Ganesh Chaturthi: ಗಜಮುಖನೆ ಗಣಪತಿಯೇ ನಿನಗೆ ವಂದನೆ


Team Udayavani, Sep 8, 2024, 9:45 AM IST

4-ganapathi

ವಂದಿಪೆ ನಿನಗೆ ಗಣನಾಥ ಎಂಬ ಸ್ತುತಿಯೊಂದಿಗೆ ನಮ್ಮ ಬಾಲ್ಯದ ದಿನಗಳ ಆರಂಭ. ಗಣಪತಿ ಯನ್ನು ಆರಾಧಿಸದೆ ಇರುವ ಮನೆಯಿಲ್ಲ. ಯಾವುದೇ ಒಂದು ಶುಭಕಾರ್ಯ ಆರಂಭಗೊಳ್ಳಬೇಕಾದರೆ ಮೊದಲು ವಿಘ್ನ ನಿವಾರಕ ಗಣಾಧಿಪತಿಗೆ ಮೊದಲು ಪೂಜಿಸುವರು.

ಸಣ್ಣವರಿದ್ದಾಗ ಗಣೇಶ ಚತುರ್ಥಿ ಬಂತು ಎಂದರೆ ಅದೇನೋ ರೀತಿಯ ಸಂಭ್ರಮ. ಊರಿನಲ್ಲಿ ಮೂರು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮದೊಂದಿಗೆ ಆರಂಭಗೊಂಡು, ಮೂರನೇ ದಿನ ವಿಶೇಷ ಶೋಭಯಾತ್ರೆಯೊಂದಿಗೆ ಗಣೇಶನ ವಿಗ್ರಹವನ್ನು ಜಲಸ್ಥಂಭನಗೊಳಿಸಲಾಗುತ್ತದೆ.

ಡೊಳ್ಳು ಹೊಟ್ಟೆಯ, ಸಣ್ಣ ಕಣ್ಣಿನ ಕಿರೀಟ ತೊಟ್ಟು ಕೂತ ಸರ್ವಾಲಂಕಾರಭೂಷಿತ ಗಣೇಶನ ವಿಗ್ರಹವನ್ನು ನೋಡಿದಾಗ ಇದೇನು ದೇವರು ಕೂಡ ಇಷ್ಟೊಂದು ಮುದ್ದಾಗಿ ಸುಂದರವಾಗಿ ಇರುವನಲ್ಲಾ ಎಂದು ಅನಿಸುತ್ತಿತು.

ಅದೇನೋ ಗೊತ್ತಿಲ್ಲ ಕೊನೆಯ ದಿನ ಒಂದು ರೀತಿಯ ಬೇಸರದ ಭಾವನೆ ಮನದಲ್ಲಿ ಇರುತ್ತದೆ.

ನನಗಂತೂ ಸಣ್ಣವಳಿದ್ದಾಗ ಗಣಪತಿಯನ್ನು ನೀರಿನಲ್ಲಿ ವಿಸರ್ಜಿಸುವ ದಿನದಂದು ಮನದಲ್ಲಿ ಒಂದು ರೀತಿಯ ಗೊಂದಲ ಮಿಶ್ರಿತ ಬೇಸರವು ಮನೆ ಮಾಡಿರುತ್ತಿತ್ತು. ಅಯ್ಯೋ… ಪಾಪ…ಗಣಪತಿಯನ್ನು ನೀರಿನಲ್ಲಿ ಬಿಟ್ಟರೆ ಮುಳುಗಿ ಆತನಿಗೆ ಉಸಿರು ಗಟ್ಟಿದಂತಾಗುವುದಿಲ್ಲವೇ…? ಆತನಿಗೆ ಒಬ್ಬನಿಗೆ ಅದೆಷ್ಟು ಭಯವಾಗಿರಬಹುದು ಎಂಬ ಬೇಸರ ಒಂದೆಡೆಯಾದರೆ, ಇನ್ನೊಂದೆಡೆ ಅಮ್ಮ ಹೇಳುತ್ತಿದ್ದ ಗೌರಿಯು ಗಣೇಶನ ತಾಯಿ ತನ್ನ ತಾಯಿಯ ಬಳಿಗೆ ಮಗನನ್ನು ಸೇರಿಸಲಾಗುತ್ತದೆ ಎಂದು ಹೇಳುತ್ತಿದ್ದುದ್ದನ್ನು ಕೇಳಿ ಏನೋ ಸಮಾಧಾನದ ಭಾವ. ಹೀಗೆ ಅರ್ಥವಿಲ್ಲದ ಅನೇಕ ಪ್ರಶ್ನೆಗಳು ಮನದಲ್ಲಿ ಸುಳಿದಾಡುತ್ತಿದ್ದವು.

