UV Fusion: ಅನುಕ್ತ ಭಾವನೆಗಳಿಗೆ ಸ್ಪಂದಿಸುವುದೇ ಜೀವನ


Team Udayavani, Sep 7, 2024, 3:00 PM IST

9-uv-fusion

ಮನುಷ್ಯಜೀವಿ ಅನಾದಿ ಕಾಲದಿಂದಲೂ ಸ್ನೇಹಜೀವಿ. ಹುಟ್ಟಿದಾಗಿಂದ ಮೋಕ್ಷದ ತನಕ ಕೂಡ ಹಲವಾರು ತರಹದ ಸ್ನೇಹ ಸಂಬಂಧಗಳ ಬೆಸುಗೆಯಲ್ಲಿ ಆತ ಜೋಡಣೆಯಾಗಿ ಬದುಕಿರುತ್ತಾನೆ. ಜತೆ ಜತೆಗೆ ತನಗರಿವಿಲ್ಲದಂತೆಯೇ ಹಲವಾರು ಭಾವನಾತ್ಮಕ ಸಂಕೋಲೆಗಳಲ್ಲಿ ಬಂಧಿಯಾಗಿರುತ್ತಾನೆ. ಪುರಾತನ ಭಾರತೀಯ ಸಂಪ್ರದಾಯದಲ್ಲಿ ಅವಿಭಕ್ತ ಕುಂಟುಂಬವು ಒಂದು ಮಮತೆಯ ಶಕ್ತಿಯಾಗಿತ್ತು ಮತ್ತು ವಿವಿಧ ಭಾವನೆಗಳಿಗೆ ವಿವಿಧ ರೀತಿಯಲ್ಲಿ ಸ್ಪಂದಿಸಿ ಪರಿಹಾರ ನೀಡುತ್ತಿತ್ತು.

ಹಿರಿಯ ಜೀವಿಗಳ ಜೀವನ ಮೌಲ್ಯದ ಮಾರ್ಗದರ್ಶನಗಳು, ತಂದೆಯವರಿಂದ ಕಲಿಯುತ್ತಿದ್ದ ವ್ಯಾಪಾರ ವಹಿವಾಟುಗಳ ಉಪಯುಕ್ತ ಮಾಹಿತಿಗಳು, ತಾಯಿಯಿಂದ ಕಲಿಯುತ್ತಿದ್ದ ಕರುಣೆ, ಪ್ರೀತಿ, ವಾತ್ಸಲ್ಯ ಮತ್ತು ಸಹೋದರ ಸಹೋದರಿಯರಿಂದ ಪಡೆಯುತ್ತಿದ್ದ ಸ್ನೇಹ ಸಹಕಾರ ಇವೆಲ್ಲದರ ಸಮಾನ ಪ್ರಮಾಣದ ಹೂರಣದಲ್ಲಿ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಬಹಳ ಅರ್ಥಪೂರ್ಣವಾಗಿ ವಿಕಸಿತಗೊಳಿಸಿಕೊಳ್ಳುತಿದ್ದ.

ಆದರೆ ಕಾಲ ಬದಲಾದಂತೆ ಆಧುನಿಕ ಯುಗದಲ್ಲಿ ಅವಿಭಕ್ತ ಕುಟುಂಬಗಳ ವೈಶಿಷ್ಟತೆಯ ವೈಭವ ನಶಿಸಿಹೋಗಿ ವಿಭಕ್ತ ಕುಟುಂಬವಾಗಿ ಮನುಷ್ಯ ಒಬ್ಬಂಟಿಯಾಗಿ ಭಾವನೆಗಳೇ ಸಿಗದೇ ನಿರ್ಗತಿಕನಾಗಿ ಬಿಟ್ಟಿದ್ದಾನೆ. ನಗರೀಕರಣದ ವ್ಯಾಮೋಹಕ್ಕೆ ಜೋತು ಬಿದ್ದು ಯಾಂತ್ರಿಕ ಬದುಕಿಗೆ ಬಲಿಯಾಗುತ್ತಿದ್ದಾನೆ. ತಂತ್ರಜ್ಞಾನದಲ್ಲೇ ಮುಳುಗಿ ಎದ್ದು ತನ್ನವರ ನಿರಂತರ ಹುಡುಕಾಟದಲ್ಲಿ ಹಲವಾರು ಬಾರಿ ಭಾವನಾತ್ಮಕವಾಗಿ ನೋವನ್ನು ಅನುಭವಿಸುತ್ತಿರುತ್ತಾನೆ.

ಹೇಗೆ ಚಿಕ್ಕ ಚಿಕ್ಕ ವಿಷಯಗಳು ಅದರಲ್ಲಿ ಬರುವ ವ್ಯಕ್ತಿಗಳು ಖುಷಿ ಕೊಡುತ್ತಾರೋ ಹಾಗೆಯೇ ನೋವನ್ನು ಕೂಡ ಕೆಲವೊಂದು ವಿಷಯಗಳು ವ್ಯಕ್ತಿಗಳು ಕೊಟ್ಟು ಹೋಗಿರುತ್ತಾರೆ. ಇಂತಹ ಸಂಧರ್ಭದಲ್ಲಿ ಮನುಷ್ಯ ಹಲವಾರು ದಾರಿಗಳಲ್ಲಿ ಸುಪ್ತ ಭಾವನೆಗಳನ್ನು ಹುಡುಕುವ ಪ್ರಯತ್ನ ಮಾಡುತ್ತಾನೆ. ಹಲವಾರು ಬಾರಿ ಸೋತರೂ ಕೊನೆಗೆ ಆತನ ಭಾವನೆಗಳಿಗೆ ಸ್ಪಂದಿಸುವ ಕೆಲವೊಂದು ಜೀವಗಳು ದೊರಕುತ್ತದೆ.ಅಲ್ಲಿ ಯಾವುದೇ ಕಲ್ಮಶ ಇರುವುದಿಲ್ಲ.

ಭಾವನೆಗಳಿಗೆ ಸ್ಪಂದಿಸಿ ಪರಿಹಾರ ನೀಡುತ್ತಾರೆ. ಭಾವನಾತ್ಮಕವಾಗಿ ನೊಂದು ಬೆಂದ ವ್ಯಕ್ತಿ ಈ ನಿಷ್ಕಲ್ಮಶ ವ್ಯಕ್ತಿತ್ವದಲ್ಲಿ ಬೆರೆತು ವಿಕಸಿತಗೊಳ್ಳುತ್ತಾನೆ. ಇಂತಹ ಅನುಕ್ತ ಭಾವನೆಗಳಿಗೆ ಸ್ಪಂದಿಸುವ ಮನಸ್ಸುಗಳು ಇವಾಗಲೂ ನಮ್ಮೊಂದಿಗೆ ಇವೆ ಆದರೆ ನಾವು ಸರಿಯಾಗಿ ಹುಡುಕಬೇಕಷ್ಟೆ. ಈ ಹಲವಾರು ರೀತಿಯ ಅನುಕ್ತ ಭಾವನೆಗಳ ಸಮ್ಮಿಶ್ರಣದ ಬಣ್ಣದಾಯಕ ಬದುಕು ನಮ್ಮದಾಗಲಿ.  ಪ್ರಸಾದ್‌ ಆಚಾರ್ಯ ಕುಂದಾಪುರ

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.