Female: ಹೆಣ್ಣೆಂಬ ಕಿರೀಟ


Team Udayavani, Sep 8, 2024, 12:22 PM IST

12-uv-fusion

ಹೆಣ್ಣು..! ಹೆಣ್ಣಿನ ವರ್ಣನೆಯ ಬಗ್ಗೆ ಅನೇಕ ಸಾಹಿತಿಗಾರರು, ಕವಿಗಳು, ವಿದ್ವಾಂಸರು ಹಾಡಿ ಹೊಗಳಿದ್ದಾರೆ. ಅದಲ್ಲದೆ ಹೆಣ್ಣಿನ ವರ್ಣನೆಯ ಬಗ್ಗೆ ಲೇಖನಗಳು, ಸಂಗೀತಗಳು ಹಾಗೂ ಕಥೆಗಳ ಮೂಲಕ ವರ್ಣಿಸಲಾಗಿದೆ. ಮತ್ತು ಮುಂತಾದ ವಿಚಾರಗಳಿಗೆ ಹೆಣ್ಣನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ. ಹಿಂದಿನ ಕಾಲಘಟ್ಟದಲ್ಲಿ ಹೆಣ್ಣು ಮಗು ಹುಟ್ಟಿದ ಕೂಡಲೇ ಅದು ಹೆಣ್ಣಿಂದು ತಿಳಿದ ತಕ್ಷಣ ನಾನಾ ತರಹದ ಮಾತುಗಳನ್ನಾಡಿ ಆ ಮಗುವಿನ ಭವಿಷ್ಯವನ್ನು ಅಂದೇ ನಿರ್ಧರಿಸಿಬಿಡುತ್ತಾರೆ.

ಆ ಮಗು ಇನ್ನು ಮದುವೆಯಾಗಿ ಗಂಡನ ಮನೆಗೆ ಹೋಗುವವಳು. ಆದರೆ ಗಂಡು ಮಗುವಾಗಿದ್ದರೆ ಆ ಮಗು ಇನ್ನೂ ಚೆನ್ನಾಗಿ ಓದಿ ನಂತರ ಸರಕಾರಿ ಕೆಲಸ ಸಿಕ್ಕಿ ತನ್ನ ತಂದೆ -ತಾಯಿಯನ್ನು ನೋಡಿಕೊಳ್ಳುತ್ತಾನೆ ಎಂದು. ಕೊನೆಗಾಲದಲ್ಲಿ ಆತ ತಂದೆ ತಾಯಿಗೆ ಆಸರೆಯಾಗಿರುತ್ತಾನೆ ಎಂಬ ನಂಬಿಕೆ.

 ಹೆಣ್ಣಿನ ಕಷ್ಟದ ಹಾದಿ..!

ಹೆಣ್ಣಿನ ಪರಿಸ್ಥಿತಿಯಲ್ಲಿ ನಿಂತು ನೋಡಿದರೆ ಇನ್ನೂ ವಿದ್ಯಾಭ್ಯಾಸ ಮಾಡಬೇಕು. ನಾನು ಸಮಾಜದಲ್ಲಿ ಎಲ್ಲರಂತೆ ಬದುಕಬೇಕು. ನನಗೂ ಒಂದು ಕೆಲಸ ಸಿಕ್ಕಿ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುವಷ್ಟರಲ್ಲಿ ಅಷ್ಟು ಬೇಗ ಮದುವೆ ಮಾಡುತ್ತಿದ್ದಾರೆ ಎಂಬ ನೋವು ಆ ಹೆಣ್ಣಿನ ಮನಸ್ಸಿಗೆ ಬಂದುಬಿಡುತ್ತದೆ. ತನ್ನ ಅಪ್ಪ ಅಮ್ಮನ ಒತ್ತಾಯದ ಮೇರೆಗೆ ಮದುವೆಗೆ ಒಪ್ಪಿಗೆ ಕೊಡುತ್ತಾಳೆ.

