Byndoor:ಹೆಣ್ಣು ಮಗು ಜನಿಸಿದ್ದಕ್ಕೆ ಸೊಸೆಗೆ ಅತ್ತೆ, ಮಾವ,ಅತ್ತಿಗೆಯಿಂದ ವರದಕ್ಷಿಣೆ ಕಿರುಕುಳ
ಜೀವನಳಿಗೆ ಅಡುಗೆ ಮಾಡಲು ಮನೆ ಒಳಗೆ ಹೋಗಲು ಬಿಡದೆ ಕಿರುಕುಳ
Team Udayavani, Sep 10, 2024, 1:38 PM IST
ಉಡುಪಿ: ಬೈಂದೂರಿನ ಯಡ್ತರೆ ಗ್ರಾಮದ ಜೀವನ (33ವರ್ಷ) ಎಂಬಾಕೆ 2018ರಲ್ಲಿ ಯೋಗೇಂದ್ರ ಕುಮಾರ್ ಎಂಬವರ ಜೊತೆ ವಿವಾಹವಾಗಿದ್ದು, ದಂಪತಿಗೆ ಹೆಣ್ಣು ಮಗು ಜನಿಸಿದ್ದಕ್ಕೆ ಅತ್ತಿಗೆ, ಅತ್ತೆ ವರದಕ್ಷಿಣೆ ಕಿರುಕುಳ ನೀಡಿರುವ ಪ್ರಕರಣ ಬೈಂದೂರು ಠಾಣೆಯಲ್ಲಿ ದಾಖಲಾಗಿದೆ.
ಏನಿದು ಪ್ರಕರಣ:
ಜೀವನ, ಯೋಗೇಂದ್ರ ಕುಮಾರ್ ದಂಪತಿಗೆ 2021ರಲ್ಲಿ ಹೆಣ್ಣು ಮಗು ಜನಿಸಿತ್ತು. ಬಳಿಕ ಅತ್ತಿಗೆಗೆ ಗಂಡು ಮಗುವಾಗಿತ್ತು. ಇದರ ಪರಿಣಾಮ ಅತ್ತೆ ನಿರ್ಮಲಾ ಮಂಜುನಾಥ್, ಅತ್ತಿಗೆ ಪೂಜಾ ಜೀವನಳಿಗೆ ಕಿರುಕುಳ ನೀಡಲು ಆರಂಭಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:Kolkata Case: ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಿ-ಮಮತಾ ವಿರುದ್ಧ ಭುಗಿಲೆದ್ದ ಜನಾಕ್ರೋಶ
ಜೀವನ ವರದಕ್ಷಿಣೆ ಹಾಗೂ ಚಿನ್ನಾಭರಣ ತರಲಿಲ್ಲ ಎಂದು ಅತ್ತಿಗೆ ಪೂಜಾ ಹಂಗಿಸಿ ಮಾತನಾಡಿ, ಮನೆಯಿಂದ ಹೊರ ಹೋಗುವಂತೆ ಕಿರುಕುಳ ನೀಡುತ್ತಿದ್ದರು. ಜೀವನಳ ಮಾವ ಮಂಜುನಾಥ್ ಬೈಂದೂರು ಗಂಡನಿಗೆ ಕರೆ ಮಾಡದಂತೆ ತಾಕೀತು ಮಾಡಿದ್ದರು. ಪೂಜಾಳ ಗಂಡ ಲೋಹಿತ್ ಉಪ್ಪುಂದ ಕೂಡಾ ತನ್ನ ಹೆಂಡತಿ ಪೂಜಾ ನೀಡುತ್ತಿದ್ದ ಕಿರುಕುಳಕ್ಕೆ ಕುಮ್ಮಕ್ಕು ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿತರು ಎಲ್ಲಾ ಸೇರಿ ಜೀವನಳಿಗೆ ಅಡುಗೆ ಮಾಡಲು ಮನೆ ಒಳಗೆ ಹೋಗಲು ಬಿಡದೆ, ಹಿಯಾಳಿಸಿ ಮನೆಯಿಂದ ವರದಕ್ಷಿಣೆ ಹಣ ಮತ್ತು ಚಿನ್ನಾಭರಣ ತರುವಂತೆ ಕಿರುಕುಳ ನೀಡಿರುವುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.