UV Fusion: ಬನ್ನಿ ಅಡುಗೆ ಮಾಡೋಣ!


Team Udayavani, Sep 8, 2024, 4:30 PM IST

22-food

ಇತ್ತೀಚಿಗೆ ಜಗತ್ತು ಸುಗಮ ಜೀವನಕ್ಕಾಗಿ ಹೊಸ ಹೊಸ ದಾರಿಗಳನ್ನು ಹಿಡಿಯುತ್ತಿದೆ. ಅದು ತಂತ್ರಜ್ಞಾನವೇ ಆಗಿರಬಹುದು ಅಥವಾ ಇನ್ಯಾವುದೋ. ಆದರೆ ಸುಗಮ ಜೀವನಕ್ಕಾಗಿ ಹಿಂದಿನ ಜೀವನದಲ್ಲಿದ್ದ ಕೆಲವೊಂದು ಖುಷಿ ಬಾಂಧವ್ಯವನ್ನು ನಾವುಗಳು ಎಲ್ಲೋ ಮರೆಯುತ್ತಿದ್ದೇವೆ. ಇದಕ್ಕೆ ಉದಾಹರಣೆ ಸಾವಿರ ಇರಬಹುದು. ನನ್ನ ಅನುಭವ ಮತ್ತು ನಾನು ಕಂಡ ಒಂದು ವಿಷಯ ಅಂದರೆ ಅದು ಮದುವೆ ಮನೆಯ ಅಡುಗೆ!

ಒಂದು ಮನೆಯಲ್ಲಿ ಮದುವೆ ಅಂದರೆ ಊರಿಗೆ ಊರೇ ಸಂಭ್ರಮದಲ್ಲಿರುತ್ತಿತ್ತು. ಗೆಳೆಯರು, ಸಂಬಂಧಿಕರು ಎಲ್ಲರೂ ಕೈ ಜೋಡಿಸಿ ತಯಾರಿ ನಡೆಯುತ್ತಿತ್ತು. ಇನ್ನು ಮದುವೆ ಮನೆಯವರ ಸಂಭ್ರಮ ಹೇಳಿ ಮುಗಿಯುವಂಥದ್ದಲ್ಲ ಬಿಡಿ. ಅದರಲ್ಲೂ ಮಧ್ಯಮ ವರ್ಗದ ಜನರಿಗೆ ಮದುವೆ ಕಾರ್ಯಕ್ರಮ ನಡೆಸುವುದು ಎಂದರೆ ಸಣ್ಣ ವಿಚಾರ ಅಲ್ವೇ ಅಲ್ಲ. ಆರು ತಿಂಗಳ ಹಿಂದೆಯೇ ತಯಾರಿ ಶುರು. ಇನ್ನು ಮದುವೆಯ ದಿನ ಮನೆಯೊಳಗಡೆ ಹುಡುಗಿಯರೆಲ್ಲಾ ಒಂದು ದಿನಕ್ಕೆ ಕನ್ನಡಿ ಪ್ರೇಮಿಗಳಾಗಿರುತ್ತಾರೆ. ಹೊರಗಿನ ಜವಾಬ್ದಾರಿಯೆಲ್ಲಾ ಹುಡುಗರದ್ದೇ. ಎಲ್ಲ ಜವಾಬ್ದಾರಿಗಳಲ್ಲೂ ದೊಡ್ಡ ಜವಾಬ್ದಾರಿ ಎಂದರೆ ಅದು ಅಡುಗೆ. ಉಳಿದ ದಿನಗಳೆಲ್ಲಾ ಹೆಂಗಸರೇ ಅಡುಗೆ ಮಾಡಿದರೆ ಆ ಒಂದು ದಿನ ಮಾತ್ರ ಸಂಭ್ರಮದ ಅಡುಗೆ ಹುಡುಗರದ್ದು.

