Puttur ರಸ್ತೆ: ಕಂಡ ಕಂಡಲ್ಲಿ ಹೊಂಡ; ಸಂಚಾರಕ್ಕೆ ಪರದಾಡುವ ಸ್ಥಿತಿ
ತಾತ್ಕಾಲಿಕ ದುರಸ್ತಿ ನಡೆದರೂ ಅಲ್ಲಿ ಮತ್ತಷ್ಟು ಗುಂಡಿ ; ಹೊಸ ನಗರಾಡಳಿತಕ್ಕೆ ರಸ್ತೆ ನಿರ್ವಹಣೆಯೇ ದೊಡ್ಡ ಸವಾಲು
Team Udayavani, Sep 10, 2024, 12:22 PM IST
ಪುತ್ತೂರು: ಜಿಲ್ಲಾ ಕೇಂದ್ರ ಸ್ಥಾನವಾಗುವ ನಿರೀಕ್ಷೆಯಲ್ಲಿರುವ ಪುತ್ತೂರು ನಗರದ ಮುಖ್ಯ ರಸ್ತೆಯು ಹದಗೆಟ್ಟಿದ್ದು ಸಂಚಾರದ ಸ್ಥಿತಿ ಮಾತ್ರ ಶೋಚನಿಯವಾಗಿದೆ.
ಬೊಳುವಾರಿನಿಂದ ದರ್ಬೆ ತನಕ ಮುಖ್ಯ ರಸ್ತೆಯ ಅಲ್ಲಲ್ಲಿ ಹೊಂಡ ಸೃಷ್ಟಿಯಾಗಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ದರ್ಬೆ ಸರ್ಕಲ್, ಕಲ್ಲಾರೆ, ಗಾಂಧಿಕಟ್ಟೆ, ಅಂಚೆ ಕಚೇರಿ ಮುಂಭಾಗ, ಹಳೆ ಮಯೂರ ಥಿಯೇಟರ್ ಬಳಿ, ಬೊಳುವಾರು ಸರ್ಕಲ್ ಬಳಿ ರಸ್ತೆ ತುಂಬ ಹೊಂಡ ತುಂಬಿ ಬಹಳ ದಿನಗಳಾದವು. ತಾತ್ಕಾಲಿಕ ದುರಸ್ತಿ ನಡೆಸಿರುವ ಸ್ಥಳಗಳಲ್ಲಿ ಅವು ಎದ್ದು ಹೋಗಿ ಮತ್ತಷ್ಟು ಹೊಂಡ ಸೃಷ್ಟಿಯಾಗಿದೆ.
ಸಂಪರ್ಕ ರಸ್ತೆ
ಮುಖ್ಯ ರಸ್ತೆಯಿಂದ ಕವಲೊಡೆದು ಹೋಗಿರುವ ಹತ್ತಾರು ಸಂಪರ್ಕ ರಸ್ತೆಗಳಲ್ಲೂ ಹೊಂಡಗಳೇ ರಸ್ತೆಯ ತುಂಬ ಚದುರಿಕೊಂಡಿದೆ. ಶ್ರೀಧರ್ ಭಟ್ ಅಂಗಡಿ ಬಳಿಯಿಂದ ಕಲ್ಲಿಮಾರ್ ತನಕ ಕೆಲವು ತಿಂಗಳ ಹಿಂದೆ ಹೊಸದಾಗಿ ಡಾಮರು ಹಾಸುವ ಕಾಮಗಾರಿ ನಡೆಸಿದ್ದು ಅದು ಅರ್ಧದಲ್ಲೇ ಬಾಕಿಯಾದ ಕಾರಣ ಜಲ್ಲಿ ಎದ್ದು ಸಂಚಾರವೇ ದುಸ್ತರ ಎನಿಸಿದೆ.
ಕೆಸರು ನೀರು
ನಗರದ ಪ್ರಧಾನ ಅಂಚೆ ಕಚೇರಿ ಬಳಿಯ ಪ್ರಯಾಣಿಕರ ತಂಗುದಾಣದ ಮುಂಭಾಗ ಹಲವು ಹೊಂಡಗಳು ಸೃಷ್ಟಿಯಾಗಿವೆ. ದಿನ ನಿತ್ಯ ನೂರಾರು ಮಂದಿ ಇಲ್ಲಿ ಬಸ್ಗಾಗಿ ಕಾಯುತ್ತಿದ್ದು ಕೆಲವೊಮ್ಮೆ ಕೆಸರು ನೀರಿನ ಅಭಿಷೇಕ ಆಗುವುದೂ ಇದೆ.
ಹೊಸ ತಂಡಕ್ಕೆ ಸವಾಲು
ನಗರಸಭೆಗೆ ಈಗಾಗಲೇ ಹೊಸ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಆಗಿದೆ. ಅಧಿಕಾರಿಗಳ ಸುಪರ್ದಿಯಲ್ಲಿದ್ದ ಅಧಿಕಾರ ಈಗ ಜನಪ್ರತಿನಿಧಿಗಳ ಕೈಗೆ ದೊರಕಿದೆ. ಮುಖ್ಯ ರಸ್ತೆಗಳ ಹೊಂಡಗಳು ಹೊಸ ತಂಡವನ್ನು ಸ್ವಾಗತಿಸುತ್ತಿದ್ದು ಅದಕ್ಕೆ ಪರಿಹಾರ ಕಾಣುವ ಸವಾಲು ಅವರ ಮುಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.