ಆದರೆ ಮದುವೆ ಆದ ಮೇಲೆ ಅವಳ ಮುಂದಿನ ಜೀವನ ನರಕಕ್ಕಿಂತ ತುಂಬಾನೇ ಕಠಿನವಾಗಿರುತ್ತದೆ. ಒಂದು ಕಡೆ ಅಪ್ಪ ಅಮ್ಮನ ಆಸರೆ ಇಲ್ಲ. ಇನ್ನೊಂದು ಕಡೆ ವಿದ್ಯಾಭ್ಯಾಸ ಇಲ್ಲ. ಹೀಗೆ ಹೆಣ್ಣು ಒಂದಿಷ್ಟು ಮೂಢನಂಬಿಕೆಗಳಿಂದ ತನ್ನ ಜೀವನವನ್ನು ಕಣ್ಣೀರಲ್ಲಿ ಕಳೆಯುತ್ತಾ ಇರುತ್ತಾಳೆ. ಇದು ಅವಳ ತಪ್ಪಲ್ಲ ಸಮಾಜವು ಹೆಣ್ಣಿನ ಬಗ್ಗೆ ತಪ್ಪು ಕಲ್ಪನೆಯನ್ನು ಇಟ್ಟುಕೊಂಡಿರುವುದು ತಪ್ಪಾಗಿದೆ.

 ಹೆಣ್ಣಿನ ಸಾಧನೆಯ ಹಾದಿ..!

ಹೆಣ್ಣನ್ನು ಪ್ರಾಯೋಗಿಕವಾಗಿ ನೋಡಿದರೆ ಗಂಡಸರಿಗಿಂತ ಹೆಣ್ಣು ಮಕ್ಕಳು ಈಗ ತುಂಬಾನೇ ಮುಂದುವರೆಯುತ್ತಿದ್ದಾರೆ. ಗಂಡಸರಿಗಿಂತ ನಾವೇನು ಕಮ್ಮಿ ಇಲ್ಲ ಎಂಬ ರೀತಿಯಲ್ಲಿ ತಮ್ಮ ಕೆಲಸಗಳಲ್ಲಿ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಹೆಣ್ಣು ಮಕ್ಕಳು ಮನಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬ ಆತ್ಮ ವಿಶ್ವಾಸ ಅವರಲ್ಲಿದೆ. ಹೆಣ್ಣು ಮಕ್ಕಳು ಸಾಧನೆಯ ಹಾದಿಯಲ್ಲಿ ಮುನ್ನುಗುತ್ತಿದ್ದಾರೆ.

ಈ ಒಂದು ಛಲವೇ ಹೆಣ್ಣು ಮಕ್ಕಳನ್ನು ಉನ್ನತ ಸ್ಥಾನಗಳಿಗೆ ಕರೆದುಕೊಂಡು ಹೋಗಲು ಕಾರಣವಾಗಿದೆ. ಹೆಣ್ಣು ಮಕ್ಕಳು ಡಾಕ್ಟರ್‌, ಇಂಜಿನಿಯರಿಂಗ್‌, ಲಾಯರ್‌, ಪೋಲಿಸ್‌ ಮುಂತಾದ ಉದ್ಯೋಗಗಳಲ್ಲಿ ತಮ್ಮ ಯಶಸ್ಸನ್ನು ಕಾಣುತ್ತಿದ್ದಾರೆ. ಹಾಗಾಗಿ ಯಾರು ಕೂಡ ಮೇಲು ಕೀಳಲ್ಲ. ಹೆಣ್ಣುಗಳು, ಗಂಡುಗಳು ಎಲ್ಲರೂ ಸಮಾಜದ ಮುಂದೆ ಸಮಾನರೆ. ಗಂಡಿಗೆ ಈ ಸಮಾಜದಲ್ಲಿ ಎಷ್ಟು ಹಕ್ಕು ಉಂಟೋ, ಅಷ್ಟೇ ಹಕ್ಕು ಹೆಣ್ಣಿಗೂ ಕೂಡ ಇದೆ ಎನ್ನುವುದನ್ನು ಮರೆಯಬಾರದು.

ಮೌಲ್ಯ ಶೆಟ್ಟಿ

ಎಸ್‌ಡಿಎಂ ಉಜಿರೆ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.