ಮುಂಜಾನೆ ನಾಲ್ಕು ಗಂಟೆಗೆ ಎದ್ದು ಶುಚಿಯಾಗಿ ಬಂದು ಗಣಪನಿಗೆ ಅಕ್ಕಿ ತೆಂಗಿನಕಾಯಿ ಇಟ್ಟು ಭಕ್ತಿಯಿಂದ ಪ್ರಾರ್ಥಿಸಿ ಒಲೆಗೆ ಬೆಂಕಿ ಹಚ್ಚಿದ ಅನಂತರ ಶುರು ಮಾಡಿದರೆ ಮತ್ತೆ ಆ ದಿನದ ಸಂಧ್ಯಾ ಸಮಯದವರೆಗೂ ಪಾತ್ರೆ ಸದ್ದೇ ಡೋಲು ವಾದ್ಯ, ಅಡುಗೆ ಪರಿಮಳವೇ ಸುಗಂಧ ದ್ರವ್ಯ, ಅಡುಗೆ ಮಾಡುವಾಗ ಆದ ಮಸಿಯೇ ಆ ದಿನದ ಬಟ್ಟೆಯ ಚಂದ. ತರಕಾರಿ ತುಂಡರಿಸುವವರು ಒಂದು ಗುಂಪಾದರೆ ಮಸಾಲೆ ಅರೆಯುವವರು ಇನ್ನೊಂದು ಗುಂಪು. ಹೀಗೆ ಪ್ರತಿಯೊಂದಕ್ಕೂ ಒಂದೊಂದು ಗುಂಪು. ಇದರ ನಡುವೆ ತಿನ್ನಲು ಏನಾದರು ಸಿಗುವುದಾ ಎಂದು ಬಾಯಿ ಚಪ್ಪರಿಸುತ್ತಾ ಬಿಸಿ ಪಾತ್ರೆಯ ನಡುವೆ ಬರುವ ಮಕ್ಕಳ ಗುಂಪು. ಮಕ್ಕಳಿಗೆ ಕೋಲು ಹಿಡಿದು ಗದರಿಸಲು ಹಿರಿಯರಲ್ಲೊಂದು ಗುಂಪು.

ಅಡುಗೆ ರುಚಿಯಾದಾಗ ಸಿಗುವ ಖುಷಿ, ಒಂಚೂರು ತಪ್ಪಾದಾಗ ಆಗುವ ಬೇಸರ, ಕೆಲಸ ತಡವಾದಾಗ ಕೆಲಸ ಕೇಳುವ ಹಾಸ್ಯ ಬೈಗುಳ, ಹೊರಗಿನ ನೆಂಟರು ಬಂದು ಮಾಡುವ ತಮಾಷೆಗೆ ಬರುವ ನಗು ಎಲ್ಲವೂ ಆ ದಿನ ಮನೆಯ ಹಿಂಬದಿಯಲ್ಲಿ ಸಿಗುತ್ತದೆ. ಹುಡುಗರೆಂದರೆ ಹಾಗೆ ತಾನೆ. ಸಾವಿರ ತಲೆನೋವಿದ್ದರೂ ಸಂಭ್ರಮ ಬಂದಾಗ ಎಲ್ಲವನ್ನೂ ಮರೆತು ಬಿಡುತ್ತಾರೆ. ಇಷ್ಟೇ ಅಲ್ಲ ಅಡುಗೆ ಮಾಡಿದ ಮೇಲೆ ಬಡಿಸುವವರಾರು? ಅದೂ ಹುಡುಗರೇ!

ಅರ್ಧ ದಿನ ಮನೆ ಹಿಂಭಾಗದಲ್ಲಿ ಕಳೆದ ನಮಗೆ ಅನ್ನ ಬಡಿಸಲು ನಿಲ್ಲುವಾಗಲೇ ಹೊಸ ಸಂಬಂಧಿಕರ ಪರಿಚಯವಾಗುವುದು. ಅದರಲ್ಲೂ ಕೆಲವೊಂದು ಹಿರಿಯರ ತಮಾಷೆ ಇರುತ್ತೆ. ಎಲ್ಲರಲ್ಲಾಯ್ತು ನಿಂದ್ಯಾವಾಗ ಮದುವೆ. ಅವರ ಮಾತಿಗೆ ಉತ್ತರ ಕೊಡೋದ ಬೇಡ್ವಾ ಎನ್ನೋ ಉಪ ಪ್ರಶ್ನೆ ನಮ್ಮಲ್ಲಿ.

