Monti Fest: ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ಸಂಭ್ರಮದ ತೆನೆ ಹಬ್ಬ
Team Udayavani, Sep 8, 2024, 10:40 AM IST
ಶಿರ್ವ: ಉಡುಪಿ ಕೆಥೋಲಿಕ್ ಧರ್ಮಪ್ರಾಂತ್ಯದ ಶಿರ್ವ ವಲಯದ ಪ್ರಮುಖ ಚರ್ಚ್ ಶಿರ್ವ ಆರೋಗ್ಯ ಮಾತೆಯ ದೇವಾಲಯದಲ್ಲಿ ವಲಯದ ಪ್ರಧಾನ ಧರ್ಮಗುರು ರೆ|ಫಾ|ಡಾ| ಲೆಸ್ಲಿ ಡಿಸೋಜಾ ಅವರ ನೇತೃತ್ವದಲ್ಲಿ ತೆನೆ ಹಬ್ಬದ (ಮೊಂತಿ ಫೆಸ್ಟ್) ಸಂಭ್ರಮಾಚರಣೆ ಸೆ.8 ರಂದು ನಡೆಯಿತು.
ಭವ್ಯ ಮೆರವಣಿಗೆ
ಸಂತ ಮೇರಿ ಪ್ರೌಢ ಶಾಲೆಯ ಹಿಲಾರಿ ರಂಗಮಂಟಪದಲ್ಲಿ ತೆನೆಯಿರಿಸಿ ಮಾತೆ ಕನ್ಯಾ ಮೇರಿಯ ಮೂರ್ತಿಗೆ ಪ್ರಧಾನ ಧರ್ಮಗುರು ರೆ|ಫಾ|ಡಾ| ಲೆಸ್ಲಿ ಡಿಸೋಜಾ , ಸಹಾಯಕ ಧರ್ಮಗುರು ರೆ|ಫಾ| ರೋಲ್ವಿನ್ ಅರಾನ್ಹಾ ಮತ್ತು ರೆ|ಫಾ| ರೋಲ್ವಿನ್ ಪಿಂಟೋ ಪ್ರಾರ್ಥನಾ ವಿಧಿ ನೆರವೇರಿಸಿ ಭಕ್ತಾಧಿಗಳು ಮೂರ್ತಿಗೆ ಪುಷ್ಪಾರ್ಚನೆ ನಡೆಸಿದರು.
ಮಾತೆ ಕನ್ಯಾ ಮೇರಿಯ ಮೂರ್ತಿ ಮತ್ತು ತೆನೆಯನ್ನು ಮೆರವಣಿಗೆಯೊಂದಿಗೆ ಚರ್ಚ್ನವರೆಗೆ ಕೊಂಡೊಯ್ದ ಬಳಿಕ ಭಕ್ತರ ಉಪಸ್ಥಿತಿಯಲ್ಲಿ ಪ್ರಧಾನ ಧರ್ಮಗುರು ರೆ|ಫಾ|ಡಾ| ಲೆಸ್ಲಿ ಡಿಸೋಜಾ ಬಲಿ ಪೂಜೆ ನೆರವೇರಿಸಿ ಭಕ್ತಾಧಿಗಳಿಗೆ ತೆನೆ ವಿತರಿಸಿದರು.
ಸಹಾಯಕ ಧರ್ಮಗುರು ರೆ|ಫಾ| ರೋಲ್ವಿನ್ ಅರಾನ್ಹಾ ಆಶೀರ್ವಚನ ನೀಡಿ 9 ದಿನಗಳ ನೊವೆನಾ ಪ್ರಾರ್ಥನೆಯ ಬಳಿಕ ಮಾತೆ ಮೇರಿ ಜನ್ಮ ದಿನವನ್ನು ಕುಟುಂಬದ ಹಬ್ಬವನ್ನಾಗಿ ಆಚರಿಸುತ್ತಿದ್ದು,ಮಾತೆ ಮೇರಿಯು ಸರ್ವರನ್ನೂ ಹರಸಿ ಎಲ್ಲರ ಕೋರಿಕೆ ಈಡೇರಿಸಲಿ. ಭಕ್ತರು ಮಾತೆ ಮೇರಿಯ ಆದರ್ಶಗಳನ್ನು ಪಾಲಿಸಿಕೊಂಡು ಶಾಂತಿ ಸಹಬಾಳ್ವೆಯೊಂದಿಗೆ ಜೀವನ ನಡೆಸಿ ಎಂದು ಹೇಳಿದರು.
ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ಅರಾನ್ಹಾ, ಕಾರ್ಯದರ್ಶಿ ಫ್ಲೆàವಿಯಾ ಡಿಸೋಜಾ,ಸದಸ್ಯರಾದ ವಿಲ್ಸನ್ ರೊಡ್ರಿಗಸ್, ಜೂಲಿಯಾನ್ ರೊಡ್ರಿಗಸ್,ಮೋಹನ್ ನೊರೊನ್ಹಾ,ಚರ್ಚ್ ಆಯೋಗದ ಲೀನಾ ಮತಾಯಸ್, ಪ್ರಮುಖರಾದ ಪೀಟರ್ ಕೋರ್ಡಾ, ಮೈಕಲ್ ಡಿಸೋಜಾ,ಫೆಲಿಕ್ಸ್ ಡಿಸೋಜಾ, ಆಲ್ವಿನ್ ಡಿಸೋಜಾ, ಎಡ್ವರ್ಡ್ಮಿಸ್ಕಿತ್,ನೋರ್ಬರ್ಟ್ ಮಚಾದೋ, ಡೆನ್ನಿಸ್ ಲೋಬೋ, ಪ್ರೊ| ರೊನಾಲ್ಡ್ ಮೊರಾಸ್, ಚರ್ಚ್ನ ಪಾಲನಾ ಮಂಡಳಿ ಮತ್ತು ಆರ್ಥಿಕ ಸಮಿತಿಯ ಸದಸ್ಯರು, ನೇಟಿವಿಟಿ ಕಾನ್ವೆಂಟ್ನ ಧರ್ಮ ಭಗಿನಿಯರು,ವಿವಿಧ ವಾರ್ಡ್ಗಳ ಗುರಿಕಾರರು,ಭಕ್ತಾಧಿಗಳು ಉಪಸ್ಥಿತರಿದ್ದರು.
ಶಿರ್ವ ವಲಯದ ಪಿಲಾರು,ಪೆರ್ನಾಲು,ಪಾಂಬೂರು,ಕಳತ್ತೂರು ಮತ್ತು ಮೂಡುಬೆಳ್ಳೆ ಚರ್ಚುಗಳಲ್ಲಿ ಕೂಡಾ ಬಲಿಪೂಜೆಯೊಂದಿಗೆ ತೆನೆ ಹಬ್ಬದ ಸಂಭ್ರಮ ಸಂಪನ್ನಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Katapady:ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ವಾಹನ
Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ
Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.