ಆ ವಯಸ್ಸೇ ಅಂತಹುದು. ಮುಗ್ಧತೆ ಬಿಟ್ಟರೆ ಬೇರೇನೂ ಇಲ್ಲ. ಮನೆಯಲ್ಲಿ ಗಣಪತಿಗೆಂದು ಇಟ್ಟ ಹಾಲನ್ನು ಗಣಪ ಕುಡಿಯುವನೇನೋ ಎಂದು ಕುತೂಹಲದಿಂದ ಕಾದು, ಕೊನೆಗೆ ಸಾಕಾಗಿ ಅಮ್ಮನ ಕಣ್ಣು ತಪ್ಪಿಸಿ ಹಾಲೆಲ್ಲ ಕುಡಿದು, ಅಮ್ಮಾ ಗಣಪತಿ ಹಾಲು ಕುಡಿದ ಎಂದು ಹೇಳಿಬಿಡುತ್ತಿದ್ದೆ.

ಮನೆಯಲ್ಲಿ ಎಲ್ಲರೂ ಚೌತಿ ಪೂಜೆ ಮಾಡುವುದರಲ್ಲಿ ಮುಳುಗಿದ್ದರೆ, ನಾನು ಮಾತ್ರ ಗಣೇಶನ ಎದುರಿನಲ್ಲಿ ಇಟ್ಟ ಸಿಹಿ ತಿಂಡಿಗಳನ್ನು ಬಾಚಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವುದು ಹೇಗೆ ಎಂಬ ನನ್ನದೇ ಆದ ಯೋಚನೆಯಲ್ಲಿ ತಲ್ಲೀನನಾಗಿರುತ್ತಿದ್ದೆ.

ಅಂದು ಮನೆಯಲ್ಲಿ ಮಾಡುತ್ತಿದ್ದ ಆ ಸಣ್ಣ ಪೂಜೆಯಲ್ಲಿ ಇರುತ್ತಿದ್ದ ಸಂಭ್ರವವು ಇಂದು ನಮ್ಮಷ್ಟು ಎತ್ತರವಾದ ವಿಗ್ರಹವನ್ನು ಇಟ್ಟು ಪೂಜಿಸುವ ಗಣೇಶೋತ್ಸವದಲ್ಲಿ ಪಾಲ್ಗೊಂಡಾಗಲೂ ಕೂಡ ಸಿಗುವುದಿಲ್ಲ.

ಕಾಲ ಬದಲಾದಂತೆ ಆಚರಣೆಗಳ ರೀತಿಯು ಬದಲಾಗುತ್ತಾ ಹೋಗುತ್ತದೆ ಮಾತ್ರವಲ್ಲದೇ ಆಚರಿಸು ಆಚರಣೆಯಲ್ಲಿ ಭಾಗಿಗಳಾಗುವವರ ಮನಸ್ಥಿತಿಯಲ್ಲಿಯು ಕೂಡ ಅನೇಕ ವ್ಯತ್ಯಾಸಗಳು ಉಂಟಾಗಿರುತ್ತದೆ.

 -ಪ್ರಸಾದಿನಿ ಕೆ. ತಿಂಗಳಾಡಿ

ಪುತ್ತೂರು

ಟಾಪ್ ನ್ಯೂಸ್

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.