ಎಲ್ಲ ಮುಗಿದ ಅನಂತರ ಮಗಳನ್ನು ಇನ್ನೊಂದು ಮನೆಗೆ ಕಳುಹಿಸುವಾಗ ತಾಯಿಗೆ ಎಷ್ಟು ನೋವಾಗುತ್ತೋ ಅಷ್ಟೇ ನೋವು ನಮಗೆ ಅಡುಗೆ ಪಾತ್ರೆ ತೊಳೆಯಬೇಕು ಅಂದಾಗ ಆಗುವುದು. ಅದಾದ ಅನಂತರ ಅಡುಗೆ ಮನೆಯ ಕಸ ಗುಡಿಸೋದು ಇನ್ನೊಂದು ತಲೆನೋವು. ಎಲ್ಲ ಮುಗಿದು ಊಟ ಮಾಡೋವಾಗ ಸೂರ್ಯನಿಗೂ ಸುಸ್ತಾಗಿರುತ್ತೆ. ಎಲ್ಲ ಆದ ಮೇಲೆ ರಾತ್ರಿ ಮಲಗಲು ಹುಡುಗರೆಲ್ಲರೂ ಅಂಗಳದಲ್ಲಿ ಚಾಪೆ ಹಾಕಿ ಮಲಗೋವಾಗ ಆ ದಿನದ ತಮಾಷೆ ಸಂದರ್ಭ ಹೇಳಿ ನಕ್ಕು ನಕ್ಕು ಹೊಟ್ಟೆ ನೋವು ಶುರುವಾಗಿಬಿಡುತ್ತೆ.

ಈ ಎಲ್ಲ ಅಡುಗೆ ಸಂಭ್ರಮ ಈಗ ಕ್ಯಾಟರಿಂಗ್‌ ಎಂಬ ಆಧುನಿಕತೆಯ ಪಾಲಾಗಿದೆ. ಹಾಗಂತ ಕ್ಯಾಟರಿಂಗ್‌ ತಪ್ಪು ಅಂತ ಹೇಳ್ಳೋದಲ್ಲ. ಒತ್ತಡ ಸುಧಾರಿಸಲು ಈ ರೀತಿ ಮಾಡುವುದೆಲ್ಲಾ ಅಗತ್ಯವೇ. ಆದರೆ ನಾವು ಎಲ್ಲೋ ಒಂದು ಕಡೆ ನಮ್ಮ ಹಿಂದಿನ ಸಂಸ್ಕೃತಿ ಅಡಗಿದ ಮನೆ ಅಡುಗೆಯನ್ನು ಮರೆಯುತ್ತಿದ್ದೇವೋ ಅನಿಸುತ್ತಿದೆ. ನಾವು ಸಣ್ಣ ವಯಸ್ಸಿನಲ್ಲಿ ಅಡುಗೆ ಎಂದಾಗ ಓಡೋಡಿ ಬರುತ್ತಿದ್ದ ಕಾಲ ನಿಧಾನವಾಗಿ ಇತಿಹಾಸ ಸೇರುತ್ತಿದೆ.

 -ದೀಪಕ್‌

ವಿ.ವಿ. ಕಾಲೇಜು, ಹಂಪನಕಟ್ಟೆ

ಟಾಪ್ ನ್ಯೂಸ್

ಪ್ರತೀ ಪೇಜರ್‌ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್‌ನ ಮೊಸಾದ್‌?

ಪ್ರತೀ ಪೇಜರ್‌ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್‌ನ ಮೊಸಾದ್‌?

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

Mohana Singh: ತೇಜಸ್‌ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್‌ ಆಗಿ ಮೋಹನಾ ಸಿಂಗ್‌ ನೇಮಕ

Mohana Singh: ತೇಜಸ್‌ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್‌ ಆಗಿ ಮೋಹನಾ ಸಿಂಗ್‌ ನೇಮಕ

TTD: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು: ನಾಯ್ಡು ಆರೋಪಕ್ಕೆ YSR ಕಾಂಗ್ರೆಸ್ ತಿರುಗೇಟು

Laddoo: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು… YSR ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ

Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ

Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ

3-rabakavi

Rabkavi Banhatti: ತೇರಿನ ಮೇಲಿನಿಂದ ಬಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ಪ್ರತೀ ಪೇಜರ್‌ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್‌ನ ಮೊಸಾದ್‌?

ಪ್ರತೀ ಪೇಜರ್‌ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್‌ನ ಮೊಸಾದ್‌?

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

Mohana Singh: ತೇಜಸ್‌ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್‌ ಆಗಿ ಮೋಹನಾ ಸಿಂಗ್‌ ನೇಮಕ

Mohana Singh: ತೇಜಸ್‌ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್‌ ಆಗಿ ಮೋಹನಾ ಸಿಂಗ್‌ ನೇಮಕ

TTD: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು: ನಾಯ್ಡು ಆರೋಪಕ್ಕೆ YSR ಕಾಂಗ್ರೆಸ್ ತಿರುಗೇಟು

Laddoo: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು… YSR ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ

Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ

Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.