೆ.
ವ್ಯಾಟ್ ಹೆಚ್ಚಳದಿಂದ ಪೆಟ್ರೋಲ್ನಿಂದ 150 ಕೊಟಿ ರೂ., ಡೀಸೆಲ್ನಿಂದ 395 ಕೋಟಿ ರೂ.ನಷ್ಟು ಆದಾಯ ಸರಕಾರಕ್ಕೆ ಬರಲಿದೆ. ರಾಜ್ಯದ ಪ್ರಸ್ತುತ ಆರ್ಥಿಕ ಸವಾಲುಗಳ ಬಗ್ಗೆ ಕಾರ್ಯತಂತ್ರ ರೂಪಿಸಲು ಈ ಸಂಪುಟ ಸಭೆ ಕರೆಯಲಾಗಿತ್ತು ಎಂದು ವರದಿಯಾಗಿದೆ. ಪಂಜಾಬ್ಗ 10 ಸಾವಿರ ಕೋಟಿ ರೂ.ನಷ್ಟು ಕೇಂದ್ರ ಸರಕಾರದ ನಿಧಿ ಬರಲು ಬಾಕಿ ಯಿದೆ. ಹೀಗಾಗಿ ವ್ಯಾಟ್ ಹೆಚ್ಚಳ ಮಾಡಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸಿಎಂ ಭಗವಂತ್ ಮಾನ್ ಮುಂದಾಗಿದ್ದಾರೆ ಎಂದು ಸರಕಾರ ತಿಳಿಸಿದೆ.
ವಿದ್ಯುತ್ ಸಬ್ಸಿಡಿಯೂ ಕಡಿತ: ಇದಲ್ಲದೇ ಪ್ರತೀ ಯುನಿಟ್ಗೆ 3 ರೂ. ವಿದ್ಯುತ್ ಸಬ್ಸಿಡಿ ನೀಡುವ ಹಿಂದಿನ ಕಾಂಗ್ರೆಸ್ ಸರಕಾರದ ಯೋಜನೆಯನ್ನೂ ಪಂಜಾಬ್ ಸರಕಾರ ರದ್ದುಗೊಳಿಸಿದೆ. ಇದರಿಂದ ಸರಕಾರಕ್ಕೆ ವರ್ಷಕ್ಕೆ 1,500-1,800 ಕೋಟಿ ರೂ. ಉಳಿತಾಯವಾಗಲಿದೆ ಎಂದು ಹೇಳಲಾಗಿದೆ. ಸರಕಾರದ ನಿರ್ಧಾರಕ್ಕೆ ವಿಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಆರೋಪ-ಪ್ರತ್ಯಾರೋಪ
ಕೇಂದ್ರ ಸರಕಾರದಿಂದ 10 ಸಾವಿರ ಕೋಟಿ ರೂ. ಬಾಕಿ ಇರುವ ಕಾರಣ ಈ ಕ್ರಮ: ಆಪ್ ಸರಕಾರ
ಆರ್ಥಿಕತೆ ನಿಭಾಯಿಸುವಲ್ಲಿ ಆಪ್ ಸರಕಾರ ವಿಫಲ: ಬಿಜೆಪಿ ಆರೋಪ
ಎರಡೂವರೆ ವರ್ಷಗಳಲ್ಲಿ ಆಪ್ ಪಂಜಾಬ್ ಅನ್ನು ದಿವಾಳಿಯಾಗಿಸಿದೆ ಎಂದು ಕಿಡಿ
ರಾಜ್ಯ ಸರಕಾರಿ ನೌಕರರ ಆಗಸ್ಟ್ ವೇತನ, ಪಿಂಚಣಿ ಸಹ 4 ದಿನಗಳು ವಿಳಂಬ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tirupati ತಿರುಪತಿ ಲಡ್ದು ಪ್ರಸಾದದಲ್ಲಿ ಬೀಫ್ ಫ್ಯಾಟ್!:ಲ್ಯಾಬ್ ವರದಿಯಲ್ಲಿ ದೃಢ
Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್ ಡೆಲಿವರಿ ಯುವಕ ಆತ್ಮಹತ್ಯೆ
Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
Jammu Kashmir: ಯುವಕರ ಕೈಯಲ್ಲೀಗ ಕಲ್ಲುಗಳಿಲ್ಲ, ಪೆನ್ನು-ಪುಸ್ತಕಗಳಿವೆ: ಪ್ರಧಾನಿ ಮೋದಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.