Manipal: ಟೆಲಿಗ್ರಾಂ App-ಹೂಡಿಕೆ ನೆಪದಲ್ಲಿ 8 ಲಕ್ಷಕ್ಕೂ ಅಧಿಕ ಹಣ ವಂಚನೆ; ದೂರು ದಾಖಲು
ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಮಾತ್ರ ಲಾಭಾಂಶ ತೆಗೆಯಲು ಆಗುತ್ತದೆ
Team Udayavani, Sep 10, 2024, 2:45 PM IST
ಮಣಿಪಾಲ:ಟೆಲಿಗ್ರಾಮ್ Appನಲ್ಲಿ ಶಿಪ್ ಇಟ್ ಎಂಬ ರಿವ್ಯೂ ಆಪ್ ನ ಮೆಹೆಕ್ ಮೆಹೆರಾ ಎಂಬ ಗ್ರೂಪ್ ನಲ್ಲಿ 10,000 ಹಣ ಹೂಡಿದಲ್ಲಿ 8,000 ರೂಪಾಯಿ ಲಾಭ ನೀಡುವುದಾಗಿ ನಂಬಿಸಿ ಮಹಮ್ಮದ್ ಶರೀಫ್ ಎಂಬವರಿಗೆ 8 ಲಕ್ಷಕ್ಕೂ ಅಧಿಕ ಹಣವನ್ನು ವಂಚಿಸಿರುವ ಪ್ರಕರಣ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಏನಿದು ಪ್ರಕರಣ:
ಮೆಹೆಕ್ ಮೆಹೆರಾ ಎಂಬ ಟೆಲಿಗ್ರಾಮ್ ಗ್ರೂಪ್ ನಲ್ಲಿ 10,000 ಹಣ ಹೂಡಿದಲ್ಲಿ 8,000 ಲಾಭ ನೀಡುತ್ತೇವೆ ಎಂಬ ಸಂದೇಶ ಮಹಮ್ಮದ್ ಶರೀಫ್ ಅವರ ಮೊಬೈಲ್ ಗೆ ಬಂದಿತ್ತು. ಅದರಂತೆ ಶರೀಫ್ ಎಸ್ ಬಿಐ ಖಾತೆಯಿಂದ ಯೋನೋ App ಮೂಲಕ ಶಿಪ್ ಇಟ್ ಎಂಬ ರಿವ್ಯೂ ಟ್ರೇಡ್ ಗೆ 10, 000 ರೂ. ಹೂಡಿಕೆ ಮಾಡಿದ್ದರು.
ಅದರಂತೆ ಮೆಹೆಕ್ ಮೆಹೆರಾ Appನವರು 18,000 ರೂಪಾಯಿಯನ್ನು ಮಹಮ್ಮದ್ ಶರೀಫ್ ಅವರ ಯೂನಿಯನ್ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದರು. ನಂತರ ಶರೀಫ್ 2/09/2024ರಂದು 21,418 ರೂಪಾಯಿ ಹೂಡಿಕೆ ಮಾಡಿದ್ದರು. ಆದರೆ ಮೆಹೆಕ್ ಮೆಹೆರಾ Appನವರು ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಮಾತ್ರ ಲಾಭಾಂಶ ತೆಗೆಯಲು ಆಗುತ್ತದೆ ಎಂದು ನಂಬಿಸಿ ಮೆಸೇಜ್ ಮಾಡಿದ್ದು, ಅದರಂತೆ ಶರೀಫ್ ಹೂಡಿಕೆ ಮಾಡಿದ್ದರು. Appನಲ್ಲಿ ಶರೀಫ್ ಲಾಭಾಂಶ 15,00,000 ಎಂದು ತೋರಿಸುತ್ತಿತ್ತು.
ಆದರೆ ಶರೀಫ್ ಹಣ ಡ್ರಾ ಮಾಡಲು ಪ್ರಯತ್ನಿಸಿದಾಗ, ಏಳೂವರೆ ಲಕ್ಷ ಹಣ ಪೆನಾಲ್ಟಿ ಕಟ್ಟಿ ಉಳಿದ ಹಣ ಡ್ರಾ ಮಾಡಬೇಕು ಎಂದು ಮೆಸೇಜ್ ಬಂದಿದ್ದು, ಹೆಚ್ಚಿನ ಲಾಭಾಂಶ ನೀಡುವುದಾಗಿ ಮೋಸ ಮಾಡಿ 8,46,583 ರೂಪಾಯಿ ಹಣವನ್ನು App ಖಾತೆಗೆ ಮೋಸದಿಂದ ವರ್ಗಾಯಿಸಿಕೊಂಡಿರುವುದಾಗಿ ಮಣಿಪಾಲ ಪೊಲೀಶ್ ಠಾಣೆಗೆ ಶರೀಫ್ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Katapady:ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ವಾಹನ
Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ
Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು
Traffic: ಆಗುಂಬೆ ಘಾಟಿಯಲ್ಲಿ ವಾಹನ ಬ್ರೇಕ್ ಫೇಲ್, ಟ್ರಾಫಿಕ್ ನಲ್ಲಿ ಸಿಲುಕಿದ ಆಂಬ್ಯುಲೆನ್ಸ್
West Bengal: ಪ್ರವಾಹ ಪರಿಸ್ಥಿತಿ ಅವಲೋಕಿಸಲು ಹೋದ ಸಂಸದರು, ಶಾಸಕರಿದ್ದ ದೋಣಿ ಪಲ್ಟಿ
ಪ್ರತೀ ಪೇಜರ್ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್ನ ಮೊಸಾದ್?
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.