Udupi ಗೀತಾರ್ಥ ಚಿಂತನೆ-31; ದುಷ್ಟರಲ್ಲಿಯೂ ಸೂಕ್ತವರ್ಗ
Team Udayavani, Sep 10, 2024, 1:05 AM IST
ಮಹಾಭಾರತ ಯುದ್ಧ ಧರ್ಮಸಂಗ್ರಾಮ. ಇದರಲ್ಲಿ ಭಾಗವಹಿಸುವುದು ಅರ್ಜುನನಿಗೆ ಸ್ವಧರ್ಮಭೂತವಾದುದು. ಮನುಷ್ಯನಿಗೆ ಸ್ವಧರ್ಮಭೂಷಿತವಾದ ಅವಕಾಶ ಸಿಕ್ಕಿಯೇ ಸಿಗುತ್ತದೆ. ಏಕೆಂದರೆ ಸ್ವಧರ್ಮವಿಲ್ಲದ ವ್ಯಕ್ತಿಯೇ ಜಗತ್ತಿನಲ್ಲಿರುವುದಿಲ್ಲ. ಇಂತಹ ಅವಕಾಶ ಸಿಕ್ಕಿದಾಗ ಅದನ್ನು ಎಂದೆಂದಿಗೂ ಬಿಡಬಾರದು, ಬಿಟ್ಟರೆ ಕೇವಲ ಅವಕಾಶವಂಚಿತನಾಗುವುದು ಮಾತ್ರವಲ್ಲ, ಪಾಪಕರವೂ ಹೌದು. ಅರ್ಜುನನಿಗೂ ಅಧರ್ಮದ ವಿರುದ್ಧ ಹೋರಾಡುವ ಸ್ವಧರ್ಮ ಆಚರಿಸಲು ಅವಕಾಶ ಎದುರು ಬಂದಾಗ ಕೈಚೆಲ್ಲಿ ಕುಳಿತ. ಶತ್ರುಗಳಲ್ಲಿಯೂ ಅತಿ ಸೂಕ್ತ ಶತ್ರುಗಳೆಂಬ ವರ್ಗವಿದೆಯೋ ಎಂದರೆ ಆಶ್ಚರ್ಯವಾಗಬಹುದು.
ಅಂತಹ ಶತ್ರು ಅರ್ಜುನನಿಗೆ ದುರ್ಯೋಧನನ ಕಡೆಯವರು ಸಿಕ್ಕಿದ್ದರು, ಭಾರತಕ್ಕೆ ಪಾಕಿಸ್ಥಾನ ಸಿಕ್ಕಿದ ಹಾಗೆ. ಕೆಲವರು ಕೆಲವು ಸಮಯದಲ್ಲಿ ಕೆಟ್ಟವರಂತೆ ಪ್ರಭಾವಲಯದ ಕಾರಣದಿಂದ ವರ್ತಿಸಬಹುದು. ಆದರೆ ಪಾಕಿಸ್ಥಾನದವರು ಹಾಗಲ್ಲ, ದುರ್ಯೋಧನನಂತೆ ಸರ್ವಾತ್ಮನಾ ಕೆಟ್ಟವರು. ಅದೊಂದು ತರಹ ದಾಯಾದಿ ಕಲಹ, ಇದೊಂದು ತರಹ ದಾಯಾದಿ ಕಲಹ.
ಇಂತಹವರನ್ನು ಹೊಡೆದರೆ ಪುಣ್ಯವೇ ವಿನಾ, ಪಾಪದ ಸೋಂಕೇ ಇಲ್ಲ. ಗೀತೆಯನ್ನು ಮೂರೇ ಅಕ್ಷರಗಳಲ್ಲಿ ಸಂಗ್ರಹಿಸಿ ಹೇಳಿ ಅಂದರೆ “ಸ್ವಧರ್ಮ’ ಎಂದು ಹೇಳಬಹುದು. ಇದುವೇ ಗೀತೆಯ ಮೊದಲಕ್ಷರ “ಧರ್’+ ಕೊನೆಯಕ್ಷರ “ಮ’ ಜತೆ ಸೇರಿ ಧರ್ಮ ಉಂಟಾಗುವುದು. ಧರ್ಮವೆಂದರೆ ಸ್ವಧರ್ಮವೇ,eligion ಅಲ್ಲ, ಪ್ರತಿಯೊಬ್ಬನಿಗೂ ತನ್ನದೇ ಆದ ಧರ್ಮ ಇದ್ದೇ ಇರುತ್ತೆ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Katapady:ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ವಾಹನ
Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ
Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ಪ್ರತೀ ಪೇಜರ್ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್ನ ಮೊಸಾದ್?
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Mohana Singh: ತೇಜಸ್ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್ ಆಗಿ ಮೋಹನಾ ಸಿಂಗ್ ನೇಮಕ
Laddoo: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು… YSR ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ
Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.